ಹ್ಯಾಕರ್ ಶ್ರೀಕಿ ಆಶೀರ್ವಾದ : ರೈಸ್ ಮಿಲ್ ನಡೆಸುತ್ತಿದ್ದವ ರಾತ್ರೋ ರಾತ್ರಿ ಮಿಲೇನಿಯರ್ ಆಗಿಬಿಟ್ಟ !
ಬೆಂಗಳೂರು, ಜನವರಿ 20: ಆತ ಕೋಲ್ಕತಾ ಮೂಲದ ಯುವಕ. ಬದುಕಿನ ಬಂಡಿ ನಡೆಸಲಿಕ್ಕೆ ರೈಸ್ ಮಿಲ್ ಇಟ್ಟುಕೊಂಡಿದ್ದ. ಮಿಲ್ ನಲ್ಲಿ ಲಾಸ್ ಆಗಿ ಬೀದಿಗೆ ಬಿದ್ದಿದ್ದವ ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಮಿಲೇನಿಯರ್ ಆಗಿದ್ದ ! ಮಿಲ್ ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡು ಬೀದಿಗೆ ಬಿದ್ದದ್ದ ಯುವಕ ಕೋಟ್ಯಾಧಿಪತಿ ಆಗಿರುವ ಹಿಂದೆ ರೋಚಕ ಸಂಗತಿ ಇದೆ. ಅದು ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಕತೆ. ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದ ಆರೋಪಿ ಶ್ರೀಕಿಯ ಬಿಟ್ ಕಾಯಿನ್ ವ್ಯವಹಾರದ ಸಂಗತಿ ಸಿಸಿಬಿ ತನಿಖೆಯಲ್ಲಿ ಹೊರ ಬಿದ್ದಿದೆ.
ರೈಸ್ ಮಿಲ್ ನಡೆಸುತ್ತಿದ್ದ ಕೋಲ್ಕತಾ ಮೂಲದ ರಾಬಿನ್ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದೇ ಹ್ಯಾಕರ್ ಶ್ರೀಕಿಯಿಂದ. ರೈಸ್ ಮಿಲ್ ವ್ಯಾಪಾರದಲ್ಲಿ ನಷ್ಟ ಹೊಂದಿದ್ದ ರಾಬಿನ್ ಬಿಟ್ ಕಾಯಿನ್ ವ್ಯವಹಾರಕ್ಕೆ ಇಳಿದಿದ್ದ. ಬಿಟ್ ಕಾಯಿನ್ ವಹಿವಾಟಿನ ಭಾಗವಾಗಿ ಹ್ಯಾಕರ್ ಶ್ರೀಕೃಷ್ಣ ಪರಿಚಯವಾಗಿದ್ದ. ಬಿಟ್ ಕಾಯಿನ್ ಜಂಕ್ಷನ್ ಗಳನ್ನು ಬ್ಲಾಕ್ ಮಾಡುವಲ್ಲಿ ನಿಪುಣತೆ ಸಾಧಿಸಿದ್ದ ಶ್ರೀಕಿ ಹ್ಯಾಕ್ ಮಾಡಿ ಸಂಪಾದಿಸುತ್ತಿದ್ದ ಬಿಟ್ ಕಾಯಿನ್ ಎಕ್ಸ್ ಚೇಂಜ್ ಮಾಡಲಿಕ್ಕೆ ಪರದಾಡುತ್ತಿದ್ದ. ಬಿಟ್ ಕಾಯಿನ್ ಎಕ್ಸ್ ಚೇಂಜ್ ಕೆಲಸವನ್ನು ರಾಬಿನ್ ಮಾಡುತ್ತಿದ್ದ. ಹೀಗೆ ರಾಬಿನ್ ಪರಿಚಯದ ಬಳಿಕ ಶ್ರೀಕಿ ಹ್ಯಾಕ್ ಮಾಡುತ್ತಿದ್ದ ಬಿಟ್ ಕಾಯಿನ್ ಕರೆನ್ಸಿಯನ್ನು ಆತನ ಮೂಲಕವೇ ಬದಲಾವಣೆ ಮಾಡಿಸುತ್ತಿದ್ದ. ಬಿಟ್ಟಿಯಾಗಿ ಹ್ಯಾಕ್ ಮಾಡಿ ಗಳಿಸುತ್ತಿದ್ದ ಬಿಟ್ ಕಾಯಿನ್ ನ್ನು ಬದಲಾವಣೆ ಮಾಡಿಸಿಕೊಟ್ಟಿದ್ದಕ್ಕಾಗಿ ಲಕ್ಷಾಂತರ ರೂಪಾಯಿ ಕಮೀಷನ್ ರಾಬಿನ್ ಗೆ ಕೊಡುತ್ತಿದ್ದ.

Recommended Video
ಹೀಗೆ ಬಿಟ್ ಕಾಯಿನ್ ಎಕ್ಸ್ ಚೇಂಜ್ ವ್ಯವಹಾರ ನಡೆಸಿದ ರಾಬಿನ್ ರಾತ್ರೋ ರಾತ್ರಿ ಕೋಟ್ಯಾಧೀಶ್ವರನಾಗಿದ್ದ. ರೈಸ್ ಮಿಲ್ ವಹಿವಾಟಿನ ಹೆಸರಿನಲ್ಲಿ ಅಕ್ರಮವಾಗಿ ಕೋಟಿಗಳನ್ನು ಗಳಿಸಿದ್ದ. ರಾಬಿನ್ ನೋಡ ನೋಡುತ್ತಿದ್ದಂತೆ ಶ್ರೀಮಂತನಾಗಿದ್ದನ್ನು ನೋಡಿ ಎಲ್ಲರೂ ಬೆರಗಾಗಿದ್ದರು. ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಶ್ರೀಕಿ, ಅಲಿಯಾಸ್ ಶ್ರೀಕೃಷ್ಣನ ವಿಚಾರಣೆ ವೇಳೆ ಇದನ್ನು ಬಾಯಿಬಿಟ್ಟಿದ್ದಾನೆ. ಶ್ರೀಕಿ ಮೂಲಕವೇ ಕರೆ ಮಾಡಿಸಿ ಖಾಸಗಿ ಹೋಟೆಲ್ ಗೆ ರಾಬಿನ್ ನನ್ನು ಕರೆಸಿಕೊಂಡು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಬಿಟ್ ಕಾಯಿನ್ ವಹಿವಾಟು ನಡೆಸಿರುವುದಕ್ಕೆ ಮಹತ್ವದ ಸಾಕ್ಷಾಧಾರಗಳು ಲಭ್ಯವಾಗಿವೆ. ಸಿಸಿಬಿ ವಶದಲ್ಲಿರುವ ರಾಬಿನ್ ನೀಡುವ ಮಾಹಿತಿ ಮೇರೆಗೆ ಶ್ರೀಕಿಯ ಮತ್ತಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.
-
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ











Click it and Unblock the Notifications