ನಾಗತಿಹಳ್ಳಿ ಸಂಸ್ಕೃತಿ ಹಬ್ಬದ ಚಿತ್ರಗಳು
'ಋಣಪ್ರಜ್ಞೆ’ಯ ಅಭಿವ್ಯಕ್ತಿ 'ನಾಗತಿಹಳ್ಳಿ ಸಂಸ್ಕೃತಿ ಹಬ್ಬ 2004’ ಏಪ್ರಿಲ್ 18ರಿಂದ 23ರವರೆಗೆ ನಡೆಯಿತು. ನಾಗತಿಹಳ್ಳಿ ಚಂದ್ರಶೇಖರರ ಬಳಗ ದೊಡ್ಡದು. ಹಾಗಾಗಿ ಹಬ್ಬದ ಕಳೆ ಜೋರಾಗಿತ್ತು . ಸಂಸ್ಕೃತಿ ಹಬ್ಬಕ್ಕೆ ನಾಡಿನ ನಾನಾಮೂಲೆಯಿಂದ ವಿವಿಧ ಕ್ಷೇತ್ರಗಳ ಜನ ತಮಗೆ ಬಿಡುವಾದಾಗ ಬಂದು ಹೋದರು. ಕಂಬಾರ, ಶಿವರುದ್ರಪ್ಪನವರಂಥ ಹಿರಿಯರೂ ಹಬ್ಬದ ಸಿಹಿ ಹೆಚ್ಚಿಸಿ ಹೋದರು. ಹೀಗಾಗಿ ನಾಗತಿಹಳ್ಳಿಗೆ ಮಾತ್ರ ಸೀಮಿತವಾಗಿದ್ದ ಸಂಸ್ಕೃತಿ ಹಬ್ಬದ ಸಿಹಿ ಊರಮೇರೆಗಳನ್ನು ಮೀರಿತು.
ಇದೇ ಹಬ್ಬದಲ್ಲಿ ಶಿಕಾರಿಪುರ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿಗಳನ್ನು ಗೌರವಿಸಲಾಯಿತು. ಮೈಸೂರಿನಲ್ಲಿ ನೆಲೆಸಿದ್ದರೂ, ಅಮೆರಿಕನ್ನಡಿಗರು ಹಾಗೂ ತವರು ಕನ್ನಡಿಗರ ನಡುವಣ ಸೇತುವಂತಿರುವ ಹರಿಹರೇಶ್ವರ ದಂಪತಿಗಳಿಗೆ ಸಂದ ಈ ಸನ್ಮಾನ, ಒಂದರ್ಥದಲ್ಲಿ ಅನಿವಾಸಿ ಕನ್ನಡಿಗರಿಗೆಲ್ಲ ಸಂದ ಗೌರವ. ಈ ಸಮರ್ಪಣೆಯ ಹಿಂದೆ 'ಇಂಥ ಕಾರ್ಯಕ್ರಮಗಳು ನಿಮ್ಮಿಂದಲೂ ಆಗಲಿ’ ಎನ್ನುವ ಪ್ರೇರಣೆಯೂ ಇತ್ತು . ಒಳ್ಳೆಯ ಕೆಲಸ ಎಲ್ಲರಿಂದಲೂ ಆಗಲಿ.
ವೈದ್ಯಕೀಯ ಶಿಬಿರ, ಗಿಡ ನೆಡುವುದು, ನಾಟಕೋತ್ಸವ, ಸಂಗೀತೋತ್ಸವ, ಕವಿಮೇಳ, ತಾರಾಮೇಳ, ಊರದೇವತೆ ಮೆರವಣಿಗೆ, ಹರಿಕಥೆ.... ಹೀಗೆ 'ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಬೀಸು ದೊಡ್ಡದು. ಇಲ್ಲಿರುವುದು ನಾಲ್ಕು ಚಿತ್ರಗಳು ಮಾತ್ರ. ಇದು ಸಂಸ್ಕೃತಿ ಹಬ್ಬದ ಒಂದು ಮುಖ ಮಾತ್ರ.ಸಂಸ್ಕೃತಿ ಹಬ್ಬ 2004ಕ್ಕೆ ಮಾತ್ರ ಸೀಮಿತವಾಗದಿರಲಿ.
-
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್












Click it and Unblock the Notifications