ಹೋಟೆಲ್ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ಕಾನೂನು ಏನಿದೆ?
ಹೋಟೆಲ್ಗೆ ಹೋದಾಗ ಊಟದ ಬಳಿಕ ಟಿಪ್ಸ್ ಕೊಡುವುದು ರೂಢಿ. ಆದರೆ, ಈಗ ಹೊಟೇಲ್ನವರೇ ನಿರ್ದಿಷ್ಟ ಮೊತ್ತದ ಟಿಪ್ಸ್ ನಿಗದಿ ಮಾಡಿ ಅದನ್ನು ಸರ್ವಿಸ್ ಚಾರ್ಜ್ (Service Charge) ರೂಪದಲ್ಲಿ ಗ್ರಾಹಕರಿಂದ ವಸೂಲಿ ಮಾಡುತ್ತಾರೆ. ಉಟದ ಬಿಲ್ನಲ್ಲೇ ಸರ್ವಿಸ್ ಚಾರ್ಜ್ ಸೇರಿಸಲಾಗುತ್ತದೆ. ಗ್ರಾಹಕರು ಸರ್ವಿಸ್ ಚಾರ್ಜ್ ಕೊಟ್ಟು ಜೊತೆಗೆ ರೂಢಿಗತವಾಗಿ ಬಂದ ಟಿಪ್ಸ್ ಅನ್ನೂ ಸರ್ವರ್ಗೆ ನೀಡುತ್ತಾರೆ. ಇದು ಗ್ರಾಹಕರ ಸುಲಿಗೆ ಎಂದು ಆರೋಪಿಸಬಹುದು.
ಕೇಂದ್ರ ಸರಕಾರದ ಗಮನಕ್ಕೂ ಇದು ಬಂದಿದ್ದು, ಹೊಟೇಲ್ ಉದ್ಯಮಕ್ಕೆ ಎಚ್ಚರಿಕೆ ನೀಡಿದೆ. ಗ್ರಾಹಕ ಸ್ವ ಇಚ್ಛೆಯಿಂದ ನೀಡಬೇಕಾದ ಸೇವಾ ದರವನ್ನು ಹೊಟೇಲ್ನವರು ಬಿಲ್ ಮೂಲಕವೇ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿ ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಸಂಸ್ಥೆ (National Restaurant Association of India- ಎನ್ಆರ್ಎಐ) ಗೆ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಪತ್ರ ಬರೆದಿದ್ದಾರೆ.
2017ರಲ್ಲಿ ಇಲಾಖೆ ರೂಪಿಸಿದ್ದ ಮಾರ್ಗಸೂಚಿಯನ್ನು ಉಲ್ಲೇಖಿಸಿ ರೆಸ್ಟೋರೆಂಟ್ಗಳ ಕ್ರಮವನ್ನು ರೋಹಿತ್ ಪ್ರಶ್ನೆ ಮಾಡಿದ್ದಾರೆ. ಸದ್ಯ ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ ಎರಡರಂದು ಈ ಸಂಬಂಧ ಚರ್ಚೆ ಮಾಡಲು ಸಭೆ ಕರೆದಿದೆ.

ಸೇವಾ ಶುಲ್ಕ ಏನು?
ಆರಂಭದಲ್ಲೇ ಹೇಳಿದ ಹಾಗೆ ಸರ್ವಿಸ್ ಚಾರ್ಜ್ ಅಥವಾ ಸೇವಾ ಶುಲ್ಕ ಎಂಬುದು ಹೋಟೆಲ್ ಅಥವಾ ರೆಸ್ಟೋರೆಂಟ್ನಲ್ಲಿ ಗ್ರಾಹಕರಿಗೆ ಆಹಾರ ತಲುಪಿಸುವ ಸಿಬ್ಬಂದಿ ಹಾಗು ಗ್ರಾಹಕರ ಮಧ್ಯೆ ನಡೆಯುವ ನೇರ ವಹಿವಾಟು. ಅಂದರೆ, ಸರಳವಾಗಿ ಅದು ಹೋಟೆಲ್ನಲ್ಲಿ ಸರ್ವರ್ಗೆ ನಾವು ಕೊಡುವ ಟಿಪ್ಸ್ ಹಣ.
ಆದರೆ, ಈ ಟಿಪ್ಸ್ ಹಣವನ್ನು ಹೊಟೇಲ್ನವರು ಸರ್ವಿಸ್ ಚಾರ್ಜ್ ಹೆಸರಿನಲ್ಲಿ ಗ್ರಾಹಕರಿಗೆ ನೀಡುವ ಬಿಲ್ಗೆ ಸೇರಿಸಿಬಿಡುತ್ತಾರೆ. ಸೇವೆ ಇಷ್ಟವಾದಲ್ಲಿ ಮಾತ್ರ ಗ್ರಾಹಕ ಸ್ವ ಇಚ್ಛೆಯಿಂದ ಸರ್ವಿಸ್ ಚಾರ್ಜ್ ಕೊಡಬಹುದು. ಬಲವಂತವಾಗಿ ಅಥವಾ ಕಡ್ಡಾಯವಾಗಿ ಅದನ್ನು ವಸೂಲಿ ಮಾಡುವಂತಿಲ್ಲ.
ಗೈಡ್ಲೈನ್ಸ್ ಏನಿದೆ?
ಮೇಲೆ ತಿಳಿಸಿದಂತೆ ಸರ್ವಿಸ್ ಚಾರ್ಜ್ ಅಥವಾ ಟಿಪ್ಸ್ ಕೊಡುವುದು ಬಿಡುವುದು ಗ್ರಾಹಕರ ಇಚ್ಛೆಗೆ ಬಿಟ್ಟಿದ್ದು. ಎಷ್ಟು ಟಿಪ್ಸ್ ಕೊಡಬೇಕು ಎಂಬುದೂ ಗ್ರಾಹಕರ ಇಚ್ಚೆಯೇ. ಹೋಟೆಲ್ನವರಾಗಲೀ, ಸಿಬ್ಬಂದಿಯಾಗಲೀ ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರನ್ನು ಕಡ್ಡಾಯಪಡಿಸುವಂತಿಲ್ಲ. ಇದು 2017ರ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಟಿಸಿದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
"ಹೋಟೆಲ್ ಮತ್ತು ಗ್ರಾಹಕರ ನಡುವಿನ ವಹಿವಾಟಿನಲ್ಲಿ ಸೇವಾ ಶುಲ್ಕ ಅಥವಾ ಟಿಪ್ಸ್ ಸೇರುವುದಿಲ್ಲ. ಅದು ಗ್ರಾಹಕ ಹಾಗು ಹೋಟೆಲ್ ಸಿಬ್ಬಂದಿ ಮಧ್ಯೆ ನಡೆಯುವ ಪ್ರತ್ಯೇಕ ವಹಿವಾಟಾಗಿರುತ್ತದೆ. ಜೊತೆಗೆ ಗ್ರಾಹಕರ ನಿರ್ಧಾರವೇ ಅಂತಿಮವಾಗಿರುತ್ತದೆ" ಎಂಬುದು ಮಾರ್ಗಸೂಚಿಯಲ್ಲಿ ಇರುವ ಒಂದು ಅಂಶ.
ಸರ್ವಿಸ್ ಚಾರ್ಜ್ ಕೊಡಲು ಒಪ್ಪದ ಗ್ರಾಹಕರನ್ನು ಹೊಟೇಲಿಗೆ ಸೇರಿಸದೇ ಇರುವ ಘಟನೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿವೆ. ಹಾಗೆಯೇ, ಗ್ರಾಹಕರು ಸರ್ವಿಸ್ ಚಾರ್ಜ್ ಜೊತೆಗೆ ವೇಟರ್ಗೆ ಟಿಪ್ಸ್ ಕೂಡ ಕೊಡುತ್ತಿದ್ದಾರೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಒಂದು ವೇಳೆ ಗ್ರಾಹಕರಿಗೆ ತಾವು ವಂಚನೆಗೊಳಗಾಗುತ್ತಿರುವುದು ಕಂಡುಬಂದಲ್ಲಿ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯನ್ನು ಸಂಪರ್ಕಿಸಿ ನ್ಯಾಯ ಕೇಳಬಹುದು.

ಹೊಟೇಲಿನವರು ಯಾಕೆ ಹೆದರುತ್ತಿಲ್ಲ?
ಕೇಂದ್ರ ಸರಕಾರ ಹೋಟೆಲ್ ಸರ್ವಿಸ್ ಚಾರ್ಜ್ ವಿಚಾರದಲ್ಲಿ ನಿಯಮವೇನು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ಹೊಟೇಲ್ ಮತ್ತು ರೆಸ್ಟೋರೆಂಟ್ಗಳು ಅದನ್ನು ಯಾಕೆ ಜಾರಿಗೆ ತಂದಿಲ್ಲ ಎಂಬ ಪ್ರಶ್ನೆ ಸಹಜ. ಕೇಂದ್ರದ ಮಾರ್ಗಸೂಚಿಯು ಕಾನೂನಾಗಿಲ್ಲ. ಅದು ಕೇವಲ ಶಿಫಾರಸು ಅಥವಾ ಸಲಹೆ ಮಾತ್ರ. ಈ ಸಲಹೆ ಮೀರಿದರೆ ದಂಡ ವಿಧಿಸುವ ಅಥವಾ ಶಿಕ್ಷೆ ನೀಡುವ ಅವಕಾಶ ಕಾನೂನಿನಲ್ಲಿ ಇಲ್ಲ.
ಸಂಬಂಧಪಟ್ಟ ಕಾನೂನು ಎಂದರೆ 2019ರ ಗ್ರಾಹಕ ರಕ್ಷಣೆ ಕಾಯ್ದೆ. ಇದರಲ್ಲಿ ಸರ್ವಿಸ್ ಚಾರ್ಜ್ ಅಥವಾ ಟಿಪ್ಸ್ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ರೆಸ್ಟೋರೆಂಟ್ನವರ ವಾದ
ಸರ್ವಿಸ್ ಚಾರ್ಜ್ ಕಡ್ಡಾಯ ಇಲ್ಲದಿದ್ದರೂ ಗ್ರಾಹಕರಿಗೆ ನೀಡುವ ಬಿಲ್ನಲ್ಲಿ ಯಾಕೆ ಸೇವಾ ಶುಲ್ಕ ಸೇರಿಸುತ್ತೀರಿ ಎಂದು ಹೋಟೆಲ್ನವರನ್ನು ಕೇಳಿದರೆ ಅವರು ಅದನ್ನು ಒಪ್ಪುವುದಿಲ್ಲ. ನಾವು ಬಿಲ್ನಲ್ಲಿ ಸೇರಿಸಿರುತ್ತೇವೆ. ಆದರೆ, ಅದನ್ನು ಕೊಡಲೇಬೇಕೆಂದು ಕಡ್ಡಾಯ ಮಾಡುವುದಿಲ್ಲ. ಗ್ರಾಹಕರಿಗೆ ಬೇಡ ಎಂದಾದಲ್ಲಿ ನಾವು ಸರ್ವಿಸ್ ಚಾರ್ಜ್ ಮೊತ್ತವನ್ನು ಕಳೆದುಹಾಕುತ್ತೇವೆ ಎಂದು ಉತ್ತರ ನೀಡುತ್ತಾರೆ.
ಬಿಲ್ನ ಮೊತ್ತದಲ್ಲಿ ಶೇ 10ರಷ್ಟು ಹಣ ಸೇವಾ ಶುಲ್ಕ ಪಡೆಯುತ್ತೇವೆ. ಈ ಹಣವನ್ನು ಹೋಟೆಲ್ ಸಿಬ್ಬಂದಿಗೆ ನೀಡುತ್ತೇವೆ ಎಂದೂ ಇವರು ಸಮರ್ಥನೆ ಮಾಡಿಕೊಳ್ಳುತ್ತಾರೆ.

ಇಲಾಖೆ ಕರೆದ ಸಭೆಯ ಅಜೆಂಡಾ ಏನು?
ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಜೂನ್ 2ರಂದು ಸಭೆ ಕರೆದಿದೆ. ಇದರಲ್ಲಿ ನಾಲ್ಕು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳು ಸರ್ವಿಸ್ ಚಾರ್ಜ್ ಹೇರುತ್ತಿರುವುದು, ಅದನ್ನು ಕಡ್ಡಾಯಗೊಳಿಸಿರುವುದು, ಇತರ ಶುಲ್ಕಗಳ ಹೆಸರಿನಲ್ಲಿ ಸರ್ವಿಸ್ ಚಾರ್ಜ್ ಪಡೆಯುತ್ತಿರುವುದು, ಸರ್ವಿಸ್ ಚಾರ್ಜ್ ಐಚ್ಛಿಕ ಎಂಬ ವಿಚಾರವನ್ನು ಗ್ರಾಹಕರಿಂದ ಮುಚ್ಚಿಡುವುದು ಈ ವಿಚಾರಗಳನ್ನು ಇಲಾಖೆಯ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆ ಇದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications