ಇಲ್ಲೊಂದು ಮಹಲ್! ಆದರೆ,ಅಲ್ಲ ಇದು ತಾಜ್ ಮಹಲ್!
ರಾತ್ರಿಯ ಭಯಾನಕ ಏಕಾಂತತೆಯಲ್ಲಿ ಮಹಾರಾಜರ ಚಿತ್ರ ನನಗೆ ಸಂಗಾತಿಯಾಗತೊಡಗಿತ್ತು. ಕಣ್ಣುಮುಚ್ಚಿಕೊಂಡು ನನ್ನ ಹಾಗು ಮಹಾರಾಜರ ಸಂಭಾಷಣೆಯನ್ನು ಆಲಿಸುತ್ತಿದ್ದೆ. ಕಣ್ಣು ತೆರೆದಾಗ ಮಹಲಿನ ಗೋಡೆಗಳು “ಒಳ್ಳೆ ಒಳಗುಟ್ಟಿನವಳು ಈ ಶರ್ಮಿಷ್ಠೆ! ಪ್ರಿಯಕರನೊಂದಿಗೆ ಗಳಿಗೆಗಳಿಗೆಗಳುದ್ದಕ್ಕೂ ಸರಸದ ಮಾತುಗಳಲ್ಲಿ ತೊಡಗಿರುತ್ತಾಳೆ.ಆದರೆ ಅದರಲ್ಲಿನ ಒಂದಕ್ಷರವೂ ನಮ್ಮ ಕಿವಿಗೆ ಬೀಳುವುದಿಲ್ಲವಲ್ಲ ಎನ್ನುತ್ತಿದ್ದವು.” [ಶರ್ಮಿಷ್ಠೆಯ ಸ್ವಗತ; ಯಯಾತಿ :ವಿ.ಎಂ.ಇನಾಂದಾರ್]
ಒಂದೂರಲೊಬ್ಬ ರಾಜ ಇದ್ದ. ಒಂದಿವ್ಸ ಊರಿಂದೂರಿಗೆ ಹೋಗೋವಾಗ ಒಂದು ಹುಡುಗಿ ಸೊಂಟದ ಮೇಲೆ ನೀರು ತುಂಬಿದ ಕೊಡ ಇಟ್ಟ್ಕೊಂಡು ಕಾಳಿದಾಸನ ವರ್ಣನೆಗೆ ಮಾತ್ರ ನಿಲುಕುವಂತೆ ಬಳುಕುತ್ತಾ ಹೋಗ್ತಾಇದ್ಲು. ರಾಜನಿಗೆ ಆ ಹುಡುಗಿ ಮೇಲೆ ಮನಸ್ಸಾಯ್ತು. ಸರಿ, ಭಟರನ್ನು ಕಳುಹಿಸಿ ಕೂಡಲೇ ಆ ಹುಡುಗಿ ಮನೆ ಮಂದಿಯೊಡನೆ ಮದುವೆ ಮಾತು ಪ್ರಸ್ತಾಪ ಮಾಡಿ, ಒಡ್ಡೋಲಗ ಊದಿಸಿ, ಅರಮನೆಗೆ ಕರೆದುಕೊಂಡು ಬಂದ.
ಅವಳನ್ನು ರಾಣಿ ಮಾಡೇ ಬಿಟ್ಟ. ಓಕೆ, ಈ ಕಥೆಯಲ್ಲೇನು ಸ್ವಾರಸ್ಯ ಇದೆ? ನಾವು ಕೇಳಿರುವ ಎಲ್ಲಾ fairy taleಗಳಲ್ಲೂ ಕೊಂಚ, ಹೆಚ್ಚು ಹೀಗೇ ತಾನೇ ಆಗೋದು?! ಇಂಥದ್ದೇ ಹಗಲುಗನಸನ್ನು ನಾವು ಎಷ್ಟೋ ಬಾರಿ ಬೆಳಗಿನ ಜಾವದ ಕನಸಾಗಲೀ ದೇವರೇ ಅಂಥ ಗುಟ್ಟಾಗಿ ಪ್ರಾರ್ಥಿಸಿದ್ದು ಇದೆ ತಾನೆ. . . . . .ನೋಡಿ, ನೋಡಿ ಜೋರಾಗ್ಹೇಳ್ದೇಹೋದ್ರೂ ಪರ್ವಾಗಿಲ್ಲ ಮನಸ್ಸಿನಲ್ಲಾದ್ರೂ ನಿಜ ಹೇಳ್ಕೊಳ್ಳಿ. ಓಕೆ, ನೀವು nostalgiaಗಳ ಗುಹೆ ಹೊಕ್ಕುವುದಕ್ಕೆ ಮುಂಚೆ ಆ ಕಥೆಯ ಮುಂದಿನ ಭಾಗ ಹೇಳ್ತೀನಿ ಕೇಳಿ.
ಸರಿ ಆ ಹುಡುಗಿ ಮಹಾರಾಣಿ ಆಗೋದಕ್ಕೆ ಮುಂಚೆ ರಾಜ ಅವಳನ್ನು ಮೊದಲು ನೋಡಿದ್ದನಲ್ಲ ಅದೊಂದು ಪುಟ್ಟಾತಿಪುಟ್ಟ ಹಳ್ಳಿ.. ನೀರಿಗೆ ಬಹಳ ತಾಪತ್ರಯ ಇದ್ದ village! ಹೂಂ, ತನ್ನ ರಾಣಿಯ ತವರೂರನ್ನು ಹಾಗೇ ಬಿಡೋದು ಅಂದ್ರೇನು? So, ರಾಜ ಆ ಹಳ್ಳಿಗೆ ಸರಾಗವಾದ ನೀರಿನ ವ್ಯವಸ್ಥೆ ಮಾಡಿದ. ಅಷ್ಟು ಸಾಕೇ? ತನ್ನ ಸಾಮ್ರಾಜ್ಯದ ರಾಣಿಯ ಬಗ್ಗೆ ಪ್ರೀತಿಯ ಹರಿವು ಎಷ್ಟಿದ್ದರೂ ಯಾಕೋ ರಾಜನಿಗೆ ತೃಪ್ತಿಯಾಗದು. ಆ ಹಳ್ಳಿಯಲ್ಲೊಂದು ಗುಡಿ ಕಟ್ಟಿಸಿ ಕೃತಾರ್ಥ ಭಾವ ಮೆರೆದ ರಾಜ!
ಆಹಾ, ಈಗ ನಿಮಗೆ ಈ ಕಥೆಯನ್ನು ಮೊದಲೊಮ್ಮೆ ಇದೇ ತರಹ ಕೇಳಿದ್ದ ನೆನಪಲ್ಲ್ವಾ? ಇಲ್ಲ. ಇಲ್ಲ ಈಗ ನೀವು ಸುಳ್ಳು ಹೇಳ್ತಿಲ್ಲ! ಹೌದು, ಇದು ನಮ್ಮ ಮಹಾರಾಜರೇ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್ ಹಾಗು ಅವರ ರಾಣಿ ತ್ರಿಪುರ ಸುಂದರಮ್ಮಣ್ಣಿಯವರ ಬಗ್ಗೆ ನಾವೆಲ್ಲಾ ಬಾಲ್ಯದಿಂದ ಕೇಳಿ ಬೆಳೆದ ಕಥೆ ತಾನೆ?!
ಗೊತ್ತಾಯ್ತು, ನಿಮಗೆ ಆ ಹಳ್ಳಿ ಹೆಸರು ನೆನಪಾಗುತ್ತಿಲ್ಲ ಅಲ್ಲ್ವಾ? ಅದರ ಹೆಸರು ಮಂಗಳ. ಅರಮನೆ ಊರು ಮೈಸೂರಿನ ಐಲಾಂದ್ರ ಕಂಬದ ಚೌಕದಿಂದ ಸೀದ ನಲವತ್ತು ಮೇಲೊಂದೆರಡು ಕಿಲೋ ಮೀಟರ್ ಹೋದ್ರೆ ಆ ಮಂಗಳ ಮಹಲ್ ಅನ್ನು ನೋಡಬಹುದಂತೆ.
ಕೆರೆತೊರೆಯ ಜೀವಜಲದಿಂದ ಜೀವನ ನಡೆಸೋ ಹುಡುಗಿ ಎಂದಾದ್ರು ರಾಣಿಯಾಗೋ ಕಲ್ಪನೆ ಮಾಡ್ಕೊಂಡಿರಕ್ಕಾದ್ರೂ ಸಾಧ್ಯವಾಗಿರುತ್ತಾ? ಮಹತ್ತ್ವಾಕಾಂಕ್ಷೆಯಿರಲಿ ಆಸೆ ಆಕಾಂಕ್ಷೆಗೂ ಆಸ್ಪದವಿರದಿರಬಹುದಾದ ಬದುಕಿನ ಚರದಲ್ಲಿ ಅರಮನೆ, ರಾಣಿ ಹುದ್ದೆ ಯಾವ ಭಾವವನ್ನು ಬಿತ್ತಿರಬಹುದು? ಅದ್ಯಾವ ಒತ್ತಡವನ್ನು ನೀಡಿರಬಹುದು? ಈ ಕಥೆ ಕೇಳಿದಾಗ್ಲೆಲ್ಲಾ ನನಗೆ ಹೀಗೆಲ್ಲಾ ಅನ್ನಿಸುತ್ತೆ. ಅದಕ್ಕೆ ನಿಮ್ಮ್ಹತ್ರ ಹೇಳಿಕೊಳ್ಳೋಣ ಅನ್ನಿಸ್ತು. ನನಗೊತ್ತು ನೀವೆಲ್ಲಾ ನನಗೆ ಏನು ಪಾಠ ಹೇಳಿಕೊಡ್ತೀರಿ ಅಂತ! “Make the destiny your destination” ಅಂತ ತಾನೆ? Wonderful, ಹಾಗೇ ಆಗ್ಲಿ ಬಿಡಿ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications