ಇದು ದೇಶದ ಯುವಶಕ್ತಿಯ ವಿಜಯ : ಅಣ್ಣಾ ಹಜಾರೆ
ನವದೆಹಲಿ,
ಆ .28: ಗಾಂಧಿವಾದಿ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ಅಂತ್ಯಗೊಳ್ಳುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಇದು ದೇಶದ ಜನಶಕ್ತಿಗೆ ಸಂದ ವಿಜಯ ಎಂದು ಅಣ್ಣಾ ಘೋಷಿಸಿದ್ದಾರೆ. id="toptextpromo">ಮೇದಾಂತ
ಆಸ್ಪತ್ರೆಯ ವೈದ್ಯ ತೆಹ್ರಾನ್ ಅವರು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಟೀಂ ಅಣ್ಣಾದ ಎಲ್ಲಾ ಸದಸ್ಯರು, ನಮ್ಮ ಬೇಡಿಕೆಗೆ ಒಪ್ಪಿದ ಸಂಸದರು, ಸರ್ಕಾರದ ಪ್ರತಿನಿಧಿಗಳಿಗೆ ವಂದನೆಗಳನ್ನು ಅಣ್ಣಾ ಅರ್ಪಿಸಿದರು. id='are-slot-1' class='oiad oi-axt oiadv'> id='top-searched-articles'>ಅಣ್ಣಾ
ಹಜಾರೆ
ಭಾಷಣದ
ಮುಖ್ಯಾಂಶ
ಹೀಗಿದೆ:
* ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ.
* ಚುನಾವಣಾ ಪದ್ಧತಿ ಬದಲಾಗಬೇಕು. ಇದಕ್ಕಾಗಿ ಮತ್ತೆ ಹೋರಾಟಕ್ಕೆ ಇಳಿಬೇಕು.
* ಉಪವಾಸ ಸತ್ಯಾಗ್ರಹ ನಿಲ್ಲಿಸಿಲ್ಲ. ಸ್ಥಗಿತಗೊಳಿಸಿದ್ದೀನಿ ಅಷ್ಟೆ.
* ಜನ ಲೋಕಪಾಲ ಮಂಡನೆ ಆಯಿತು ಎಂದು ಸುಮ್ಮನೆ ಕೂಡಾ ಬೇಡಿ, ಸಮಾಜದ ವ್ಯವಸ್ಥೆ ಬದಲಿಸಿ.
* ಅಣ್ಣಾ ಬೆಂಬಲಿಗರಾಗಬೇಡಿ. ಅಣ್ಣಾ ಹೆಸರಿನ ಟೋಪಿ, ಟೀ ಶರ್ಟ್ ಧರಿಸಿ 'ನಾನು ಅಣ್ಣಾ' ಎಂದು ಹೇಳುವುದಕ್ಕಿಂತ, ವಾಸ್ತವವಾಗಿ ಅಣ್ಣಾ ತತ್ವವನ್ನು ಪಾಲಿಸಿ, ಆಚರಿಸಿ.
* ಭ್ರಷ್ಟರನ್ನು ದೂಷಿಸುವ ಮೊದಲು ನೀವು ಶುದ್ಧರಾಗಿ, ಇಂದೇ ಸಂಕಲ್ಪ ಕೈಗೊಳ್ಳಿ.
* ಪರಿಸರ ಮಾಲಿನ್ಯ ಅತಿ ದೊಡ್ಡ ಸಮಸ್ಯೆಯಾಗಿದೆ. ಕುಡಿಯುವ ನೀರು, ಪೆಟ್ರೋಲ್, ಆಹಾರ ಸಿಗದೆ ದುರ್ಭಿಕ್ಷ ಕಾಲ ಎದುರಿಸಬೇಕಾಗಿತು ಎಚ್ಚರ.
* ಯುವಶಕ್ತಿ ಒಗ್ಗೂಡಿದರೆ ಎಲ್ಲವೂ ಸಾಧ್ಯ ಆದರೆ, ತಾಳ್ಮೆಯಿರಲಿ.












Click it and Unblock the Notifications