ದೇಶಿ ಟ್ವಿಂಟಿ 20 ಟೂರ್ನಮೆಂಟ್ ಆಯೋಜನೆಗೆ ಸಿದ್ಧ: ಎಂಸಿಎ
ಮುಂಬೈ, ಸೆ. 20: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿಯನ್ನು ಯುಎಇಯಲ್ಲಿ ಆಯೋಜಿಸಿರುವ ಬಿಸಿಸಿಐಗೆ ದೇಶಿ ಕ್ರಿಕೆಟ್ ಋತು ಆರಂಭಿಸಲು ಒತ್ತಡ ಹೆಚ್ಚಾಗುತ್ತಿದೆ. ಬಿಹಾರ ನಂತರ ಮುಂಬೈ ಕ್ರಿಕೆಟ್ ಕೌನ್ಸಿಲ್ ನ ಪ್ರಮುಖ ಸದಸ್ಯರೊಬ್ಬರು ಮುಂಬೈನಲ್ಲಿ ದೇಶಿ ಟ್ವೆಂಟಿ 20 ಟೂರ್ನಮಂಟ್ -ಮುಷ್ತಾಕ್ ಅಲಿ ಟ್ವೆಂಟಿ-20 ಆಯೋಜಿಸಲು ಅನುಮತಿ ಕೋರಿದ್ದಾರೆ. ಈ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಮೇಲ್ ಬರೆದಿದ್ದಾರೆ.
ಮುಂಬೈ ಕ್ರಿಕೆಟ್ ಸಂಸ್ಥೆಯ ಅಪೆಕ್ಸ್ ಕೌನ್ಸಿಲ್ ಸದಸ್ಯ ಹಾಗೂ ಪಿಚ್ ಕ್ಯೂರೇಟರ್ ನದೀಮ್ ಮೆನನ್ ಅವರು ಬಿಸಿಸಿಐಗೆ ಮಾಡಿರುವ ಮನವಿಯಲ್ಲಿ ದೇಶಿ ಟೂರ್ನಮೆಂಟ್ ನಡೆಸಲು ಮುಂಬೈ ಸಿದ್ಧವಿದೆ. ಮುಂಬೈನಲ್ಲಿ 6 ಸುಸಜ್ಜಿತ ಕ್ರೀಡಾಂಗಣಗಳಿವೆ. ಕ್ರಿಕೆಟರ್/ ಅಧಿಕಾರಿಗಳು ಉಳಿದುಕೊಳ್ಳಲು ಹೋಟೆಲ್ ವ್ಯವಸ್ಥೆ ಇದೆ. ಎಲ್ಲವೂ ಕೊವಿಡ್ 19 ಆರೋಗ್ಯ ಮಾರ್ಗಸೂಚಿಯಂತೆ ಆಯೋಜನೆ ಮಾಡಲು ಎಂಸಿಎ ಸಿದ್ಧವಿದೆ ಎಂದಿದ್ದಾರೆ.
2020ರ ಅಖಿಲ ಭಾರತ ಮಹಿಳಾ ಬಿಸಿಸಿಐ ಏಕದಿನ ಟೂರ್ನಿಯನ್ನು ಮುಂಬೈ ಯಶಸ್ವಿಯಾಗಿ ನಡೆಸಿತ್ತು. ಈಗ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯನ್ನು ಆಯೋಜಿಸುವ ಜವಾಬ್ದಾರಿಯನ್ನು ಮುಂಬೈಗೆ ನೀಡಬೇಕು ಎಂದು ಇಮೇಲ್ ನಲ್ಲಿ ಕೋರಿದ್ದಾರೆ.

ಆದರೆ, ಯುಎಇಯಲ್ಲಿ ಐಪಿಎಲ್ 13 ಆಯೋಜಿಸಿರುವ ಬಿಸಿಸಿಐ ದೇಶಿ ಟೂರ್ನಿಗಳನ್ನು ಆಯೋಜಿಸುವ ಕುರಿತು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಿರಿಯರ ತಂಡದ ರಣಜಿ ಹಾಗೂ ಮುಷ್ತಾಕ್ ಅಲಿ ಟೂರ್ನಮೆಂಟ್ ನಡೆಸುವ ಬಗ್ಗೆ ಚರ್ಚೆಯಂತೂ ನಡೆದಿದೆ.
ಎಂಸಿಎ ಅಧೀನದಲ್ಲಿ ವಾಂಖೆಡೆ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಹಾಗೂ ಸಚಿನ್ ತೆಂಡೂಲ್ಕರ್ ಜಿಂಖಾನಾ ಮೂರು ಕ್ರಿಕೆಟ್ ಮೈದಾನಗಳಿವೆ. ಇದಲ್ಲದೆ ನವಿ ಮುಂಬೈನಲ್ಲಿ ಡಿವೈ ಪಾಟೀಲ್ ಸ್ಟೇಡಿಯಂ, ಥಾಣೆಯಲ್ಲಿ ದಾದೋಜಿ ಕೆ ಸ್ಟೇಡಿಯಂ , ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾಕ್ಕೆ ಸೇರಿರುವ ಬ್ರಬೌರ್ನ್ ಸ್ಟೇಡಿಯಂ ಕೂಡಾ ಬಳಕೆ ಮಾಡಬಹುದು ಎಂದು ಎಂಸಿಎ ಹೇಳಿದೆ. ಭಾರತದ ಪ್ರಮುಖ ನಗರಗಳಂತೆ ಮುಂಬೈ ಕೂಡಾ ಕೊರೊನಾವೈರಸ್ ಹೊಡೆತಕ್ಕೆ ಸಿಲುಕಿದೆ. ಈ ಸಮಯಕ್ಕೆ ಒಟ್ಟು 1,84,313 ಕೊವಿಡ್ 19 ಪ್ರಕರಣಗಳು ದಾಖಲಾಗಿದ್ದು, 8.466 ಮಂದಿ ಮೃತಪಟ್ಟಿದ್ದಾರೆ.
-
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು?












Click it and Unblock the Notifications