Get Updates
Get notified of breaking news, exclusive insights, and must-see stories!

ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ

ಪರಿಶಿಷ್ಟ ಜಾತಿ ಸ್ಥಾನಮಾನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಗಳಿಗೆ ಸೇರಿದವರು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ಪಡೆಯಲು ಅರ್ಹರು. ಕ್ರಿಶ್ಚಿಯನ್ ಧರ್ಮದಂತಹ ಇನ್ನಿತರ ಧರ್ಮಗಳಿಗೆ ಮತಾಂತರಗೊಂಡರೆ ಆ ವ್ಯಕ್ತಿ ಪರಿಶಿಷ್ಟ ಜಾತಿ ಸ್ಥಾನಮಾನ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಇದು ಹಲವು ಸಮುದಾಯದ ಜನರಲ್ಲಿ ಆತಂಕ ಉಂಟು ಮಾಡಿದೆ ಎಂದು ಕೆಲವು ಅಂಶಗಳನ್ನು ಪ್ರಸ್ತಾಪಿಸಿರುವ ಕರ್ನಾಟಕ ಕಾಂಗ್ರೆಸ್ ಅಸಮಾಧಾನ ಹೊರ ಹಾಕಿದೆ.

ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್‌ 'ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು, ಕ್ರೈಸ್ತರು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರಿಗೆ 'ಎಸ್‌ಸಿ ಹುದ್ದೆ' ನಿರಾಕರಿಸುವ ಕುರಿತು, ಅಲ್ಪಸಂಖ್ಯಾತ ಸಮುದಾಯಗಳ ಬಡ ವರ್ಗಗಳಲ್ಲಿ ಗಂಭೀರ ಆತಂಕ, ಅಶಾಂತಿ ಮತ್ತು ಭಯವನ್ನು ಉಂಟು ಮಾಡಿದೆ ಎಂದಿದೆ.

SC Ruling on SC Status

ಧರ್ಮಾಂತರವಾದ ನಂತರವೂ 'ಎಸ್‌ಸಿ ಹುದ್ದೆ' (ಅಥವಾ ಹಿಂದುಳಿದ ವರ್ಗಗಳ ಹುದ್ದೆ) ನೀಡುವ ಪ್ರಶ್ನೆ, ಸಮಾಜದ ಹಿಂದುಳಿದ ಮತ್ತು ಅತೀ ದೀನ ವರ್ಗಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದು ಕೇವಲ ಸಂವಿಧಾನದ (ಅನುಸೂಚಿತ ಜಾತಿಗಳ) ಆದೇಶ, 1950 ಅನ್ನು ಸರಳವಾಗಿ ವ್ಯಾಖ್ಯಾನಿಸುವ ಮೂಲಕ ನಿರ್ಧರಿಸಲಾಗುವ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ಒಂದಷ್ಟು ಅನುಮಾನ ಹಾಗೂ ಮೂಲಭೂತ ಪ್ರಶ್ನೆಗಳನ್ನು ಪಕ್ಷ ಮುಂದಿಟ್ಟಿದೆ.

Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ

ಮೂಲಭೂತ ಪ್ರಶ್ನೆಗಳಿಗೆ ಉತ್ತರ ಬೇಕೆಂದ ಕಾಂಗ್ರೆಸ್

* ⁠ಧರ್ಮಾಂತರವಾದ ನಂತರ 'ಎಸ್‌ಸಿ ಹುದ್ದೆ' ನೀಡುವ ಪ್ರಶ್ನೆ 21/1/2011ರಿಂದಲೇ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಬಾಕಿಯಿದೆ (Centre, PIL v/s Union of India, Writ Petition 180 of 2004). ಹೀಗಿರುವಾಗ, ದೊಡ್ಡ ಪೀಠಕ್ಕೆ ಒಪ್ಪಿಸದೇ ಇಬ್ಬರು ನ್ಯಾಯಮೂರ್ತಿಗಳ ಪೀಠವು ಈ ವಿಷಯವನ್ನು ಹೇಗೆ ತೀರ್ಮಾನಿಸಬಹುದು? ಎಂದು ಕೇಳಿದೆ.

* ⁠ಈ ವಿಷಯ ಈಗಾಗಲೇ 3 ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಯಲ್ಲಿದೆ ಎಂಬುದನ್ನು ಪ್ರಧಾನಮಂತ್ರಿ ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಏಕೆ ತಿಳಿಸಲಿಲ್ಲ? ಇದು ಸರ್ಕಾರದ ಉದ್ದೇಶಪೂರ್ವಕ ನಡೆನಾ? ಎಂದು ಅನುಮಾನ ಹೊರ ಹಾಕಿದೆ.

21/1/2011ರಂದು ಸುಪ್ರೀಂ ಕೋರ್ಟ್ ಈ ಪ್ರಶ್ನೆಯನ್ನು ವಿಚಾರಣೆಗಾಗಿ ರೂಪಿಸಿದೆ ಎಂಬುದನ್ನು ಸರ್ಕಾರ ಏಕೆ ತಿಳಿಸಲಿಲ್ಲ? 2022ರಲ್ಲಿ ಈ ವಿಷಯವನ್ನು ಪರಿಶೀಲಿಸಲು ಮಾಜಿ ಮುಖ್ಯ ನ್ಯಾಯಮೂರ್ತಿ ಜಿ. ಬಾಲಕೃಷ್ಣನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ಅದರ ವರದಿ ಇನ್ನೂ ಬಾರದಿರುವುದನ್ನು ಸರ್ಕಾರ ಏಕೆ ತಿಳಿಸಲಿಲ್ಲ? ಹಾಗಿದ್ದರೆ, ಈ ವಿಷಯವನ್ನು ಮುಂಚಿತವಾಗಿ ಹೇಗೆ ನಿರ್ಧರಿಸಬಹುದು? ಇದು ನ್ಯಾಯಾಲಯವನ್ನು ತಪ್ಪು ದಾರಿಗೆಳೆಯುವ ಉದ್ದೇಶಪೂರ್ವಕ ಪ್ರಯತ್ನವಲ್ಲವೇ?.

* ⁠ಸುಪ್ರೀಂ ಕೋರ್ಟ್‌ನ ಈ ಪ್ರಕರಣವು 'ಎಸ್‌ಸಿ ಅಟ್ಟ್ರಾಸಿಟೀಸ್ ಕಾಯ್ದೆ'ಗೆ ಸಂಬಂಧಪಟ್ಟದ್ದೇ ಹೊರತು ಮೀಸಲಾತಿಗೆ ಸಂಬಂಧಪಟ್ಟದಲ್ಲ ಎಂಬ ಸರ್ಕಾರದ ವಾದ ಸರಿಯೇ? ಇದು ತಪ್ಪು ಹಾಗೂ ಅಸಂಗತವಾದ. ಒಬ್ಬ ವ್ಯಕ್ತಿ 'ಮೀಸಲಾತಿಗೆ' ಎಸ್‌ಸಿ ಆಗಿ ಪರಿಗಣಿಸಲ್ಪಟ್ಟು, 'ಅಟ್ಟ್ರಾಸಿಟೀಸ್ ಕಾಯ್ದೆ'ಗೆ ಮಾತ್ರ ಎಸ್‌ಸಿ ಅಲ್ಲ ಎಂದು ಹೇಳುವುದು ಸಾಧ್ಯವೇ?

*⁠ ⁠ಅಲ್ಪಸಂಖ್ಯಾತರಿಗೆ ಮೀಸಲಾತಿ ಲಾಭಗಳನ್ನು ನಿರಾಕರಿಸುವ ಬಿಜೆಪಿಯ ರಾಜಕೀಯ ನಿಲುವಿನಿಂದಲೇ ಈ ಭೇದಭಾವ ಮೂಡಿದುದೇ?. ಸಂಸತ್ತಿನಲ್ಲಿ ⁠1996ರಲ್ಲಿ ಕ್ರೈಸ್ತ ಧರ್ಮಾಂತರಿತ ಎಸ್‌ಸಿಗಳಿಗೆ ಎಸ್‌ಸಿ ಹುದ್ದೆ ವಿಚಾರ ಪ್ರಸ್ತಾಪಿಸಿ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಒಂದಷ್ಟು ಅಂಶಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ರಾಜಕೀಯ ಇರುವ ಬಗ್ಗೆ ಅನುಮಾನ ಹೊರ ಹಾಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+