Get Updates
Get notified of breaking news, exclusive insights, and must-see stories!

ವಾಸ್ತು ಮಾತ್ರ ಸಾಲದು! ನಿಮ್ಮ ಜಾತಕವೇ ಯಶಸ್ಸನ್ನು ನಿರ್ಧರಿಸುತ್ತದೆ

ಇಂದಿನ ಕಾಲದಲ್ಲಿ ಅನೇಕರು ಮನೆ ಕಟ್ಟುವಾಗ ವಾಸ್ತು ಶಾಸ್ತ್ರವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ ಕೆಲವರ ಮನೆಗಳಲ್ಲಿ ವಾಸ್ತುಶಾಸ್ತ್ರ ಎಲ್ಲವೂ ಸರಿಯಾಗಿ ಇದ್ದರು, ನಿರೀಕ್ಷಿಸಿದಂತೆ ಯಶಸ್ಸು ಸಿಗದೇ ಇರುವುದನ್ನು ನಾವು ನೋಡಬಹುದು. ಇದಕ್ಕೆ ಕಾರಣವೇನು? ಇದಕ್ಕೆ ತಜ್ಙರು ಹೇಳುವ ಪ್ರಕಾರ ಕೇವಲ ವಸ್ತು ಒಂದೆ ಕಾರಣವಲ್ಲಾ ಜಾತಕ ಮತ್ತು ಗ್ರಹಗತಿಗಳು ಪ್ರಮುಖ ಕಾರಣವಾಗಬಹುದು.

ಮನೆ ಕೇವಲ ಕಟ್ಟಡವಲ್ಲ ಜೀವನ ಬದಲಿಸುವ ಒಂದು ಶಕ್ತಿ

ಮನೆ ಕೇವಲ ಸಿಮೆಂಟ್, ಇಟ್ಟಿಗೆ, ಮರಳು, ಮತ್ತು ಕಬ್ಬಿಣದಿಂದ ಕಟ್ಟುವುದಲ್ಲ ಅದು ವ್ಯಕ್ತಿಯ ಜೀವನದ ದಿಕ್ಕನ್ನು ಬದಲಾಯಿಸುವ ಒಂದು ಶಕ್ತಿಯ ಕೇಂದ್ರವಾಗಿದೆ. ಯುಗಗಳೆ ಬದಲಾದರು ವಾಸ್ತು ಶಾಸ್ತ್ರದ ಮಹತ್ವ ಮಾತ್ರ ಕಡಿಮೆಯಾಗಿಲ್ಲ. ಆದರೆ ಇದರಿಂದ ಎಲ್ಲರಿಗೂ ಒಂದೆ ರೀತಿಯಲ್ಲಿ ವಾಸ್ತು ಫಲವು ಸಿಗುವುದಿಲ್ಲ ಎಂಬುದೇ ಮುಖ್ಯ ವಿಚಾರವಾಗಿದೆ.

Vastu Tips

ದಿಕ್ಕುಗಳ ಪ್ರಭಾವ ಎಲ್ಲರಿಗು ಒಂದೆ ಫಲಕಾರಿ ಆಗುವುದಿಲ್ಲ

ವಾಸ್ತು ಶಾಸ್ತ್ರದ ಪ್ರಕಾ ಉತ್ತರ ಮತ್ತಯ ಪೂರ್ವ ದಿಕ್ಕುಗಳನ್ನು ಉತ್ತಮವೆಂದು ಹೇಳುತ್ತಾರೆ, ಆದರೆ ಈ ದಿಕ್ಕುಗಳು ಎಲ್ಲವೂ ಎಲ್ಲರಿಗೂ ಸಮಾನ ಪಲಿತಾಂಶವನ್ನು ನಿಡುವುದಿಲ್ಲ. ಜಾತಕದಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸ್ಥಿತಿ ಈ ದಿಕ್ಕುಗಳ ಪಲಿತಾಂಶವನ್ನು ನಿರ್ಧರಿಸುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

ದಕ್ಷಿಣ ದಿಕ್ಕಿಗೆ ಮಂಗಳ ಗ್ರಹದ ಬಲ

ಸಾಮಾನ್ಯವಾಗಿ ದಕ್ಷಿಣ ದಿಕ್ಕನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಭಯವಿರುತ್ತದೆ, ಆದರೆ ದಕ್ಷಿಣ ದಿಕ್ಕು ಕೆಲವರಿಗೆ ಒಳ್ಳೆಯದಾಗುತ್ತದೆ ಆದರೆ ಇದೆಕ್ಕೆ ಜಾತಕದಲ್ಲಿ ಮಂಗಳ ಗ್ರಹ ಬಲವಾಗಿದ್ದರೆ ದಕ್ಷಣ ದಿಕ್ಕು ಉತ್ತಮ ಎಂದು ಹೇಳಲಾಗುತ್ತದೆ ಹಾಗೂ ಅಧಿಕಾರ ಮತ್ತು ಪ್ರತಿಷ್ಟೆಯನ್ನು ಹೆಚ್ಚಿಸುತ್ತದೆ, ಈ ದಿಕ್ಕು ರಾಜಮರ್ಯಾದೆ ನೀಡುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

Vastu Alert: ಹಳೆಯ ಬಾವಿ ಮೇಲೆ ಮನೆ ಕಟ್ಟಿದ್ರೆ ಏನಾಗುತ್ತದೆ? ಇಲ್ಲಿದೆ ವಾಸ್ತು ಸತ್ಯಗಳು
Vastu Alert: ಹಳೆಯ ಬಾವಿ ಮೇಲೆ ಮನೆ ಕಟ್ಟಿದ್ರೆ ಏನಾಗುತ್ತದೆ? ಇಲ್ಲಿದೆ ವಾಸ್ತು ಸತ್ಯಗಳು

ಪಶ್ಚಿಮ ದಿಕ್ಕು ಮತ್ತು ಶನಿಯ ಪ್ರಭಾವ

ಪಶ್ಚಿಮ ದಿಕ್ಕಿನಲ್ಲಿ ಮನೆ ಕಟ್ಟಿದ ಕೆಲವರು ಶ್ರೀಮಂತರಾಗುತ್ತಾರೆ ಇನ್ನು ಕೆಲವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ಜಾತಕದಲ್ಲಿನ ಶನಿಯ ಪ್ರಭಾವದಿಂದ ನಿರ್ಧಾರವಾಗುತ್ತದೆ. ಹೀಗಾಗಿ ದಿಕ್ಕು ಮಾತ್ರವಲ್ಲ ಗ್ರಹಗತಿಗಳು ಕೂಡ ಮುಖ್ಯ ಪಾತ್ರವಹಿಸುತ್ತವೆ.

ವಾಸ್ತು ಮತ್ತು ಜಾತಕದ ಹೊಂದಾಣಿಕೆ

ಮನೆಯ ವಾಸ್ತು ಎಷ್ಟೇ ಉತ್ತಮವಾಗಿದ್ದರೂ ಅದು ಮಾಲೀಕರ ಜಾತಕ ಮತ್ತು ಜೀವನಕ್ಕೆ ಹೊಂದಾಣಿಕೆಯಾಗಬೇಕು. ಜಾತಕವು ಬಲವಾಗಿದ್ದರೆ ಸಣ್ಣಪುಟ್ಟ ವಾಸ್ತು ದೋಷಗಳು ಪರಿಣಾಮ ಬೀರುವುದಿಲ್ಲ. ಆದರೆ ಜಾತಕ ದುರ್ಬಲವಾಗಿದ್ದರೆ ವಾಸ್ತು ಹೊಂದಾಣಿಕೆಯಾಗದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾತ್ತದೆ ಎಂದು ತಜ್ಞರ ಹೇಳುತ್ತಾರೆ.

ವಾಸ್ತು ಪ್ರಕಾರ ಖಾಲಿ ಜಾಗ ಬಳಕೆ ಹೇಗೆ? ತಪ್ಪು ಮಾಡಿದರೆ ಕಷ್ಟಗಳು ಖಚಿತ
ವಾಸ್ತು ಪ್ರಕಾರ ಖಾಲಿ ಜಾಗ ಬಳಕೆ ಹೇಗೆ? ತಪ್ಪು ಮಾಡಿದರೆ ಕಷ್ಟಗಳು ಖಚಿತ

ಮನೆಯ ಮುಂಭಾಗದ ರಸ್ತೆ

ವಾಸ್ತುದಲ್ಲಿ ಮನೆಯ ಮುಂಭಾಗದ ರಸ್ತೆ ಬಗ್ಗೆ ಹಲವರು ಭಯಪಡುತ್ತಾರೆ. ಆದರೆ ತಜ್ಞರ ಪ್ರಕಾರ ಎಲ್ಲ ಮನೆಯ ರಸ್ತೆ ಲೋಪದೋಷ ಕೆಟ್ಟ ಪರಿಣಾಮ ಬೀರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಜಾತಕದ ಅನುಕೂಲದಿಂದ ಅವು ಉತ್ತಮ ಫಲವೂ ನೀಡಬಹುದು.

ಈಶಾನ್ಯ ದಿಕ್ಕಿನ ಬಗ್ಗೆ ಭ್ರಮೆ

ಬಹಳವರು ಈಶಾನ್ಯ ದಿಕ್ಕನ್ನು ದೇವರ ದಿಕ್ಕು ಎಂದು ಭಾವಿಸುತ್ತಾರೆ. ಆದರೆ ತತ್ವಶಾಸ್ತ್ರದ ಪ್ರಕಾರ ಪರಮೇಶ್ವರ ಸರ್ವವ್ಯಾಪಿಯಾಗಿದ್ದು ಒಂದು ದಿಕ್ಕಿಗೆ ಮಾತ್ರ ಸೀಮಿತನಲ್ಲ. ಈಶಾನ್ಯ ದಿಕ್ಕು ಶಕ್ತಿಯುತ ಸ್ಥಳವಾಗಿದ್ದು ಅದನ್ನು ಸರಿಯಾಗಿ ಬಳಸುವುದು ಅತಿ ಮುಖ್ಯ.

ವಾಸ್ತು ಪ್ರಕಾರ ಮನೆ ಕಟ್ಟಿದರೆ ಮಾತ್ರ ಸಾಕಾಗುವುದಿಲ್ಲ, ಜಾತಕದ ಗ್ರಹಗತಿಗಳು ಮತ್ತು ದಿಕ್ಕುಗಳ ಹೊಂದಾಣಿಕೆ ಇದ್ದಾಗ ಮಾತ್ರ ಸಂಪೂರ್ಣ ಫಲ ಸಿಗುತ್ತದೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಮನೆ ನಿರ್ಮಿಸಿದರೆ ಅದು ಕೇವಲ ವಾಸಸ್ಥಳವಲ್ಲ ನಿಮ್ಮ ಅದೃಷ್ಟವನ್ನು ಬದಲಾಯಿಸುವ ಸ್ಥಳವಾಗುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+