ಉತ್ತರ ಪ್ರದೇಶದಲ್ಲಿ ರೈಲು ಅಪಘಾತ: 23 ಸಾವು, 400 ಜನರಿಗೆ ಗಾಯ
ಉತ್ತರ ಪ್ರದೇಶದ ಮುಜಫ್ಫರ್ ನಗರದ ಬಳಿ ರೈಲು ಅಪಘಾತ. ಕಳಿಂಗಾ-ಉಟ್ಕಳ್ ಪ್ರಯಾಣಿಕರ ರೈಲು ಅಪಘಾತ. ದುರ್ಘಟನೆಯಲ್ಲಿ ಕನಿಷ್ಠ 23 ಜನರು ಸಾವು, 400 ಜನರಿಗೆ ಗಾಯ.
ನವದೆಹಲಿ, ಆಗಸ್ಟ್ 19: ಉತ್ತರ ಪ್ರದೇಶದ ಮುಜಫ್ಫರ್ ನಗರದ ಬಳಿ ಶನಿವಾರ ಸಂಜೆ ಸಂಭವಿಸಿರುವ ರೈಲು ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯಲ್ಲಿ 23 ಜನರು ಮೃತಪಟ್ಟು 400 ಜನರು ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಮುಜಫ್ಫರ್ ನಗರದ ಕಟೌಲಿಯಲ್ಲಿ ಈ ರೈಲು ಅಪಘಾತ ನಡೆದಿದೆ. ಹರಿದ್ವಾರದಿಂದ ಪುರಿ ನಡುವೆ ಸಂಚರಿಸುತ್ತಿದ್ದ ಈ ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದೇ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಅಪಘಾತದ ಕಾರಣ ತಿಳಿದು ಬಂದಿಲ್ಲ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್) ಸ್ಥಳಕ್ಕೆ ಆಗಮಿಸಿದ್ದು, ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಇದಕ್ಕೆ ಸ್ಥಳೀಯ ಪೊಲೀಸರೂ ಕೈ ಜೋಡಿಸಿದ್ದಾರೆ.
ಘಟನೆಯ ಬಗ್ಗೆ ಟ್ವಿಟ್ಟರ್ ನಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿದ್ದ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು, ತಾವೇ ಖುದ್ದಾಗಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರದ ಹಿರಿಯರಿಂದ ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಲು ಸೂಚನೆ ಬಂದಿದೆ. ಹಾಗಾಗಿ, ನಾನು ಇನ್ನು ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೆ ಹೊರಡುವುದಾಗಿ ತಿಳಿಸಿದ್ದರು.
Sad at train derailment in UP; my thoughts are with deceased & their families. Injured are being rescued & provided relief #PresidentKovind
— President of India (@rashtrapatibhvn) August 19, 2017
ಘಟನೆಯ ಬಗ್ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
Extremely pained by the derailment of the Utkal Express in Muzaffarnagar. My thoughts are with the families of the deceased: PM
— PMO India (@PMOIndia) August 19, 2017
Medical vans have been rushed to the site.All efforts being taken to ensure speedy relief and rescue operations
— Suresh Prabhu (@sureshpprabhu) August 19, 2017