ತಿಂಡಿಪ್ರಿಯರೇ ಎಚ್ಚರ; ಮೊಮೊಸ್ ತಿನ್ನುವಾಗ ಉಸಿರುಗಟ್ಟಿ ವ್ಯಕ್ತಿ ಸಾವು
ನವದೆಹಲಿ, ಜೂನ್ 15: ಡಂಪ್ಲಿಂಗ್ ಅಥವಾ ಮೊಮೊಸ್ ತಿನ್ನುವಾಗ ಉಸಿರುಗಟ್ಟಿ 50 ವರ್ಷದ ವ್ಯಕ್ತಿ ಸಾವನ್ನಪ್ಪಿದ ಅಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ AIIMS ನಿಂದ ಆರೋಗ್ಯ ಎಚ್ಚರಿಕೆ ನೀಡಲಾಗಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಭಾರತದ ಅಚ್ಚುಮೆಚ್ಚಿನ ತಿಂಡಿ ಮೊಮೊಸ್ ಕುರಿತು ಕೆಲ ಸಲಹೆಯನ್ನು ನೀಡಿದೆ.
AIIMS ಫೋರೆನ್ಸಿಕ್ ತಜ್ಞರು ವ್ಯಕ್ತಿಯ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿದಿದ್ದಾರೆ. ಬಳಿಕ ವೈದ್ಯಕೀಯ ಸಂಸ್ಥೆ ಎಲ್ಲರಿಗೂ ಮೊಮೊಸ್ ಎಚ್ಚರಿಕೆಯಿಂದ ತಿನ್ನಲು ಮತ್ತು ನುಂಗಲು ಸಲಹೆ ನೀಡಿದೆ.
ವ್ಯಕ್ತಿ ಪಾನಮತ್ತನಾಗಿದ್ದ ಎಂದು ನಂಬಲಾಗಿದೆ ಮತ್ತು ರಸ್ತೆ ಬದಿಯ ಅಂಗಡಿಯಲ್ಲಿ ಮೊಮೊಸ್ ತಿನ್ನುತ್ತಿದ್ದಾಗ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದಿದ್ದಾನೆ. ಬಳಿಕ ಆತನನ್ನು ದೆಹಲಿಯ ಏಮ್ಸ್ಗೆ ತರಲಾಯಿತು ಎಂದು ವರದಿಯಾಗಿದೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವ್ಯಕ್ತಿಯ ಶ್ವಾಸನಾಳದ ತೆರೆಯುವಿಕೆಯಲ್ಲಿ ಡಂಪ್ಲಿಂಗ್ ಪತ್ತೆಯಾಗಿದೆ. ಹೀಗಾಗಿ ಅವರು ಉಸಿರುಗಟ್ಟಿಸುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತೀರ್ಮಾನಿಸಿದ್ದಾರೆ. ಗಂಟಲಿನಲ್ಲಿ ಕಂಡುಬಂದ ಮೊಮೊಸ್ ಉಸಿರುಗಟ್ಟಿಸಿ ವ್ಯಕ್ತಿ ಸಾವಿನ ಕಾರಣವನ್ನು ನ್ಯೂರೋಜೆನಿಕ್ ಕಾರ್ಡಿಯಾಕ್ ಅರೆಸ್ಟ್ ಎಂದು ತೀರ್ಮಾನಿಸಲಾಗಿದೆ.
ಭಾರತದಾದ್ಯಂತ ಪ್ರತಿಯೊಂದು ರಸ್ತೆಬದಿಯ ಅಂಗಡಿಗಳು ಮತ್ತು ಹೈ-ಎಂಡ್ ರೆಸ್ಟೋರೆಂಟ್ಗಳಲ್ಲಿ ಕಂಡುಬರುವ ಜನಪ್ರಿಯ ಖಾದ್ಯವನ್ನು ತಿನ್ನುವ ಕುರಿತು AIIMS ಸಲಹೆಯನ್ನು ನೀಡಿದೆ.

ಉಸಿರುಗಟ್ಟುವಿಕೆ ಎಂದರೆ ಶ್ವಾಸನಾಳದಲ್ಲಿ ಅಡಚಣೆಯಿರುವ ಸ್ಥಿತಿ. ನಾವು ಏನಾದರೂ ದೊಡ್ಡದನ್ನು ತಿಂದಾಗ, ಅದು ಆಹಾರದ ಪೈಪ್ ಅಥವಾ ಶ್ವಾಸನಾಳವನ್ನು ನಿರ್ಬಂಧಿಸುತ್ತದೆ. ಅಂತಹ ಆಹಾರವನ್ನು ನುಂಗುವ ಮೊದಲು ಅದನ್ನು ಸರಿಯಾಗಿ ಅಗಿಯಲು ಸೂಚಿಸಲಾಗಿದೆ.
(ಒನ್ಇಂಡಿಯಾ ಸುದ್ದಿ)
-
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು?












Click it and Unblock the Notifications