Get Updates
Get notified of breaking news, exclusive insights, and must-see stories!

ಪ. ಬಂಗಾಳ ವಿಶ್ವವಿದ್ಯಾನಿಲಯದ ಕುಲಪತಿಗೆ ಅವಾಚ್ಯ ನಿಂದನೆ: ದೀದಿ ಟಾರ್ಗೆಟ್

ಕೋಲ್ಕತ್ತಾ, ಏಪ್ರಿಲ್ 4: ಪಶ್ಚಿಮ ಬಂಗಾಳದ ಅಲಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೊ ವೈರಲ್ ಆಗಿದೆ. ಇದನ್ನು ರಾಜಕೀಯ ಅಸ್ತ್ರವನ್ನಾಗಿಸಿಕೊಂಡು ಮತ್ತೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನ ಗುರಿಯಾಗಿಸಿಕೊಂಡಂತೆ ಕಾಣಿಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಿಎಂ ಖರ್ಚಿ ಏರಿದ್ದೇ ಏರಿದ್ದು ವಿಪಕ್ಷಗಳ ಆರೋಪಗಳು ಒಂದಾದ ನಂತರ ಒಂದರಂತೆ ಹೆಚ್ಚಾಗುತ್ತಲೇ ಇವೆ. ಬಿರ್ಭೂಮ್ ಹಿಂಸಾಚಾರದ ಆರೋಪದ ನಂತರ ಪಶ್ಚಿಮ ಬಂಗಾಳ ಆಡಳಿತ ಪಕ್ಷದ ಮೇಲೆ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡುತ್ತಿದೆ. ಪಶ್ಚಿಮ ಬಂಗಾಳದ ಅಲಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೊ ವೈರಲ್ ಆಗಿದ್ದು, ಈ ವಿಡಿಯೋ ಸದ್ಯ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ.

ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ಗಿಯಾಸುದ್ದೀನ್ ಮೊಂಡಲ್ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಬಿಜೆಪಿ ಆರೋಪ ಮಾಡಿದೆ.

Vice Chancellor Heckled on Camera, Ex Trinamool Student Leader Arrested

ವಿಡಿಯೋವನ್ನು ಹಂಚಿಕೊಂಡ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಮುಖ್ಯ ಕಾರ್ಯದರ್ಶಿಯಿಂದ ಘಟನೆಯ ವರದಿ ಕೇಳಿದ್ದಾರೆ. "ಇಂತಹ ಅವಮಾನಕರ ಘಟನೆಗಳು ಅನುಕರಣೀಯ ಪರಿಣಾಮಗಳಿಗೆ ಕರೆ ನೀಡುತ್ತವೆ" ಎಂದು ಅವರು ಹೇಳಿದ್ದಾರೆ. ವಿಡಿಯೊ ಸ್ಪಷ್ಟ ಭಾಷೆಯನ್ನು ಹೊಂದಿದೆ. ಇದರಲ್ಲಿ ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ವೈಸ್ ಚಾನ್ಸಲರ್ ಮಹಮ್ಮದ್ ಅವರನ್ನು ನಿಧಿಸಿದ ವಿದ್ಯಾರ್ಥಿ

ವಿಶ್ವವಿದ್ಯಾನಿಲಯದ ನ್ಯೂ ಟೌನ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ವೈಸ್ ಚಾನ್ಸಲರ್ ಮಹಮ್ಮದ್ ಅಲಿ ಅವರ ಕಚೇರಿಯಲ್ಲಿ ವಿದ್ಯಾರ್ಥಿಗಳ ಗುಂಪು ದಾಳಿ ಮಾಡಿದೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಫಾರಸ್ಸಿನಂತೆ ಪಿಎಚ್‌ಡಿ ಪ್ರವೇಶ ಪಟ್ಟಿಯನ್ನು ಬದಲಾಯಿಸದಿದ್ದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುವ ಮಾತುಗಳು ಕೇಳಿಬರುತ್ತವೆ. ಜೊತೆಗೆ ಅವರು ಮೆರಿಟ್ ಲಿಸ್ಟ್‌ನಲ್ಲಿ ಆಡಳಿತದಿಂದ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.

Vice Chancellor Heckled on Camera, Ex Trinamool Student Leader Arrested

ಜೊತೆಗೆ ಉಪಕುಲಪತಿಗಳು ವಿಶ್ವವಿದ್ಯಾನಿಲಯವನ್ನು ಹಾಳು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲಿ ಅವರ ಕುರ್ಚಿಯ ಹಿಂದೆ ಇಬ್ಬರು ಭದ್ರತಾ ಸಿಬ್ಬಂದಿ ಅಸಹಾಯಕರಾಗಿ ನಿಂತಿದ್ದಾರೆ. ವಿದ್ಯಾರ್ಥಿಗಳು ಅವರನ್ನು ನಿಂದಿಸುವ ಕೂಗು ವಿಡಿಯೋದಲ್ಲಿ ಸೆರೆಯಾಗಿದೆ. ಉಪಕುಲಪತಿಗಳು ಅವರ ಮಾತನ್ನು ಮೌನವಾಗಿ ಕೇಳುತ್ತಾರೆ. ವಿದ್ಯಾರ್ಥಿಗಳ ನಿಂದನೆ ಹೀಗೆ ಗಂಟೆಗಳ ಕಾಲ ನಡೆದಿರುವುದು ಸೆರೆ ಹಿಡಿಯಲಾಗಿದೆ.

ಮೊಂಡಲ್ ಮತ್ತು ಇತರರು ತಮ್ಮ ಕಚೇರಿಯೊಳಗೆ ಒಂದೆರಡು ಗಂಟೆಗಳ ಕಾಲ ಅವರನ್ನು ಘೇರಾವ್ ಮಾಡಿದರು ಮತ್ತು ಅಸಭ್ಯ ಭಾಷೆ ಬಳಸಿದರು ಎಂದು ಅಲಿ ನಂತರ ಮಾಧ್ಯಮಗಳಿಗೆ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ. "ನಾನು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದೇನೆ, ಆದರೆ ಅವರು ಬಂದಿಲ್ಲ" ಎಂದು ಅವರು ಹೇಳಿದ್ದಾರೆ.

ಘಟನೆ ಬಳಿಕ ಆರೋಪಿ ಬಂಧನ

ಆದರೆ ಪಶ್ಚಿಮ ಬಂಗಾಳ ಪೊಲೀಸರು "ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ. "ಆಲಿಯಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ ಮತ್ತು ಗಿಯಾಸುದ್ದೀನ್ ಮೊಂಡಲ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ತನಿಖೆ ಮುಂದುವರಿಯುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಮೊಂಡಲ್ ಅವರನ್ನು 2018ರಲ್ಲಿ ವಿಶ್ವವಿದ್ಯಾಲಯದಿಂದ ಹೊರಹಾಕಲಾಗಿದೆ, ಜೊತೆಗೆ ವರ್ಷಗಳ ಹಿಂದೆ ವಿದ್ಯಾರ್ಥಿ ಸಂಘದಿಂದ ಹೊರಹಾಕಲಾಗಿದೆ ಎಂದು ಹೇಳಿಕೊಂಡಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ

ಘಟನೆಯ ಕುರಿತು ಆಡಳಿತ ಪಕ್ಷವನ್ನು ಗುರಿಯಾಗಿಸಿ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ತೃಣಮೂಲದ ವಿದ್ಯಾರ್ಥಿ ನಾಯಕರು "ಎಲ್ಲಾ ಮಿತಿಗಳನ್ನು ದಾಟಿದ್ದಾರೆ" ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ. "ವಿ-ಸಿ ಅವರು ಸಂಭಾವಿತ ವ್ಯಕ್ತಿ ಆದ್ದರಿಂದ ಪ್ರತಿಕ್ರಿಯಿಸದೆ ಮೌನವಾಗಿದ್ದರು. ನಾನೇ ಆಗಿದ್ದರೆ, ನಿಂದಿಸಿದವರಿಗೆ ಕಪಾಳಮೋಕ್ಷ ಮಾಡುತ್ತಿದ್ದೆ" ಎಂದು ಅವರು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬಂಗಾಳಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ, "ಇದು ಬಂಗಾಳದ ಮಗಳ ಆಡಳಿತದಲ್ಲಿ ವಿಭಿನ್ನವಾದ ಘಟನೆಯಲ್ಲ. ಇಂಥಹ ಘಟನೆಗಳು ರಾಜ್ಯದ ಸಂಸ್ಕೃತಿಯಾಗಿವೆ. ಪೊಲೀಸರು ಅವರ ರಕ್ಷಣೆಗೆ ಬಂದಿಲ್ಲ ಎಂದು ವಿಸಿ ಹೇಳಿದರು. ಇಂಥವರ ವಿರುದ್ಧ ಪೊಲೀಸರು ಮುಂದಾಗುವುದಿಲ್ಲ ಎನ್ನುವುದೂ ನಿರೀಕ್ಷಿಸಲಾಗಿದೆ. ಇಂತಹ ಪ್ರಭಾವಿ ಟಿಎಂಸಿ ನಾಯಕರ ಬೆಂಬಲವಿರುವವರನ್ನು ಬಂಧಿಸಿ".ಎಂದು ಬರೆದಿದ್ದಾರೆ.

ಸಿಪಿಐ(ಎಂ) ಕೂಡ ಘಟನೆಯನ್ನು ಖಂಡಿಸಿದೆ. ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಮಾತನಾಡಿ, ತೃಣಮೂಲ ಆಡಳಿತದಲ್ಲಿ ಶಿಕ್ಷಣ ಸಂಸ್ಥೆಗಳ ವಾತಾವರಣವು ಹೇಗೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸೂಚಕವಾಗಿದೆ ಎಂದು ಬರೆದಿದ್ದಾರೆ.

ಕಾಂಗ್ರೆಸ್ ಹೇಳುವುದೇನು?

ತೃಣಮೂಲ ವಿದ್ಯಾರ್ಥಿ ವಿಭಾಗದ ರಾಜ್ಯಾಧ್ಯಕ್ಷ ತೃಣಂಕೂರ್ ಭಟ್ಟಾಚಾರ್ಯ ಮಾತನಾಡಿ, ಮೊಂಡಲ್ ಅವರನ್ನು ಕೆಲವು ವರ್ಷಗಳ ಹಿಂದೆ ಹಲ್ಲೆಯ ಘಟನೆಯೊಂದರ ಮೇಲೆ ಉಚ್ಚಾಟಿಸಲಾಗಿತ್ತು. "ನಾವು ಘಟನೆಯನ್ನು ಖಂಡಿಸುತ್ತೇವೆ. ವಿಸಿಯನ್ನು ನಿಂದಿಸಿದವರಿಗೆ ಶಿಕ್ಷೆಯಾಗಬೇಕು. ಇದು ನಮ್ಮ ಸಂಸ್ಕೃತಿಯಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ತೃಣಮೂಲ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್, ಶಿಕ್ಷಕರ ವಿರುದ್ಧದ ಇಂತಹ ನಡವಳಿಕೆಯನ್ನು ಪಕ್ಷವು ಖಂಡಿಸುತ್ತದೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಬಯಸುತ್ತದೆ ಎಂದು ಹೇಳಿದ್ದಾರೆ.

ಬಿರ್ಭೂಮ್ ಘಟನೆಯಲ್ಲಿ ಬಿಜೆಪಿ ಒಳಸಂಚು

ಬರ್ಭೂಮ್ ಘಟನೆಯಲ್ಲಿ ಬಿಜೆಪಿ ಒಳಸಂಚು ರೂಪಿಸುತ್ತಿದ್ದು ತಮ್ಮ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು. ಬಿಜೆಪಿ ಸಂಚಿಗೆ ಎಲ್ಲಾ ರಾಜ್ಯಗಳ ಸಚಿವರು, ಶಾಸಕರು ಒಟ್ಟಿಗೆ ಸೇರಿ ಸಭೆ ಮಾಡಬೇಕು. ಒಗ್ಗೂಡಿ ಹೋರಾಟಬೇಕು ಎಂದು ಅವರು ಕರೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+