ಜಗನ್ನಾಥ ರಥ ಯಾತ್ರೆ 2020: ದೇವಸ್ನಾನ ಪೂರ್ಣಿಮೆಯ ವಿಶೇಷತೆಯೇನು?
ಭುವನೇಶ್ವರ, ಜೂನ್ 5: ಭಕ್ತರು ಕಾತುರದಿಂದ ಕಾಯುತ್ತಿರುವ ಜಗನ್ನಾಥ ದೇವರ ಸ್ನಾನ ಯಾತ್ರೆ ಒಡಿಶಾದಲ್ಲಿ ಇಂದಿನಿಂದ ಆರಂಭಗೊಂಡಿದೆ.
Recommended Video
ಸ್ನಾನ ಯಾತ್ರೆಯು ಪೂರ್ಣ ಹುಣ್ಣಿಮೆಯ ದಿನ ಪ್ರತಿವರ್ಷವೂ ನಡೆಯುತ್ತದೆ. ಈ ವರ್ಷ ದೇವಸ್ತಾನ ಪೂರ್ಣಮಾ ಅಥವಾ ಸ್ನಾನಯಾತ್ರೆ ಜೂನ್ 5 ರಂದು ಆಚರಿಸಲಾಗುತ್ತಿದೆ.
ಕೊರೊನಾ ವೈರಸ್ ಭಯದಿಂದಾಗಿ ಭಕ್ತರಿಗೆ ಜಗನ್ನಾಥ ದೇವಸ್ಥಾನದ ಹತ್ತಿರ ಹೋಗಲು ಅನುಮತಿ ನೀಡುತ್ತಿಲ್ಲ. ಕೇವಲ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಸೇರಿ ಈ ರಥ ಯಾತ್ರೆ ಮುನ್ನಡೆಸುತ್ತಿದ್ದಾರೆ. ಟಿವಿಯಲ್ಲಿ ರಥಯಾತ್ರೆ ಲೈವ್ ತೋರಿಸಲಾಗುತ್ತಿದೆ.
ದೇವಸ್ನಾನ ಪೂರ್ಣಿಮಾ ಅಥವಾ ಸ್ನಾನ ಯಾತ್ರೆಯನ್ನು ಪುರಿಯಲ್ಲಿ ನಡೆಯುವ ಜಗನ್ನಾಥ ಯಾತ್ರೆಗೂ ಮುನ್ನ ನಡೆಸಲಾಗುತ್ತದೆ. ಭಕ್ತರು ನದಿಯನ್ನು ಮಿಂದೇಳುತ್ತಾರೆ.

ಸ್ನಾನಯಾತ್ರೆಗೂ ಮುನ್ನ ನಡೆಯುವುದೇನು?
ಸ್ನಾನಯಾತ್ರೆ ಆರಂಭಕ್ಕೂ ಮುನ್ನದಿನ ಜಗನ್ನಾಥ, ಬಾಲಭದ್ರ, ಸುಭದ್ರಾದೇವಿ , ಸುದರ್ಶನ ಚಿತ್ರಗಳನ್ನು ದೇವಸ್ಥಾನದಿಂದ ತೆಗೆದುಕೊಂಡು ಬರಲಾಗುತ್ತದೆ. ಅಲ್ಲಿಂದ ನದಿಯವರೆಗೆ 'ಪಹಂಡಿ' ಮೆರವಣಿಗೆ ನಡೆಯಲಿದೆ. ಪ್ರತಿಯೊಬ್ಬರು ದೇವಸ್ಥಾನದಲ್ಲಿಯೇಏ ಇರಬೇಕು ಕೆಲವರಿಗೆ ಮಾತ್ರ ನೀಡಿನಲ್ಲಿ ಇಳಿಯಲು ಅವಕಾಶ ಮಾಡಿಕೊಡಲಾಗುತ್ತದೆ.

ಸ್ನಾನ ಯಾತ್ರೆ
ವರ್ಷಕ್ಕೊಮ್ಮ 'ಸುನಾ ಕುವಾ' ಬಂಗಾರದ ಬಾವಿಯಲ್ಲಿ ಸ್ನಾನ ಮಾಡಲಾಗುತ್ತಿದೆ. ದೇವಸ್ಥಾನದ ಅರ್ಚಕರು ನೀರಿಗೆ ಇಳಿಯುವಾಗ ಬಾಯಿ ಹಾಗೂ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಅವರ ಉಸಿರು ನೀರಿಗೆ ತಾಗಿ ನೀರು ಮಲಿನವಾಗಬಾರದು ಎಂದು. ಹಾಗೆಯೇ ಗಂಧ, ಚಂದನ ಕೆಲವು ಹೂವುಗಳಿಂದ ನೀರನ್ನು ಶುಚಿಗೊಳಿಸುತ್ತಾರೆ. ಬಳಿಕ ದೇವ ಜಗನ್ನಾಥ, ದೇವಿ ಸುಭದ್ರಾ ಹಾಗೂ ಬಾಲಭದ್ರ ದೇವರಿಗೆ ಗಣಪತಿ ರೀತಿ ಅಲಂಕಾರ ಮಾಡಲಾಗುತ್ತದೆ.

ಸ್ನಾನ ಯಾತ್ರೆ ಮುಗಿದ ಮೇಲೆ 14 ದಿನ ದೇವಸ್ಥಾನ ಬಂದ್
ಸ್ನಾನಯಾತ್ರೆ ಮುಗಿದ ಬಳಿಕ 10 ದಿನ ದೇವಸ್ಥಾನವನ್ನು ಬಂದ್ ಮಾಡಲಾಗುತ್ತದೆ. ದಿನನಿತ್ಯದ ಪೂಜೆಯು ಕೂಡ ನಡೆಯುವುದಿಲ್ಲ. ಭಕ್ತರು ವಿಶೇಷ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಭಕ್ತರು ಕೇವಲ ಫಲಾಹಾರವನ್ನು ಮಾತ್ರ ಸ್ವೀಕರಿಸಬಹುದಾಗಿದೆ.

ಅಲರ್ನಾತ್ ದೇವ
ಸ್ನಾನ ಯಾತ್ರೆ ಮುಗಿದ ಬಳಿಕ ಅಲರ್ನಾತ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಬೇಕು ಬ್ರಹ್ಮಗಿರಿಯಲ್ಲಿದೆ ಪುರಿಯಿಂದ 25 ಕಿ.ಮೀ ದೂರದಲ್ಲಿದೆ. ಜಗನ್ನಾಥ ದೇವರು ಸ್ನಾನಯಾತ್ರೆ ಮುಗಿಸಿ ಅಲರ್ನಾತ್ಗೆ ಬರುತ್ತಾರೆ ಎನ್ನುವ ನಂಬಿಕೆ ಇನ್ನೂ ಉಳಿದಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications