Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವ ಸಾಕಷ್ಟು ಉಪಕ್ರಮ ಜಾರಿಗೆ ತಂದಿದೆ. ಮುಂದುವರಿದು ಇದೀಗ ಮೊದಲು ಬುಕ್ ಮಾಡಿ ನಂತರ ಕಾರಣಾಂತರಗಳಿಂದ ಮಾಡುವ ಟಿಕೆಟ್ ರದ್ದತಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಏಪ್ರಿಲ್ನಲ್ಲಿ ಜಾರಿಗೆ ತರಲು ಮುಂದಾಗಿದೆ. ಈ ಮೂಲಕ ಮಧ್ಯವರ್ತಿಗಳ ಟಿಕೆಟ್ ಬುಕಿಂಗ್ ದುರುಪಯೋಗ ತಡೆಗಟ್ಟಲಿದೆ.
ದೃಢಪಡಿಸಿದ ಟಿಕೆಟ್ಗಳ ರದ್ದತಿಗೆ ತನ್ನ ನಿಯಮಗಳನ್ನು ರೈಲ್ವೆ ಇಲಾಖೆ ಪರಿಷ್ಕರಿಸಿ ಹೊಸ ನಿಯಮಗಳು ಏಪ್ರಿಲ್ 1 ರಿಂದ ಏಪ್ರಿಲ್ 15ರ ನಡುವೆ ಜಾರಿಗೆ ತರಲಿದೆ. ಈ ನಿಯಮದ ಪ್ರಕಾರ ಬೋರ್ಡಿಂಗ್ ನಿಲ್ದಾಣಗಳಲ್ಲಿ ಕೊನೆಯ ಕ್ಷಣದ ಬದಲಾವಣೆ ಮಾಡುವ ಪ್ರಯಾಣಿಕರಿಗೆ ಪ್ರಯೋಜನ ಒದಗಿಸುತ್ತದೆ. ರೈಲು ನಿಲ್ದಾಣದಿಂದ ಹೊರಡುವ ಸಮಯ ಹಲವು ಗಂಟೆಗಳ ಆಧಾರದಲ್ಲಿ ಟಿಕೆಟ್ ರದ್ದತಿ, ರದ್ದುಗೊಂಡ ಟಿಕೆಟ್ ಹಣದ ಪೈಕಿ ಎಷ್ಟು ದಂಡವಾಗಿ ಕಡಿತಗೊಳ್ಳಲಿದೆ, ಎಷ್ಟು ಮರಳಿ ಪ್ರಯಾಣಿಕರಿಗೆ ಪಾವತಿ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.

ಟಿಕೆಟ್ ರದ್ದು ಸಮಯ, ಹಣ ಮರುಪಾವತಿ
ಪರಿಷ್ಕೃತ ನಿಯಮಗಳ ಪ್ರಕಾರ, ರೈಲು ನಿರ್ಗಮಿಸುವ 72 ಗಂಟೆಗೂ ಮೊದಲು ಟಿಕೆಟ್ ರದ್ದುಗೊಳಿಸಿದರೆ ಪ್ರಯಾಣಿಕರಿಗೆ ಮರಳಿ ಗರಿಷ್ಠ ಹಣ ಮರು ಪಾವತಿ ಆಗುತ್ತದೆ. ಒಬ್ಬ ಪ್ರಯಾಣಿಕ ಪ್ರಯಾಣಕ್ಕೂ ಮುನ್ನ 72 ಗಂಟೆಗಳಿಂದ 24 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ ಶೇ.25ರಷ್ಟು ಹಣ ದಂಡವಾಗಿ ಕಡಿತಗೊಂಡು ಉಳಿದ ಹಣವನ್ನು ಮರು ಪಾವತಿ ರೂಪದಲ್ಲಿ ಪಡೆಯುತ್ತಾರೆ.
ಪ್ರಯಾಣಕ್ಕೂ ಕೆಲವೇ ಗಂಟೆಗಳ ಮುಂಚಿತವಾಗಿ ಅಂದರೆ ಟಿಕೆಟ್ ರದ್ದುಗೊಳಿಸುವುದು ತಡವಾದರೆ ದಂಡದ ಪ್ರಮಾಣ ಹೆಚ್ಚಾಗುತ್ತದೆ. ಕೇವಲ 24ರಿಂದ 8 ಗಂಟೆಗಳ ನಡುವೆ ಟಿಕೆಟ್ ರದ್ದುಗೊಳಿಸಿದರೆ, ಕನಿಷ್ಠ ಶುಲ್ಕಕ್ಕೆ ಒಳಪಟ್ಟು ಅರ್ಧದಷ್ಟು (50 ಪ್ರತಿಶತ) ಟಿಕೆಟ್ ಕಡಿತಗೊಳ್ಳುತ್ತದೆ. ರೈಲು ನಿರ್ಗಮನ ಸಮಯಕ್ಕಿಂತ ಅತೀ ಕಡಿಮೆ ಸಮಯವಿದ್ದಾಗ ಟಿಕೆಟ್ ರದ್ದುಗೊಳಿಸಲು, ಮರುಪಾವತಿಗೆ ಅನುಮತಿ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದಲ್ಲಾಳಿಗಳ ಟಿಕೆಟ್ ಬುಕಿಂಗ್ಗೆ ಕಡಿವಾಣ
ಟಿಕೆಟ್ ಮಾದರಿಗಳ ಮೌಲ್ಯಮಾಪನದ ಪ್ರಕಾರ, ರೈಲು ನಿರ್ಗಮನ ಸಮಯಕ್ಕೂ ಮೊದಲು ದಲ್ಲಾಳಿಗಳು ಹೆಚ್ಚು ಟಿಕೆಟ್ಗಳನ್ನು ಬುಕ್ ಮಾಡುತ್ತಾರೆ. ನಂತರ ಮಾರಾಟವಾಗದ ಟಿಕೆಟ್ಗಳನ್ನು ರದ್ದುಗೊಳಿಸುತ್ತಾರೆ. ಇದರಿಂದಾಗಿ ಗಮನಾರ್ಹ ಬುಕಿಂಗ್ ಮೊತ್ತದ ಹಣ ಮರಳಿ ಪಡೆಯುತ್ತಿದ್ದಾರೆ. ಸದ್ಯ ಟಿಕೆಟ್ ದರ ಮರು ಪಾವತಿ ನಿಯಮ ಪರಿಷ್ಕರಣೆಯಿಂದಾಗಿ ದಲ್ಲಾಳಿಗಳ ಟಿಕೆಟ್ ಬುಕಿಂಗ್ ಮೂಲಗುಂಪು ಮಾಡಲಾಗುತ್ತದೆ ಎಂದು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಬೋರ್ಡಿಂಗ್ ಸ್ಟೇಷನ್ ಬದಲಾವಣೆ ಅವಕಾಶ
ಇನ್ನೂ ಹೊಸ ನಿಯಮದ ಪ್ರಕಾರ, ರೈಲು ಹೊಡುವ 30 ನಿಮಿಷಗಳ ಮುನ್ನ ಪ್ರಯಾಣಿಕರು ತಮ್ಮ ಬೋರ್ಡಿಂಗ್ ನಿಲ್ದಾಣ ಬದಲಾಯಿಸಲು ಅವಕಾಶ ನೀಡಲಾಗಿದೆ. ಈ ಬದಲಾವಣೆಯಿಂದ ಬೆಂಗಳೂರಿನಂತಹ ಬಹು ನಿಲ್ದಾಣಗಳನ್ನು ಹೊಂದಿರುವ ನಗರದ ಪ್ರಯಾಣಿಕರಿಗೆ ಸಹಾಯವಾಗಲಿದೆ. ತಮ್ಮ ಅನುಕೂಲಕರ ಅಥವಾ ಹತ್ತಿರದ ರೈಲು ನಿಲ್ದಾಣದಿಂದ ರೈಲು ಹತ್ತಲು ಅನುಕೂವಾಗಲಿದೆ.
-
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್













Click it and Unblock the Notifications