ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇಂದು ಕೇಂದ್ರ ರೈಲ್ವೆ ಬಜೆಟ್ ಮಂಡನೆ
ರೈಲ್ವೆ ವಿಚಾರದಲ್ಲಿ ರಾಜ್ಯದ ನಿರೀಕ್ಷೆಗಳು ನೂರಾರಿವೆ. ಇದರಲ್ಲಿ ಘೋಷಣೆಗಳಾಗುವುವು ಎಷ್ಟು ? ನಿರೀಕ್ಷೆಗಳಾಗಿಯೇ ಉಳಿಯುವವು ಎಷ್ಟು ? ಇಂತಹ ಕುತೂಹಲ ತೀವ್ರಗೊಂಡಿದೆ. ರಾಜ್ಯದಿಂದ ಆ ಬಾರಿ ಐದು ಜನ ಕೇಂದ್ರ ಸಚಿವರಾಗಿರುವುದು. ಅದರಲ್ಲೂ ಮುನಿಯಪ್ಪ ರೈಲ್ವೆ ಖಾತೆಯ ರಾಜ್ಯ ಮಂತ್ರಿಯಾಗಿರುವುದು ನಿರೀಕ್ಷೆಗಳ ಚಿಗುರು ಹೆಚ್ಚಾಗಿದೆ.
ರಾಜ್ಯದ ಬೇಡಿಕೆಗಳು ಇಂದೂ ನಿನ್ನೆಯದಲ್ಲ. ಹತ್ತಾರು ವರ್ಷಗಳಿಂದ ರಾಜ್ಯದ ಜನತೆ ಹೊಸ ರೈಲುಗಳು, ಹೊಸ ಮಾರ್ಗಗಳು, ರೈಲುಗಳ ಜೋಡಣೆ, ಜೋಡಿ ಮಾರ್ಗ, ಗೇಟ್ ಪರಿವರ್ತನೆಯಂತಹ ವಿಚಾರಗಳಲ್ಲಿ ಕೂಗುತ್ತಿರುವ ಕೂಗು, ಅದು ಅರಣ್ಯರೋಧನವಾಗುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಗುಲ್ಬರ್ಗಾ, ಹೀಗೆ ಪ್ರತಿಯೋಂದು ವಲಯದಲ್ಲಿಯೂ ಬೇಡಿಕೆಗಳ ಪಟ್ಟಿಯೇ ಇದೆ. ಈ ಬೇಡಿಕೆಗಳಲ್ಲಿ ಮಮತಾ ಬ್ಯಾನರ್ಜಿ ಸ್ಪಂದಿಸುತ್ತಾರೆಯೇ ಎನ್ನುವುದು ಇಷ್ಟರಲ್ಲಿ ತಿಳಿಯಲಿದೆ.
(ದಟ್ಸ್ ಕನ್ನಡ ವಾರ್ತೆ)
Comments
ನವದೆಹಲಿ new delhi lalu prasad yadav ಲಾಲು ಪ್ರಸಾದ ಯಾದವ್ kh muniyappa ಮಮತಾ ಬ್ಯಾನರ್ಜಿ mamata banerjee ಕೆಎಚ್ ಮುನಿಯಪ್ಪ ರೈಲ್ವೆ ಬಜೆಟ್ railway budget
Story first published: Friday, July 3, 2009, 10:27 [IST]