ಕುಕ್ಕರ್ ಬಾಂಬ್ ಸ್ಫೋಟ: ಎನ್ಐಎ ತನಿಖೆಗೆ ವರ್ಗಾಯಿಸಲು ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು, ನವೆಂಬರ್ 24: ಮಂಗಳೂರಿನ ಕುಕ್ಕರ್ ಬಾಂಬ್ ಸ್ಟೋಟ ಪ್ರಕರಣ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ಇದೀಗ ಈ ಪ್ರಕರಣವನ್ನು ರಾಜ್ಯ ಸರ್ಕಾರ, ಎನ್ಐಎ(ರಾಷ್ಟ್ರೀಯ ತನಿಖಾ ದಳ) ತನಿಖೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ ನೀಡಿದ್ದು, ಮಂಗಳೂರಿನ ಕಂಕನಾಡಿ ಸಮೀಪ ಇತ್ತೀಚೆಗೆ ನಡೆದ ಕುಕ್ಕರ್ ಸ್ಪೋಟ ಘಟನೆಗೆ ಸಂಬಂಧಿಸಿದಂತೆ, ಮುಂದಿನ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ NIAಗೆ ವರ್ಗಾಯಿಸಲು ರಾಜ್ಯ ಸರಕಾರ ನಿರ್ಧರಿಸಿ ಆಜ್ಞೆ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಕಂಕನಾಡಿ
ಪೊಲೀಸ್
ಠಾಣೆ
ವ್ಯಾಪ್ತಿಯಲ್ಲಿ
ನಡೆದ
ಘಟನೆಗೆ
ಸಂಬಂಧಿಸಿದಂತೆ,
ಪ್ರಾಥಮಿಕ
ತನಿಖೆಯಲ್ಲಿ
ಸಂಗ್ರಹಿಸಲಾದ
ಸಾಕ್ಷ್ಯ
ಹಾಗೂ
ಇತರ
ಮಾಹಿತಿಗಳ
ಆಧಾರದ
ಮೇಲೆ
ರಾಜ್ಯ
ಸರಕಾರ
ಈ
ನಿರ್ಧಾರ
ಕೈಗೊಂಡು,
UAPA
ಕಾಯಿದೆ
ಅನ್ವಯ
ತನಿಖೆಯನ್ನು
ನಡೆಸಲು
ಶಿಫಾರಸು
ಮಾಡಿದೆ.
ಇನ್ನೂ
ನಿನ್ನೆ
ಕರಾವಳಿಯಲ್ಲಿ
ಆತಂಕ
ಸೃಷ್ಟಿಸಿರುವ
ಮಂಗಳೂರಿನ
ಆಟೋ
ಸ್ಪೋಟಗೊಂಡ
ಸ್ಥಳಕ್ಕೆ
ಗೃಹ
ಸಚಿವ
ಆರಗ
ಜ್ಞಾನೇಂದ್ರ
ಹಾಗೂ
ಡಿಜಿಪಿ
ಪ್ರವೀಣ್
ಸೂದ್
ಭೇಟಿ
ನೀಡಿ
ಪರಿಶೀಲನೆ
ನಡೆಸಿದ್ದಾರೆ.
ಸ್ಪೋಟಗೊಂಡ
ಆಟೋವನ್ನು
ಘಟನಾ
ಸ್ಥಳದಲ್ಲೇ
ಇರಿಸಲಾಗಿದ್ದು,
ಗೃಹ
ಸಚಿವ
ಆರಗ
ಜ್ಞಾನೇಂದ್ರ
ಆಟೋ
ವೀಕ್ಷಿಸಿ
ಪೊಲೀಸರಿಂದ
ಮಾಹಿತಿ
ಪಡೆದಿದ್ದಾರೆ.
ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಡಿಜಿಪಿ ಪ್ರವೀಣ್ ಸೂದ್ ಅವರು ಗರೋಡಿ ಬಳಿಯ ಆಟೋರಿಕ್ಷಾ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅವರು ಅಲ್ಲಿಯೇ ಇರಿಸಲಾಗಿರುವ ಆಟೋರಿಕ್ಷಾವನ್ನು ವೀಕ್ಷಿಸಿ ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು. ನವೆಂಬರ್ 19ರಂದು ಸಂಜೆ ಶಂಕಿತ ಭಯೋತ್ಪಾದಕ ಶಾರೀಕ್ ಪಂಪ್ ವೆಲ್ ಕಡೆಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆತನ ಬಳಿಯಿದ್ದ ಕುಕ್ಕರ್ ಬಾಂಬ್ ಗರೋಡಿ ಬಳಿಯಲ್ಲಿ ಸ್ಪೋಟಗೊಂಡಿತ್ತು. ಆ ಬಳಿಕ ಆಟೋದಲ್ಲಿ ಸ್ಫೋಟ ನಡೆದಿರುವ ಸ್ಥಳವನ್ನು ಬ್ಯಾರಿಕೇಡ್ ಹಾಕಿ ಯಾರೂ ಅಲ್ಲಿ ಓಡಾಟ ನಡೆಸದಂತೆ ರಸ್ತೆಯಿಂದ ಪ್ರತ್ಯೇಕಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ದೊಡ್ಡ ಮಟ್ಟದಲ್ಲಿ ಕೃತ್ಯ ನಡೆಸಲು ಶಾರಿಕ್ ಯೋಜನೆ ರೂಪಿಸಿದ್ದು, ಉಗ್ರರ ಲಿಂಕ್ ಇರುವ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ ಅನುಮಾನ ಮೂಡಿದೆ. ಶಾರಿಕ್ನೊಂದಿಗೆ ಮತ್ತಷ್ಟು ಯುವಕರು ಇರುವ ಸಾಧ್ಯತೆ ಇದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ. ಇನ್ನು ಆರೋಪಿ ಶಾರಿಕ್ ಕೆಲ ಗುಂಪುಗಳ ಮೆಸೇಜ್ಗಳಲ್ಲಿ ಬಂದ ವಿಡಿಯೋ ನೋಡಿ ಬಾಂಬ್ ತಯಾರಿಸುವುದನ್ನು ಕಲಿತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ
ಪ್ರಮುಖ
ಶಂಕಿತನಾಗಿರುವ
ಮೊಹಮ್ಮದ್
ಶಾರಿಕ್
ಮೂಲತಃ
ಶಿವಮೊಗ್ಗ
ಜಿಲ್ಲೆಯ
ತೀರ್ಥಹಳ್ಳಿಯ
ನಿವಾಸಿಗಳಾಗಿದ್ದು,
ಪ್ರೇಮ್
ರಾಜ್
ಎಂಬ
ಹೆಸರಿನಲ್ಲಿ
ಮೈಸೂರಿನಲ್ಲಿ
ಕೆಲಸ
ಮಾಡುತ್ತಿದ್ದ
ಎನ್ನಲಾಗಿದೆ.
ಸದ್ಯ
ಆತನ
ಮೈಸೂರಿನ
ಮನೆಯ
ಮೇಲೂ
ಪೊಲೀಸರು
ದಾಳಿ
ನಡೆಸಿದ್ದು,
ಆತನ
ಮನೆಯಲ್ಲಿ
ಪತ್ತೆಯಾದ
ಹುಬ್ಬಳ್ಳಿ
ವಿಳಾಸದ
ನಕಲಿ
ಆಧಾರ್
ಕಾರ್ಡ್,
ಸರ್ಕಿಟ್
ಬೋರ್ಡ್,
ಬೋಲ್ಟ್,
ಬ್ಯಾಟರಿ,
ಮೊಬೈಲ್,
ವುಡನ್
ಪೌಡರ್,
ಅಲ್ಯೂಮಿನಿಯಂ,
ಮಲ್ಟಿ
ಮೀಟರ್,
ವೈರ್,
ಪ್ರೆಶರ್
ಕುಕ್ಕರ್
ಸೇರಿದಂತೆ
ಹಲವು
ಸ್ಫೋಟಕ
ವಸ್ತುಗಳು,
ಒಂದು
ಮೊಬೈಲ್,
ಎರಡು
ನಕಲಿ
ಆಧಾರ್
ಕಾರ್ಡ್,
ಒಂದು
ನಕಲಿ
ಪ್ಯಾನ್
ಕಾರ್ಡ್,
ಒಂದು
ಫಿನೋ
ಡೆಬಿಟ್
ಕಾರ್ಡ್ಗಳನ್ನು
ಪೊಲೀಸರು
ವಶಕ್ಕೆ
ಪಡೆದಿದ್ದಾರೆ.
ಇನ್ನು
ಈ
ಹಿಂದೆ
2020ರ
ಡಿಸೆಂಬರ್ನಲ್ಲಿ
ಮಂಗಳೂರಿನ
ಗೋಡೆ
ಮತ್ತು
ಕಟ್ಟಡದ
ಮೇಲೆ
ಭಯೋತ್ಪಾದನಾ
ಪರ
ಬರಹ
ಬರೆದಿದ್ದ
ಪ್ರಕರಣದಲ್ಲಿ
ಶಾರಿಕ್ನನ್ನು
ಬಂಧಿಸಲಾಗಿತ್ತು.