ದೀಪಾಲಂಕಾರವಿಲ್ಲದೆ ಬಿಕೋ ಎನ್ನುತ್ತಿರುವ ಶ್ರೀರಂಗಪಟ್ಟಣ: ಜನರ ಆಕ್ರೋಶ
ಶ್ರೀರಂಗಪಟ್ಟಣ, ಸೆಪ್ಟೆಂಬರ್, 28: ಶ್ರೀರಂಗಪಟ್ಟಣ ದಸರಾ ವೇಳೆ ಪ್ರಮುಖ ಬೀದಿಗಳಲ್ಲಿ ಯಾವುದೇ ವಿದ್ಯುತ್ ದೀಪಾಲಂಕಾರ ಹಾಗೂ ತಳಿರು ತೋರಣಗಳನ್ನು ಸರಿಯಾಗಿ ಅಳವಡಿಸಿಲ್ಲ. ಅಧಿಕಾರಿಗಳು ದಸರಾವನ್ನು ಕಾಟಾಚಾರಕ್ಕೆ ಮಾಡಿದಂತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರನ್ನು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ದಸರಾಗೆ ಪೂರ್ವ ಸಿದ್ದತೆಯನ್ನು ಕೈಗೊಂಡಿಲ್ಲ. ಇನ್ನು 15 ದಿನ ಮುಂದಿರುವ ಕೆ.ಆರ್.ಪೇಟೆಯ ಕುಂಭಮೇಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗುವ ಮೂಲಕ ಶ್ರೀರಂಗಪಟ್ಟಣ ದಸರಾವನ್ನು ಕಡೆಗಣಿಸಿದ್ದೀರಿ. ಶ್ರೀರಂಗಪಟ್ಟಣ ದಸರಾ ಕೇವಲ ಶ್ರೀರಂಗಪಟ್ಟಣಕ್ಕೆ ಮಾತ್ರ ಸೀಮಿತವಾಗಿಲ್ಲ. ಮಂಡ್ಯ ಜಿಲ್ಲೆ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಚಾಮುಂಡಿ ದೇವಿ ಪೂಜೆ ಮಾಡುವ ಮೂಲಕ ದಸರಾ ಆಚರಣೆ ಮಡಲಾಗುತ್ತಿದೆ. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತೋರುತ್ತಿದ್ದಾರೆ. ದಸರಾವನ್ನು ಕಾಟಾಚಾರಕ್ಕೆ ಮಾಡುತ್ತಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ದೇಶಿಕೇಂದ್ರ ಮಹಾಸ್ವಾಮೀಜಿಗೆ ಆಹ್ವಾನ
ದೀಪಾಲಂಕಾರದ
ಬಗ್ಗೆ
ಶಿವಾನಂದ
ಹೇಳಿದ್ದೇನು?
ಸಂಘಟನೆಗಳ
ಮುಖಂಡರೊಂದಿಗೆ
ಮಾತನಾಡಿದ
ಉಪ
ವಿಭಾಗಾಧಿಕಾರಿ
ಶಿವಾನಂದ
ಮೂರ್ತಿ,
ಶ್ರೀರಂಗಪಟ್ಟಣ
ದಸರಾವನ್ನು
ಅಚ್ಚುಕಟ್ಟಾಗಿ
ಮಾಡಲಾಗುತ್ತಿದೆ.
ವಿದ್ಯುತ್
ದೀಪಾಲಂಕಾರ
ಹೊರತುಪಡಿಸಿ
ಉಳಿದಂತೆ
ಎಲ್ಲಾ
ಕಾರ್ಯಕ್ರಮಗಳು
ಅಚ್ಚುಕಟ್ಟಾಗಿ
ನಡೆಯುತ್ತಿವೆ.
ಸಂಘ,
ಸಂಸ್ಥೆಗಳು
ಹಾಗೂ
ಸ್ಥಳೀಯರಿಗೆ
ಹೆಚ್ಚಿನ
ಆದ್ಯತೆ
ನೀಡುವ
ಸಲುವಾಗಿ
ಹಲವಾರು
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗಿದೆ.
ಜೊತೆಗೆ
ಮೈಸೂರು
ದಸರಾ
ಸಮಿತಿ
ವತಿಯಿಂದ
1
ಕೋಟಿ
ರೂಪಾಯಿ
ಹಣವನ್ನು
ನೀಡಿದ್ದಾರೆ.
ಪ್ರವಾಸೋದ್ಯಮ
ಇಲಾಖೆಯಿಂದ
25
ಲಕ್ಷ
ರೂಪಾಯಿ,
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆಯಿಂದ
25
ಲಕ್ಷ
ರೂಪಾಯಿ
ಅನುದಾನ
ಕೊಟ್ಟಿದ್ದಾರೆ.
ಈ
ನಿಟ್ಟಿನಲ್ಲಿ
ನಾವು
ಕೆಲಸ
ಮಾಡುತ್ತಿದ್ದೇವೆ.
ಎಲ್ಲರನ್ನು
ವಿಶ್ವಾಸಕ್ಕೆ
ಪಡೆದು
ಆಚರಣೆ
ಮಾಡುತ್ತೇವೆ
ಎಂದು
ಪ್ರತಿಭಟನಾಕಾರರ
ಮೊನವೊಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ದೇವರಾಜು, ಕೆಂಪೇಗೌಡ ಯುವ ಶಕ್ತಿ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ್, ಕರವೇ ನಗರ ಘಟಕ ಅಧ್ಯಕ್ಷ ಸುರೇಶ್, ಶಂಕರ್ ಬಾಬು, ಪ್ರಿಯ ರಮೇಶ್, ಸ್ವಾಮಿಗೌಡ, ಶಿವಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಂಬೂ
ಸವಾರಿಗೆ
ಮೆರಗು
ನೀಡಿದ
ಮಹೇಂದ್ರ
ಇನ್ನು
ಶ್ರೀರಂಗಪಟ್ಟಣಲ್ಲಿ
ಜಂಬೂ
ಸವಾರಿ
ಮೆರವಣಿಗೆಯೂ
ಅದ್ದೂರಿಯಾಗಿ
ನೆರವೇರಿದೆ.
ಶ್ರೀಚಾಮುಂಡೇಶ್ವರಿ
ವಿಗ್ರಹದ
ಅಂಬಾರಿ
ಹೊತ್ತ
ಮಹೇಂದ್ರ
ಆನೆ
ಗಾಂಭೀರ್ಯದ
ನಡಿಗೆ
ಮೂಲಕ
ಜಂಬೂ
ಸವಾರಿಯ
ಕೇಂದ್ರ
ಬಿಂದುವೆನಿಸಿತ್ತು.
ಮಹೇಂದ್ರನಿಗೆ
ವಿಜಯ
ಹಾಗೂ
ಕಾವೇರಿ
ಆನೆಗಳು
ಸಾಥ್
ನೀಡಿ
ಐತಿಹಾಸಿಕ
ಶ್ರೀರಂಗಪಟ್ಟಣ
ದಸರಾ
ಮಹೋತ್ಸವದ
ವೈಭವಕ್ಕೆ
ಮೆರಗು
ನೀಡಿದವು.
ಕಿರಂಗೂರು ಬನ್ನಿಮಂಟಪದ ಬಳಿ ಮದ್ಯಾಹ್ನ 4 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ವಿಶೇಷ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿದ್ದ ಬನ್ನಿಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಮೊದಲಿಗೆ ಸ್ಥಳ ಶುದ್ಧಿ, ಗಣಪತಿ ಹೋಮ, ದುರ್ಗಾಶಪ್ತಸತಿ ಪಾರಾಯಣ, ಬನ್ನಿಪೂಜೆ, ಶತವೃದ್ರ ಪಾರಾಯಣ, ಕೂಷ್ಮಾಂಡ ಛೇದನ, ಮಹಾಮಂಗಳಾರತಿ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಶಾಸಕ ರವೀಂದ್ರ ಶ್ರೀಕಂಠಯ್ಯ ದಂಪತಿಗಳ ಸಮೇತ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಅದ್ಧೂರಿ
ಜಂಬೂ
ಸವಾರಿ
ಮೆರವಣಿಗೆ
ಬನ್ನಿಮಂಟಪದಿಂದ
ಹೊರಟ
ಅಂಬಾರಿ
ಮೆರವಣಿಗೆಯು
ಕಿರಂಗೂರು,
ಬಾಬುರಾಯನ
ಕೊಪ್ಪಲು
ಮಾರ್ಗವಾಗಿ
ಬೆಂಗಳೂರು-ಮೈಸೂರು
ಹೆದ್ದಾರಿ
ಮೂಲಕ
ಶ್ರೀರಂಗಪಟ್ಟಣ
ಮುಖ್ಯ
ದ್ವಾರವನ್ನು
ಪ್ರವೇಶಿಸಿತು.
ಪಟ್ಟಣದ
ಮುಖ್ಯ
ರಸ್ತೆಗಳ
ಇಕ್ಕೆಲಗಳಲ್ಲಿ
ಸೇರಿದ್ದ
ಅಪಾರ
ಜನಸ್ತೋಮವು
ಅಂಬಾರಿ
ಮೆರವಣಿಗೆ
ಹಾಗೂ
ಕಲಾತಂಡಗಳ
ಸೊಬಗನ್ನು
ಕಣ್ತುಂಬಿಕೊಂಡರು.
ಶ್ರೀ
ರಂಗನಾಥಸ್ವಾಮಿ
ದೇವಾಲಯದ
ಹತ್ತಿರ
ನಿರ್ಮಾಣಗೊಂಡಿರುವ
ವೇದಿಕೆ
ಬಳಿ
ಮೆರವಣಿಗೆಯನ್ನು
ಅಂತ್ಯಗೊಳಿಸಲಾಯಿತು.