ಸಹಕಾರಿ ಸಚಿವ ಮಹದೇವ ಪ್ರಸಾದ್ ಹೃದಯಾಘಾತದಿಂದ ನಿಧನ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಕಲಿ ಕೀಲಿಕೈಯಿಂದ ಬಾಗಿಲು ತೆರದು ನೋಡಿದಾಗ ಸಚಿವರು ಹಾಸಿಗೆ ಮೇಲೆ ಮಲಗಿದ್ದರು. ಅದರೆ ಅವರ ದೇಹ ತಣ್ಣಗಾಗಿತ್ತು. ಬಳಿಕ ಸ್ಥಳೀಯ ವೈದ್ಯರು ಬಂದು ತಪಾಸಣೆ ನಡೆಸಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದರು.
ಕೊಪ್ಪ, ಜನವರಿ ೦3: ಚಾಮರಾಜನಗರ ಗುಂಡ್ಲುಪೇಟೆ ಶಾಸಕ ಮತ್ತು ಸಹಕಾರಿ, ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್(58) ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ
ಮಂಗಳವಾರ ಖಾಸಗೀ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೋಮವಾರ ಸಂಜೆ ಚಿಕ್ಕಮಗಳೂರಿನ ಸಮೀಪ ಸೆರಾಯ್ ರೆಸಾರ್ಟ್ ನಲ್ಲಿ ತಂಗಿದ್ದರು. ಅದರೆ ಮಂಗಳವಾರ ಬೆಳಗ್ಗೆ ಅವರು ಬಾಗಿಲು ತೆರಯಲಿಲ್ಲ. ಆಪ್ತರು ಬಾಗಿಲನ್ನು ತೆರಯಲು ಮುಂದಾಗಿದ್ದು ಆದರೆ ತೆರೆಯಲಾಗಲಿಲ್ಲ. ನಂತರ ನಕಲಿ ಬೀಗದ ಕೀಯಿಂದ ಬಾಗಿಲನ್ನು ತೆರೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್ ಒಳ ಹೊದರು ಅದರೆ ಸಚಿವ ಮಹದೇವ ಪ್ರಸಾದ್ ವಿಧಿವಶರಾಗಿದ್ದರು.[ವ್ಯಕ್ತಿಚಿತ್ರ : ಸಜ್ಜನ ರಾಜಕಾರಣಿ ಎಚ್ ಎಸ್ ಮಹದೇವ ಪ್ರಸಾದ್]
ಬೆಳಗ್ಗೆಯೇ ಅವರು ವ್ಯಾಯಾಮ ಮತ್ತು ವಾಕಿಂಗ್ ಮಾಡಲು ಹೊಗುತ್ತಿದ್ದರು ಆದರೆ ಅವರು ಮಂಗಳವಾರ ಬೆಳಗ್ಗೆ ಹೋಗಿರಲಿಲ್ಲ ಎಂದು ಸಹಚರರೊಬ್ಬರು ಹೇಳಿದರು. ನಂತರ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಗಡಿಗರೊಂದಿಗೆ ಬಾಗಿಲು ಬಡಿದಾಗ ಪ್ರತ್ಯುತ್ತರ ನೀಡಲಿಲ್ಲ. ಕಿಟಕಿ ಬಾಗಿಲುಗಳು ತೆರೆದಿರಲಿಲ್ಲ. ಹೀಗಾಗಿ ನಕಲಿ ಕೀಲಿಕೈಯಿಂದ ಬಾಗಿಲು ತೆರದು ನೋಡಿದಾಗ ಸಚಿವರು ಹಾಸಿಗೆ ಮೇಲೆ ಮಲಗಿದ್ದರು. ಅದರೆ ಅವರ ದೇಹ ತಣ್ಣಗಾಗಿತ್ತು. ಬಳಿಕ ಸ್ಥಳೀಯ ವೈದ್ಯರು ಬಂದು ತಪಾಸಣೆ ನಡೆಸಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದರು.
ಮಹದೇವ ಪ್ರಸಾದ್ ನನ್ನ ಸಹೋದ್ಯೋಗಿ ಮಾತ್ರ ಆಗಿರಲಿಲ್ಲ, ನನ್ನೆಲ್ಲ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಅಗಲಿಕೆಯ ನೋವು ಅಸಹನೀಯವಾದುದು. pic.twitter.com/aPv8LYihAt
— CM of Karnataka (@CMofKarnataka) January 3, 2017
ಸಚಿವರು ಚಿಕ್ಕಮಗಳೂರಿನ ಕೊಪ್ಪದಲ್ಲಿ ಸಹಕಾರಿ ಸಾರಿಗೆ ಸುವರ್ಣಮಹೋತ್ಸವ ಕಾರ್ಯಕ್ರಮಕ್ಕೆ ತೆರಳಲು ಸೋಮವಾರವೇ ಅಗಮಿಸಿದ್ದರು. ನಂತರ ರಾತ್ರಿ ತಮ್ಮ ಸ್ನೇಹಿತರ ಮನೆಗೆ ಭೋಜನಕ್ಕೆ ತೆರಳಿ ರಾತ್ರಿ ಬಂದು ಸೆರಾಯ್ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ನಿಧಾನವಾಗಿ ಬಂದ ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ವಿಜಯ್ ಕುಮಾರ್ ಅವರೊಂದಿಗೆ ರಾತ್ರಿ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಿದ್ದಾಗಿ ಸ್ವತಃ ವಿಜಯ್ ಕುಮಾರ್ ತಿಳಿಸಿದ್ದಾರೆ.
Shocked to hear the demise of Cooperation Minister,Govt of Karnataka Sh.H.S.Mahadeva Prasad.Condolences to the family of Sh.Mahadeva Prasad.
— B.S. Yeddyurappa (@BSYBJP) January 3, 2017
ಸಹಕಾರಿ ಸಚಿವರು ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಪ್ತರೊಂದಿಗೆ ಬಂದಿದ್ದರು. ಅವರೊಂದಿಗೆ ಮನೆಯ ಯಾವ ಸದಸ್ಯರು ಬಂದಿರಲಿಲ್ಲ, ಸಚಿವರು ಹಿಂದೊಮ್ಮೆ ಹೃದಯ ಸಂಬಂಧ ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದರು, ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಆಪ್ತ ವಲಯ ತಿಳಿಸಿದೆ.