ಇದು ದೇಶದ ಯುವಶಕ್ತಿಯ ವಿಜಯ : ಅಣ್ಣಾ ಹಜಾರೆ

Anna HAzare speech
ನವದೆಹಲಿ, ಆ .28: ಗಾಂಧಿವಾದಿ ಅಣ್ಣಾ ಹಜಾರೆ ಅವರ ಉಪವಾಸ ಸತ್ಯಾಗ್ರಹ ಅಂತ್ಯಗೊಳ್ಳುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಇದು ದೇಶದ ಜನಶಕ್ತಿಗೆ ಸಂದ ವಿಜಯ ಎಂದು ಅಣ್ಣಾ ಘೋಷಿಸಿದ್ದಾರೆ.

ಮೇದಾಂತ ಆಸ್ಪತ್ರೆಯ ವೈದ್ಯ ತೆಹ್ರಾನ್ ಅವರು ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಟೀಂ ಅಣ್ಣಾದ ಎಲ್ಲಾ ಸದಸ್ಯರು, ನಮ್ಮ ಬೇಡಿಕೆಗೆ ಒಪ್ಪಿದ ಸಂಸದರು, ಸರ್ಕಾರದ ಪ್ರತಿನಿಧಿಗಳಿಗೆ ವಂದನೆಗಳನ್ನು ಅಣ್ಣಾ ಅರ್ಪಿಸಿದರು.

ಅಣ್ಣಾ ಹಜಾರೆ ಭಾಷಣದ ಮುಖ್ಯಾಂಶ ಹೀಗಿದೆ:
* ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ.
* ಚುನಾವಣಾ ಪದ್ಧತಿ ಬದಲಾಗಬೇಕು. ಇದಕ್ಕಾಗಿ ಮತ್ತೆ ಹೋರಾಟಕ್ಕೆ ಇಳಿಬೇಕು.
* ಉಪವಾಸ ಸತ್ಯಾಗ್ರಹ ನಿಲ್ಲಿಸಿಲ್ಲ. ಸ್ಥಗಿತಗೊಳಿಸಿದ್ದೀನಿ ಅಷ್ಟೆ.
* ಜನ ಲೋಕಪಾಲ ಮಂಡನೆ ಆಯಿತು ಎಂದು ಸುಮ್ಮನೆ ಕೂಡಾ ಬೇಡಿ, ಸಮಾಜದ ವ್ಯವಸ್ಥೆ ಬದಲಿಸಿ.
* ಅಣ್ಣಾ ಬೆಂಬಲಿಗರಾಗಬೇಡಿ. ಅಣ್ಣಾ ಹೆಸರಿನ ಟೋಪಿ, ಟೀ ಶರ್ಟ್ ಧರಿಸಿ 'ನಾನು ಅಣ್ಣಾ' ಎಂದು ಹೇಳುವುದಕ್ಕಿಂತ, ವಾಸ್ತವವಾಗಿ ಅಣ್ಣಾ ತತ್ವವನ್ನು ಪಾಲಿಸಿ, ಆಚರಿಸಿ.
* ಭ್ರಷ್ಟರನ್ನು ದೂಷಿಸುವ ಮೊದಲು ನೀವು ಶುದ್ಧರಾಗಿ, ಇಂದೇ ಸಂಕಲ್ಪ ಕೈಗೊಳ್ಳಿ.
* ಪರಿಸರ ಮಾಲಿನ್ಯ ಅತಿ ದೊಡ್ಡ ಸಮಸ್ಯೆಯಾಗಿದೆ. ಕುಡಿಯುವ ನೀರು, ಪೆಟ್ರೋಲ್, ಆಹಾರ ಸಿಗದೆ ದುರ್ಭಿಕ್ಷ ಕಾಲ ಎದುರಿಸಬೇಕಾಗಿತು ಎಚ್ಚರ.
* ಯುವಶಕ್ತಿ ಒಗ್ಗೂಡಿದರೆ ಎಲ್ಲವೂ ಸಾಧ್ಯ ಆದರೆ, ತಾಳ್ಮೆಯಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+