ತಿಂಡಿಪ್ರಿಯರೇ ಎಚ್ಚರ; ಮೊಮೊಸ್ ತಿನ್ನುವಾಗ ಉಸಿರುಗಟ್ಟಿ ವ್ಯಕ್ತಿ ಸಾವು
ನವದೆಹಲಿ, ಜೂನ್ 15: ಡಂಪ್ಲಿಂಗ್ ಅಥವಾ ಮೊಮೊಸ್ ತಿನ್ನುವಾಗ ಉಸಿರುಗಟ್ಟಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ AIIMS ನಿಂದ ಆರೋಗ್ಯ ಎಚ್ಚರಿಕೆ ನೀಡಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಭಾರತದ ಅಚ್ಚುಮೆಚ್ಚಿನ ತಿಂಡಿ ಮೊಮೊಸ್ ಕುರಿತು ಕೆಲ ಸಲಹೆಯನ್ನು ನೀಡಿದೆ.
AIIMS ಫೋರೆನ್ಸಿಕ್ ತಜ್ಞರು ವ್ಯಕ್ತಿಯ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿದಿದ್ದಾರೆ. ಬಳಿಕ ವೈದ್ಯಕೀಯ ಸಂಸ್ಥೆ ಎಲ್ಲರಿಗೂ ಮೊಮೊಸ್ ಎಚ್ಚರಿಕೆಯಿಂದ ತಿನ್ನಲು ಮತ್ತು ನುಂಗಲು ಸಲಹೆ ನೀಡಿದೆ.
ವ್ಯಕ್ತಿ ಪಾನಮತ್ತನಾಗಿದ್ದ ಎಂದು ನಂಬಲಾಗಿದೆ ಮತ್ತು ರಸ್ತೆ ಬದಿಯ ಅಂಗಡಿಯಲ್ಲಿ ಮೊಮೊಸ್ ತಿನ್ನುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದಿದ್ದಾನೆ. ಬಳಿಕ ಆತನನ್ನು ದೆಹಲಿಯ ಏಮ್ಸ್ಗೆ ತರಲಾಯಿತು ಎಂದು ವರದಿಯಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವ್ಯಕ್ತಿಯ ಶ್ವಾಸನಾಳದ ತೆರೆಯುವಿಕೆಯಲ್ಲಿ ಡಂಪ್ಲಿಂಗ್ ಪತ್ತೆಯಾಗಿದೆ. ಹೀಗಾಗಿ ಅವರು ಉಸಿರುಗಟ್ಟಿಸುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಗಂಟಲಿನಲ್ಲಿ ಕಂಡುಬಂದ ಮೊಮೊಸ್ ಉಸಿರುಗಟ್ಟಿಸಿ ವ್ಯಕ್ತಿ ಸಾವಿನ ಕಾರಣವನ್ನು ನ್ಯೂರೋಜೆನಿಕ್ ಕಾರ್ಡಿಯಾಕ್ ಅರೆಸ್ಟ್ ಎಂದು ತೀರ್ಮಾನಿಸಲಾಗಿದೆ.
ಭಾರತದಾದ್ಯಂತ ಪ್ರತಿಯೊಂದು ರಸ್ತೆಬದಿಯ ಅಂಗಡಿಗಳು ಮತ್ತು ಹೈ-ಎಂಡ್ ರೆಸ್ಟೋರೆಂಟ್ಗಳಲ್ಲಿ ಕಂಡುಬರುವ ಜನಪ್ರಿಯ ಖಾದ್ಯವನ್ನು ತಿನ್ನುವ ಕುರಿತು AIIMS ಸಲಹೆಯನ್ನು ನೀಡಿದೆ.

ಉಸಿರುಗಟ್ಟುವಿಕೆ ಎಂದರೆ ಶ್ವಾಸನಾಳದಲ್ಲಿ ಅಡಚಣೆಯಿರುವ ಸ್ಥಿತಿ. ನಾವು ಏನಾದರೂ ದೊಡ್ಡದನ್ನು ತಿಂದಾಗ, ಅದು ಆಹಾರದ ಪೈಪ್ ಅಥವಾ ಶ್ವಾಸನಾಳವನ್ನು ನಿರ್ಬಂಧಿಸುತ್ತದೆ. ಅಂತಹ ಆಹಾರವನ್ನು ನುಂಗುವ ಮೊದಲು ಅದನ್ನು ಸರಿಯಾಗಿ ಅಗಿಯಲು ಸೂಚಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications