Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ
ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆಯ ಬಗ್ಗೆ ಪತ್ರಕರ್ತ ಜಗದೀಶ್ ಕೊಪ್ಪ ಅವರ ಬರಹ ಇಲ್ಲಿದೆ.
ಪ್ರತಿ ವರ್ಷ ಬೇಸಿಗೆಯ ದಿನಗಳಲ್ಲಿ ನನಗೆ ಪರಿಸರ ರಕ್ಷಣೆಗೆ ಜೀವನ ಮುಡಿಪಾಗಿಟ್ಟವರು, ಕುಡಿಯುವ ನೀರಿನ ಮಹತ್ವವನ್ನು ಅರಿತು ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಮಳೆ ನೀರು ಸಂಗ್ರಹಕ್ಕಾಗಿ ಹಗಲು, ರಾತ್ರಿ ದುಡಿಯುವ ಮಹತ್ವದ ಜೀವಗಳು ನೆನಪಾಗುತ್ತಾರೆ. ನಮ್ಮ ನೆರೆಯ ಅನಂತಪುರ ಜಿಲ್ಲೆ (ಅನಂತಪುರಂ ಜಿಲ್ಲೆಯು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶವಾಗಿದೆ) ಇಡೀ ದಕ್ಷಿಣ ಭಾರತದ ಬರಪೀಡಿತ ಜಿಲ್ಲೆಗಳಲ್ಲಿ ಒಂದು. ಇಲ್ಲಿನ ಭೂಮಿಯ ಬೆಲೆ ಪ್ರತಿ ಎಕರೆಗೆ ನಲವತ್ತು ಸಾವಿರ ಅಂದರೆ, ಒಂದು ಗುಂಟೆಗೆ ಒಂದು ಸಾವಿರ. ಬೆಂಗಳೂರು ನಗರದಲ್ಲಿ ಒಂದು ಗುಂಟೆ ಭೂಮಿ ಬೆಲೆ ಒಂದು ಕೋಟಿ. ಇದು ನಾವು ಬದುಕುತ್ತಿರುವ ವರ್ತಮಾನದ ಜಗತ್ತಿನ ವೈರುಧ್ಯಗಳಲ್ಲಿ ಒಂದು.

ಕಳೆದ ಇಪ್ಪತ್ತೂದು ವರ್ಷಗಳಿಂದ ಅನಂತಪುರದಲ್ಲಿ ಅನೇಕ ಮಹನೀಯರು ಭೂಮಿಯನ್ನು ಕೊಂಡು, ಅಲ್ಲಿನ ಬರಡು ನೆಲವನ್ನು ಅರಣ್ಯವಾಗಿ ಪರಿವರ್ತಿಸಿದ್ದಾರೆ. ಮತ್ತೇ ಕೆಲವರು ಅಂತರ್ಜಲ ಹೆಚ್ಚಿಸಿ, ಅಲ್ಲಿನ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಿದ್ದಾರೆ. ಮಳೆಯಧಾರಿತ ಶೇಂಗಾ ಮತ್ತು ರಾಗಿ ಬೆಳಯನ್ನು ನಂಬಿ ಬದುಕಿದ್ದ ರೈತರು, ಅವರಿಂದಾಗಿ, ಮಳೆ ನೀರು ಸಂಗ್ರಹದ ಮಹತ್ವವನ್ನು ಈಗ ಅರಿತುಕೊಂಡಿದ್ದಾರೆ.
ಇದೀಗ ತೆಲಂಗಾಣದ ಅರಣ್ಯಾಧಿಕಾರಿ ವಿನೀತ್ ಎಂಬ ಯುವಕ ಅನಂತಪುರದ ನಾಲ್ಕನೂರು ಹಳ್ಳಿಗಳ ಜನರ ಮನವೊಲಿಸಿ ಕಲ್ಯಾಣದುರ್ಗ ಮತ್ತು ರಾಯಲದುರ್ಗ ಎಂಬ ಬರಡು ಪ್ರದೇಶಗಳ ಜನರ ಬಾಯಾರಿಕೆಯನ್ನು ಶಾಶ್ವತವಾಗಿ ತಡೆಗಟ್ಡಿದ್ದಾರೆ. 2008ರ ಬ್ಯಾಚ್ನ ಐ.ಎಫ್.ಎಸ್. ಅಧಿಕಾರಿಯಾಗಿ ಬಂದ ವಿನೀತ್, ತಮ್ಮ ಪತ್ನಿ ರೂಪಕ್ ಯಾದವ್ ಜೊತೆಗೂಡಿ ಇಡೀ ಗ್ರಾಮೀಣ ಬದುಕಿನ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ.
ನರೇಗಾ ಮತ್ತು ಇತರೆ ಸರ್ಕಾರಿ ಯೋಜನೆಯಡಿ ಕೆರೆ ಕಟ್ಟೆಗಳನ್ನು ನಿರ್ಮಿಸಿ, ಒಂದು ಹನಿ ಮಳೆ ನೀರು ಹರಿದು ವ್ಯರ್ಥವಾಗದಂತೆ ಶ್ರಮವಹಿಸಿದ್ದಾರೆ. ಇದರ ಜೊತೆಗೆ ಎಪ್ಪತ್ತು ಸಾವಿರ ಬೇವು, ಹುಣಸೆಯಂತೆ ದೇಶಿ ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸಿದ್ದಾರೆ. ಕುಡಿಯುವ ನೀರಿಗಾಗಿ ಸೈಕಲ್ಗೆ ನಾಲ್ಕು ಬಿಂದಿಗೆ ಕಟ್ಟಿಕೊಂಡು ಬರಗಾಲಲ್ಲಿ ನಡೆಯುತ್ತಿದ್ದ ಮತ್ತು ಸೈಕಲ್ ತಳ್ಳಿಕೊಂಡು ಬರುತ್ತಿದ್ದ ಮಹಿಳೆಯರ ಪಾಲಿಗೆ ವಿನೀತ್ ಈಗ ಜಲ ದೇವರಾಗಿದ್ದಾರೆ. ಇಂತಹ ಕಥನಗಳು ಅನಂತಪುರ ಜಿಲ್ಲೆಯೊಂದರಲ್ಲಿ ಇಪ್ಪತ್ತಕ್ಕೂ ಮೇಲ್ಪಟ್ಟಿವೆ. ವಿನೀತ್ ಈಗ ಪಕ್ಕದ ಕಡಪ ಜಿಲ್ಲೆಗೆ ವರ್ಗವಾಗಿ ಬಂದಿದ್ದಾರೆ. ಕಡಪ ಜಿಲ್ಲೆಯನ್ನು ಪರಿವರ್ತಿಸುವ ಆಲೋಚನೆಯಲ್ಲಿದ್ದಾರೆ.
ಯಾವ ರಾಜಕಾರಣಿ ಏನು ತಿಂದನು, ಏನು ವಿಸರ್ಜಿಸಿದನು, ಯಾವ ನಟಿ ಈದಿನ ಯಾವ ಬಣ್ಣದ ಒಳ ಉಡುಪು, ಧರಿಸಿದ್ದಳು ಎಂದು ಸುದ್ದಿ ಮಾಡುವುದು ಪತ್ರಿಕೋದ್ಯಮವಲ್ಲ. ಈ ನೆಲವನ್ನು, ಇಲ್ಲಿನ ಜಲವನ್ನು ಹಾಗೂ ಗಾಳಿಯನ್ನು ರಕ್ಷಿಸುತ್ತಾ, ಎಲೆ ಮರೆಯ ಕಾಯಿಯಂತೆ ಬದುಕುತ್ತಿರುವ ಜೀವಗಳತ್ತಲೂ ನಮ್ಮ ಕಣ್ಣು ಮತ್ತು ಹೃದಯ ಹರಿಯಬೇಕಿದೆ.
ಜಗದೀಶ್ ಕೊಪ್ಪ, ಮೈಸೂರು.
-
Bengaluru Water: ಬೆಂಗಳೂರು ಕೆಸಿ, ಎಚ್ ಎನ್ ವ್ಯಾಲಿ ನೀರಿನಿಂದ ಅಪಾಯವಿಲ್ಲ: ಸಚಿವ ಭೋಸರಾಜು -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications