''ತೆಂಡೂಲ್ಕರ್, ಕೊಹ್ಲಿಗಿಂತ ಧೋನಿ ಜನಪ್ರಿಯ'' ನೀವೇನಂತೀರಾ?
ದುಬೈ, ಸೆ. 20: ಭಾರತದ ಕ್ರಿಕೆಟ್ ಲೋಕದ ಲಿಟ್ಲ್ ಮಾಸ್ಟರ್ ಸುನೀಲ್ ಗಾವಸ್ಕರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 13 ಆರಂಭವಾದ ಖುಷಿಯಲ್ಲೇ ಮಾಜಿ ನಾಯಕ, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್ ಎಂಎಸ್ ಧೋನಿಯನ್ನು ಹಾಡಿ ಹೊಗಳಿದ್ದಾರೆ,
ಐಪಿಎಲ್ ವೀಕ್ಷಕವಿವರಣೆಗಾರರಾಗಿರುವ ಗವಾಸ್ಕರ್ ಅವರು ಧೋನಿ ಬಗ್ಗೆ ಮಾತನಾಡುತ್ತಾ, ಸುಮಾರು 400 ಕ್ಕೂ ಅಧಿಕ ದಿನಗಳ ನಂತರ ಮೈದಾನಕ್ಕಿಳಿಯುತ್ತಿದ್ದಾರೆ. ಧೋನಿ ಅವರು ಕ್ರಿಕೆಟ್ ಸಂಸ್ಕೃತಿ ಹಾಗೂ ಹೆಚ್ಚಿನ ಪ್ರೋತ್ಸಾಹ ಇಲ್ಲದ ಊರಿನಿಂದ ಬಂದವರು. ತೆಂಡೂಲ್ಕರ್ ಎಂದರೆ ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಕಾಣಬಹುದು, ವಿರಾಟ್ ಕೊಹ್ಲಿ ಎಂದರೆ ದೆಹಲಿ ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಅಭಿಮಾನ ಗುರುತಿಸಬಹುದು. ಆದರೆ ಧೋನಿ ಎಂದರೆ ಇಡೀ ದೇಶವೇ ಅವರನ್ನು ಪ್ರೀತಿಸುತ್ತದೆ. ಅಷ್ಟರಮಟ್ಟಿಗೆ ಕ್ರೇಜ್ ಹುಟ್ಟು ಹಾಕಿದ ಭಾರತ ಕಂಡ ಶ್ರೇಷ್ಠ ನಾಯಕ ಎಂದರು.
ಕ್ರಿಕೆಟ್ ಕ್ರೇಜ್ ಹುಟ್ಟು ಹಾಕಿ, ಅಭಿಮಾನಿಗಳ ಪಾಲಿನ ದೇವರು ಎನಿಸಿಕೊಂಡ ಸಚಿನ್ ಗಿಂತಲೂ ಧೋನಿ ಜನಪ್ರಿಯ ಎಂದಿರುವ ಹಲವರಿಗೆ ಮೆಚ್ಚುಗೆಯಾಗಿಲ್ಲ. ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ನಂಬಬಹುದು. ಐಸಿಸಿ ಆಯೋಜನೆಯ ಮೂರು ಕಪ್ ಗೆಲ್ಲಿಸಿಕೊಟ್ಟ ಏಕೈಕ ನಾಯಕ ಧೋನಿ, ಮೂರು ಬಾರಿ ಚೆನ್ನೈಗೆ ಐಪಿಎಲ್ ಕಪ್ ಗೆಲ್ಲಿಸಿಕೊಟ್ಟವರು.

39 ವರ್ಷ ವಯಸ್ಸಿನ ಧೋನಿ ಕ್ರಿಕೆಟರ್ ಆಗಿ, ಮೈದಾನದ ಒಳಗೂ ಹೊರಗೂ ಸೌಮ್ಯ ಸ್ವಭಾವ, ಇತರೆ ಕ್ರೀಡಾಪಟುಗಳಿಗೆ ನೆರವಾಗುವ ಮನೋಭಾವ ಉಳ್ಳವರು, ಚೆನ್ನೈಗೆ ಮನೆ ಮಗನಾಗಿ ತಲಾ ಎಂದು ಕರೆಸಿಕೊಂಡವರು. ಆದರೆ, ಮುಂಬೈ ಮೂಲದ ಗವಾಸ್ಕರ್ ಏಕಾಏಕಿ ಈ ರೀತಿ ಹೋಲಿಕೆ ಮಾಡಿದ್ದು ಏಕೆ ಎಂಬುದು ಸದ್ಯಕ್ಕೆ ಚರ್ಚೆಯ ವಿಷಯ.
ಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡು
ಗವಾಸ್ಕರ್ ಅವರು ಐಪಿಎಲ್ ಇತಿಹಾಸವನ್ನು ಮುಂದಿಟ್ಟುಕೊಂಡು ಈ ಮೂವರ ಬಗ್ಗೆ ಹೇಳಿದ್ದಾರೆ ಖಂಡಿತವಾಗಿ ಎಲ್ಲರೂ ಒಪ್ಪುತ್ತಾರೆ. ಏಕೆಂದರೆ, ಧೋನಿ ಎಲ್ಲಾ ರೀತಿಯಲ್ಲೂ ಇಬ್ಬರಿಗಿಂತ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ, ನೀಡುತ್ತಿದ್ದಾರೆ. ಗವಾಸ್ಕಾರ್ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ[email protected]ಗೆ ಇಮೇಲ್ ಮಾಡಿ, ಅಥವಾ ಕಾಮೆಂಟ್ ಮಾಡಿ..
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications