ಚಪ್ಪಲಿ ಕದ್ದ ಹಾವು: ಚಪ್ಪಲಿ ಬಾಯಲ್ಲಿಡಿದು ಸರಸರನೇ ಹೋದ ಹಾವು
ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಎಲ್ಲರಿಗೂ ಭಯವೇ. ಅದು ಇದ್ದ ಜಾಗಕ್ಕೆ ಹೋಗುವುದಿರಲಿ ಜನ ವಾಸಿಸುವ ಜಾಗಕ್ಕೆ ಅದು ಬಂದರೆ ಪ್ರಾಣ ಪಕ್ಷಿಯೇ ಹಾರಿ ಹೋದಂತಾಗುತ್ತದೆ. ಹೀಗೆ ಹಾವೊಂದು ಮನೆ ಬಾಗಿಲಿಗೆ ಸರಸರನೇ ಬಂದು ಚಪ್ಪಲಿಯನ್ನು ಬಾಯಲ್ಲಿಡಿದುಕೊಂಡು ಹೋಗಿದೆ.
ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ, ಶುಭ ಸಮಾರಂಭಗಳಲ್ಲಿ ಚಪ್ಪಲಿಗಳು ಕಳ್ಳತನವಾಗುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಮನೆ ಬಾಗಿಲಿಗಿದ್ದ ಚಪ್ಪಲಿಗಳನ್ನು ಕದ್ದೊಯ್ಯುವುದು ಇದೆ. ಆದರೆ ಈ ಕಳ್ಳ ಹಾವು ಮನೆ ಮಾಲೀಕರ ಮುಂದೆ ಚಪ್ಪಲಿಯನ್ನು ಬಾಯಲ್ಲಿಡಿದುಕೊಂಡು ಸರಸರನೇ ಹೋಗಿದೆ. ಅಷ್ಟಕ್ಕೂ ಚಪ್ಪಲಿ ಕದ್ದಿದ್ದು ವ್ಯಕ್ತಿಯಲ್ಲ ಬದಲಿಗೆ ಹಾವು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ "ಈ ಹಾವು ಆ ಚಪ್ಪಲ್ ತೆಗೆದುಕೊಂಡು ಏನು ಮಾಡುತ್ತದೆ ಎಂದು ನನಗೆ ಆಶ್ಚರ್ಯವಾಗಿದೆ'' ಎಂದು ಶೀರ್ಷಿಕೆ ಬರೆದಿದ್ದಾರೆ.
I wonder what this snake will do with that chappal. He got no legs. Unknown location. pic.twitter.com/9oMzgzvUZd
— Parveen Kaswan, IFS (@ParveenKaswan) November 24, 2022
ವಿಡಿಯೋದಲ್ಲಿ ಸೆರೆಯಾದ ದೃಶ್ಯವನ್ನು ನೊಡುವುದಾದರೆ- ಹಾವು ಮನೆಯೊಂದರ ಕಡೆಗೆ ಬರುತ್ತದೆ. ಆಗ ಅಲ್ಲಿದ್ದ ಕೆಲ ಮಹಿಳೆಯರು ಭಯದಿಂದ ಕಿರುಚುತ್ತಾರೆ. ಜೊತೆಗೆ ಹಾವು ತಮ್ಮತ್ತ ಬಾರದಂತೆ ಚಪ್ಪಲಿಯನ್ನು ಎಸೆಯುತ್ತಾರೆ. ಅಷ್ಟೇ ಹಾವು ಅದೇನೋ ಆಹಾರ ಸಿಕ್ಕಿತು ಅನ್ನೋ ಹಾಗೆ ಬಾಯಲ್ಲಿ ಚಪ್ಪಲಿಯನ್ನು ಹಿಡಿದು ವೇಗವಾಗಿ ಹೋಗಿದೆ. ಈ ವಿಡಿಯೋ ಹಲವಾರು ನೋಡುಗರನ್ನು ಸೆಳೆದಿದೆ.

ವಿಡಿಯೊ 150 ಸಾವಿರ ವೀಕ್ಷಣೆಗಳನ್ನು ಮತ್ತು 4,900 ಲೈಕ್ಗಳನ್ನು ಪಡೆದುಕೊಂಡಿದೆ. ನೆಟಿಜನ್ಗಳು ಈ ಅಸಾಮಾನ್ಯ ದೃಶ್ಯವನ್ನು ಉಲ್ಲಾಸದಾಯಕವೆಂದು ಕೊಂಡಾಡಿದ್ದಾರೆ. ಜೊತೆಗೆ ಹಾಸ್ಯಗಳೊಂದಿಗೆ ಕಾಮೆಂಟ್ಗಳನ್ನು ಮಾಡಿದ್ದಾರೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ "ವಿಡಿಯೋದಲ್ಲಿ ಕೇಳಿಸುವ ಆಡುಭಾಷೆ ಭೋಜ್ಪುರಿ ಅಥವಾ ಬಿಹಾರವಾಗಿರಬೇಕು" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಕ್ರೈಮ್ ಮಾಸ್ಟರ್ ಗೋಗೋ," ಎಂದು ಬರೆದಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications