Amazon Layoffs: ಅಮೆಜಾನ್ನಿಂದ ಮತ್ತೆ ಉದ್ಯೋಗ ವಜಾ, ಮೂರೇ ವರ್ಷದಲ್ಲಿ 57,000 ಮಂದಿ ಮನೆಗೆ
Amazon Layoffs: ವಿಶ್ವದ ದಿಗ್ಗಜ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾಗಿರುವ ಅಮೆಜಾನ್ ತನ್ನ ನೌಕರರ ಉದ್ಯೋಗ ವಜಾ ಪ್ರಕ್ರಿಯೆ ಮುಂದುವರಿಸಿದೆ. ಕೋವಿಡ್ನಿಂದ ಈವರೆಗೆ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಇದೀಗ ರೊಬೋಟಿಕ್ಸ್ ವಿಭಾಗದ ಉದ್ಯೋಗಿಗಳನ್ನು ವಜಾಗೊಳಿಸಿರುವುದು ದೊಡ್ಡ ಸುದ್ದಿಯಾಗಿದೆ. ಇದರಿಂದ ಕಂಪನಿಯ ಇತರ ನೌಕರರಲ್ಲೂ ವಜಾ ಆತಂಕ ಎದುರಾಗಿದೆ. ಅಮೆಜಾನ್ ಮಾತ್ರವಲ್ಲದೇ ವಿವಿಧ ಕಂಪನಿಗಳಿಂದ 2026ರಲ್ಲಿ ಜಾಗತಿಕವಾಗಿ ಸುಮಾರು 35,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಅಮೆಜಾನ್ ಕಂಪನಿಯು ತನ್ನಲ್ಲಿ ಕೆಲಸ ಮಾಡುತ್ತಿದ್ದ ರೊಬೋಟಿಕ್ಸ್ ವಿಭಾಗದ ಸುಮಾರು 100 ಮಂದಿ ನೌಕರರನ್ನು ಮುಲಾಜಿಲ್ಲದೇ ಕೆಲಸದಿಂದ ಕಿತ್ತು ಹಾಕಿದೆ. ವೆಚ್ಚ ಕಡಿತ, ತಂಡದ ಪುನರ್ರಚನೆ ಹಾಗೂ ಇನ್ನಿತರ ಕಾರಣಗಳನ್ನು ನೀಡಿರುವ ಕಂಪನಿಯು ವಜಾಗೊಳಿಸಿದೆ ಎಂದು ವರದಿ ಆಗಿದೆ. ಇದು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 57,000 ಮಂದಿಗೆ ಅಮೆಜಾನ್ ಗೇಟ್ ಪಾಸ್ ನೀಡಿದೆ.

ಮುಲ್ಲಾಜಿಲ್ಲದೇ ನೌಕರರ ವಜಾ, ಕಾರಣವೇನು?
ಕಂಪನಿಯು ಕೆಲಸಗಾರರನ್ನು ಪುನರ್ ರಚಿಸುತ್ತಿದೆ. ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ವಜಾ ಪ್ರಕ್ರಿಯೆ ನಡೆಸಿದೆ. ವೈಟ್ ಕಾಲರ್ ನೌಕರರನ್ನು ಗೇಟ್ ಪಾಸ್ ನೀಡಿದೆ. ಇದೇ ಕಂಪನಿಯು ಕೋವಿಡ್ ಹೊತ್ತಿನಲ್ಲಿ ಸಾಕಷ್ಟು ಜನರಿಗೆ ಕೆಲಸ ಕೊಟ್ಟಿತ್ತು. ಇದೀಗ ಮುಲ್ಲಾಜಿಲ್ಲದೇ ಮನೆಗೆ ಕಳುಹಿಸಿದೆ.
ಅಮೆಜಾನ್ ಸಿಇಒ ಆಂಡಿ ಜೆಸ್ಸಿ ನೇತೃತ್ವದಲ್ಲಿ ಸಂಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಮಾಡಲು ಮುಂದಾಗಿದ್ದೇವೆ. ವೆಚ್ಚ ನಿರ್ವಹಣೆ ಮೇಲೆ ಹಿಡಿತ ಸಾಧಿಸಲು, ಅಧಿಕಾರಶಾಹಿಗಳನ್ನು ಇಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಐಬಿಎಂ, ಗೂಗಲ್, ಮೆಟಾ, ಇಂಟೆಲ್, ಸೇರಿದಂತೆ ಕೆಲವು ಕಂಪನಿಗಳು ಉದ್ಯೋಗ ವಜಾ ಮಾಡಿತ್ತು. ಆಗಲೂ ನೌಕರರಿಗೆ ಗೇಟ್ ಪಾಸ್ ನೀಡಿದ್ದ ಅಮೆಜಾನ್ ತನ್ನ ವಜಾ ಅಭಿಯಾನ ಇಂದಿಗೂ ಮುಂದುವರಿಸಿದೆ.
2026ರಲ್ಲಿ 16,000 ನೌಕರರ ವಜಾ
AI ಬಂದ ಮೇಲೆ ಹೆಚ್ಚಿನ ಉದ್ಯೋಗ ವಜಾ ಆಗಿದೆ. ಕಳೆದ ವರ್ಷ 2025 ಅಕ್ಟೋಬರ್ ತಿಂಗಳಿನಲ್ಲಿ ಜಾಗತಿಕವಾಗಿ ಬರೋಬ್ಬರಿ 14000 ನೌಕರರಿಗೆ ವಜಾ ಮೇಲ್ ಮಾಡಿತ್ತು. ಪ್ರಸಕ್ತ ವರ್ಷ 2026ರ ಮೊದಲ ತಿಂಗಳಲ್ಲಿ ಸಹ ಒಟ್ಟು ಸುಮಾರು 16,000 ಕಾರ್ಪೊರೇಟ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇದೀಗ 100ಕ್ಕೂ ಹೆಚ್ಚು ನೌಕರರು ಮನೆಗೆ ಹೋಗಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದಾಗಿ ಮೆಟಾ, ಒರಾಕಲ್ನಿಂದ ಅಮೆಜಾನ್ವರೆಗೆ, ಟೆಕ್ ಕಂಪನಿಗಳು ವಿಶ್ವದಾದ್ಯಂತ 35,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿವೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications