ಸುಷ್ಮಾರನ್ನು ಇನ್ನಿಲ್ಲದಷ್ಟು ಮಿಸ್ ಮಾಡಿಕೊಳ್ಳುತ್ತೇನೆ: ಅಡ್ವಾಣಿ
ನವದೆಹಲಿ, ಆಗಸ್ಟ್ 07: "ಅವರು ನನ್ನ ಜನ್ಮದಿನದಂದು ಯಾವತ್ತಿಗೂ ಮರೆಯದೆ ನನ್ನಿಷ್ಟದ ಚಾಕೋಲೇಟ್ ಕೇಕ್ ಹಿಡಿದು ಬರುತ್ತಿದ್ದುದನ್ನು ಹೇಗೆ ಮರೆಯಲಿ..? ಆಕೆಯ ಅಕಾಲಿಕ ಮರಣ ನನಗೆ ವ್ಯಕ್ತಪಡಿಸಲಾರದಷ್ಟು ಆಘಾತವನ್ನು ನೀಡಿದೆ. ಆಕೆಯನ್ನು ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ತಮ್ಮ ಆಪ್ತ ಒಡನಾಡಿ ಸುಷ್ಮಾ ಸ್ವರಾಜ್ ಅವರನ್ನು ನೆನೆದು ಭಾವುಕರಾಗಿದ್ದಾರೆ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ.
ಚಿತ್ರಗಳಲ್ಲಿ ಸುಷ್ಮಾ ಸ್ವರಾಜ್ ಅಂತಿಮ ದರ್ಶನ
"ನನ್ನ ಆತ್ಮೀಯ ಸಹೋದ್ಯೋಗಿಗಳಲ್ಲಿ ಸುಷ್ಮಾ ಪ್ರಮುಖರು. ಆಕೆ ಬಿಜೆಪಿಯಲ್ಲಿ ಕೆಲಸ ಆರಂಭಿಸಿದಾಗಿನಿಂದಲೂ ನಾನು ಆಕೆಯನ್ನು ಬಲ್ಲೆ. ನಾನು ಬಿಜೆಪಿ ಅಧ್ಯಕ್ಷರಾಗಿದ್ದಾಗ ಅವರು ಬಿಜೆಪಿಯ ಯುವ ನಾಯಕಿಯಾಗಿ ನಮ್ಮ ತಂಡವನ್ನು ಸೇರಿಕೊಂಡರು" ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು ಮಾಜಿ ಉಪಪ್ರಧಾನಿ ಅಡ್ವಾಣಿ.
"ಆಕೆಯಲ್ಲಿದ್ದ ಅತ್ಯುತ್ಸಾಹ, ದೇಶಸೇವೆಯ ತುಡಿತದಿಂದ ಆಕೆ ಎಲ್ಲ ಮಹಿಳೆಯರ ಆದರ್ಶವಾಗಿ ಬೆಳೆದರು. ನಮ್ಮ ಪಕ್ಷದ ಅತ್ಯಂತ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡರು. ಒಬ್ಬ ಪ್ರಖರ ವಾಗ್ಮಿಯಾಗಿದ್ದ ಅವರು, ಎಂಥ ಸಂದರ್ಭದಲ್ಲೂ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುವ, ತಮ್ಮ ಅಭಿಪ್ರಾಯದ ಬಗ್ಗೆ ಸಾಕಷ್ಟು ಸ್ಪಷ್ಟತೆ ಹೊಂದಿದ್ದ ನಾಯಕಿ" ಎಂದು ಮೆಚ್ಚುಗೆ ಸೂಚಿಸಿದರು.

"ಒಬ್ಬ ರಾಜಕಾರಣಿ ಮಾತ್ರವಲ್ಲದೆ, ಆಕೆ ಒಬ್ಬ ಶ್ರೇಷ್ಠ ವ್ಯಕ್ತಿ. ತಮ್ಮ ಅಕ್ಕರೆ ತುಂಬಿದ ಮಾತು, ಪ್ರೀತಿ ತುಂಬಿದ ನಡೆಯಿಂದ ಎಲ್ಲರ ಹೃದಯವನ್ನೂ ಸ್ಪರ್ಶಿಸಬಲ್ಲ ತಾಕತ್ತಿದ್ದವರು ಸುಷ್ಮಾ. ಅವರು ಎಷ್ಟೇ ಬ್ಯಸಿಯಾಗಿದ್ದಿರಲಿ, ನನ್ನ ಜನ್ಮದಿನದಂದು ನನ್ನಿಷ್ಟದ ಚಾಕೋಲೇಟ್ ಕೇಕ್ ಹಿಡಿದು ಬರುತ್ತಿದ್ದುದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎನ್ನುವಾಗ ಅಡ್ವಾಣಿ ಅವರ ಕಣ್ಣಂಚಿನಲ್ಲಿ ಅರಿವಿಲ್ಲದೆ ನೀರು ಇಣುಕುತ್ತದೆ!
"ಈ ದೇಶ ಒಬ್ಬ ಮಹಾನ್ ನಾಯಕಿಯನ್ನು ಕಳಲೆದುಕೊಂಡಿದೆ. ನನ್ನ ಪ್ರಕಾರ ಇದು ತುಂಬಲಾರದ ನಷ್ತ. ನಾನಂತೂ ಸುಷ್ಮಾ ಜೀ ಅವರ ಗೈರು ಹಾಜರಿಯನ್ನು ಇನ್ನಿಲ್ಲದಷ್ಟು ಮಿಸ್ ಮಾಡಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸ್ವರಾಜ್ ಜೀ, ಬಾಂಸುರಿ ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೂ ನನ್ನ ಸಂತಾಪಗಳು. ಓಂ ಶಾಂತಿ" ಎಂದು ಅಡ್ವಾಣಿ ಸಂತಾಪ ಸೂಚಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications