ತಂದೆಯಂಥ ಗೆಳೆಯನನ್ನು ಕಳೆದುಕೊಂಡೆ

* ರವಿ ಬೆಳಗೆರೆ
ಮನೋಹರ ಮಳಗಾಂವ್ಕರ್ ತೀರಿಕೊಂಡಿರುವುದು ತಂದೆಯನ್ನು ಕಳೆದುಕೊಂಡಷ್ಟೇ ದುಃಖವಾಗಿದೆ. ಶಾಮರಾಯರು ನನ್ನ ಪತ್ರಿಕೋದ್ಯಮದ ಗುರು. ಸಾಹಿತ್ಯದ ವಿಷಯಕ್ಕೆ ಬಂದರೆ ಒಂದು ಕಾದಂಬರಿಯನ್ನು ಹೇಗೆ ಪಕ್ವವಾಗಿ ಬರೆಯಬೇಕು ಎಂಬುದನ್ನು ನನಗೆ ಕಲಿಸಿಕೊಟ್ಟದ್ದೇ ಮಳಗಾಂವಕರ್ ಬರಹಗಳು. ಒಟ್ಟಿನಲ್ಲಿ ಅವರು ನನಗೆ ಗುರು ಮಾತ್ರವಲ್ಲ, ಗೆಳೆಯರೂ ಆಗಿದ್ದರು.
ನಿಮಗೆ ಗೊತ್ತಿಲ್ಲದ ಮಳಗಾಂವ್ಕರ್ : ಮಳಗಾಂವ್ಕರ್ ಅವರಿಗೆ 97 ವರ್ಷವಾಗಿತ್ತು. ಜೊಯಿಡಾ ಸಮೀಪದ ಬುರ್ಬುಸಾ ಎಂಬಲ್ಲಿ ಕಾಡಿನ ಮಧ್ಯೆ ಒಂಟಿ ಬಂಗಲೆಯಲ್ಲಿ ವಾಸವಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕರ್ನಲ್ ಆಗಿ ಸ್ವಯಂ ನಿವೃತ್ತಿ ಪಡೆದಿದ್ದ ಅವರು, ಇದಕ್ಕೂ ಮುನ್ನ ರೈಲ್ವೆ ಹಳಿಗಳನ್ನು ಹಾಕುವ ಕಂಟ್ರಾಕ್ಟರ್ ಆಗಿದ್ದರು! ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ ವ್ಯಾಸಂಗ ಮಾಡಿದ್ದರು. ತುಂಬ ಜನಕ್ಕೆ ಗೊತ್ತಿಲ್ಲ, ಅವರು ಹುಟ್ಟಿದ್ದು ದಾಂಡೇಲಿ ಸಮೀಪದ ಜಗಲ್ ಪೇಟೆ ಎಂಬ ಪುಟ್ಟ ಹಳ್ಳಿಯಲ್ಲಿ.
50ರ ದಶಕದಲ್ಲಿ ಗೋವಾದಿಂದ ಎರಡು ಬಾರಿ ಅವರು ಲೋಕಸಭೆಗೆ ಸ್ಫರ್ಧಿಸಿ ಪರಾಭವಗೊಂಡಿದ್ದರು. ರಾಜಕೀಯ ಅವರ ಮೆಚ್ಚಿನ ಕ್ಷೇತ್ರ ಆಗಿತ್ತೇ ಹೊರತು ರಾಜಕಾರಣಿಗಳನ್ನು ಅವರು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ.
ಶಾಲಿಮಾರ್' ಹೆಸರಿನಲ್ಲಿ ಮೂಡಿಬಂದ ಇವರ ಕಾದಂಬರಿ ಇದೇ ಹೆಸರಿನಲ್ಲಿ ಹಿಂದಿ ಚಿತ್ರವಾಗಿ ಮೂಡಿಬಂತು. ಧರ್ಮೇಂದ್ರ ಈ ಚಿತ್ರದ ನಾಯಕ ಪಾತ್ರ ವಹಿಸಿದ್ದ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಇವರು ಕೆಲಸ ಮಾಡಿದ್ದರು. ಧರ್ಮದ ಬಗ್ಗೆ ಸಾಕಷ್ಟು ಓದಿಕೊಂಡಿದ್ದ ಇವರು ಭಗವದ್ಗೀತೆಯಲ್ಲಿ ಪಾಂಡಿತ್ಯವನ್ನೇ ಪಡೆದಿದ್ದರು. ಸಂಸ್ಕೃತವನ್ನು ಆಳವಾಗಿ ವ್ಯಾಸಂಗ ಮಾಡಿದ್ದರು. ತಮಾಷೆ ಎಂದರೆ, ಇವರು ದೇವರನ್ನು ನಂಬುತ್ತಿರಲಿಲ್ಲ! ಒಂದು ಕಾಲದಲ್ಲಿ ವೃತ್ತಿಪರ ಹುಲಿ ಬೇಟೆಗಾರರಾಗಿದ್ದ ಮಳಗಾಂವ್ಕರ್, ನಂತರ ಅರಣ್ಯ ಮತ್ತು ಪ್ರಾಣಿ ಸಂರಕ್ಷಣೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದರು.
ಸಾಹಿತಿಯಾಗಿ... : ಭಾರತದ ಮೊದಲ ಸಾಲಿನ ಆಂಗ್ಲ ಲೇಖಕರಲ್ಲಿ ಒಬ್ಬರಾದ ಮಳಗಾಂವ್ಕರ್ ಅವರ ಸಾಹಿತ್ಯ ಕೃತಿಗಳು ಫ್ರಾನ್ಸ್ ಮತ್ತು ಈಜಿಪ್ಟ್ಗಳಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದವು. ಮುಖ್ಯವಾಗಿ, ಭಾರತದ ಎಲ್ಲ ರಾಜ ಮನೆತನಗಳೊಂದಿಗೆ ಅವರ ಗೆಳತನವಿತ್ತು. ರಾಜರ ಲೋಲುಪತೆ, ಆಳ್ವಿಕೆ, ಕಾರ್ಯ ವೈಖರಿ ಇತ್ಯಾದಿಗಳನ್ನು ಬರಹಕ್ಕೆ ಇಳಿಸುವುದು ಅವರ ಮೆಚ್ಚಿನ ಕೆಲಸವಾಗಿತ್ತು. ಈ ದಿಸೆಯಲ್ಲಿ ಮೂಡಿಬಂದ ಪ್ರಿನ್ಸೆಸ್' ಅವರ ಉತ್ಕೃಷ್ಟ ಕಾದಂಬರಿ. ಮಹಾನ್ ಮರಾಠ' ಮರೆಯಲಾರದ ಕೃತಿ. ಉಳಿದಂತೆ ಡೆವಿಲ್ಸ್ ವಿಂಡ್' ಎಂಬ ಅವರ ಕಾದಂಬರಿಯನ್ನು ದಂಗೆಯ ದಿನಗಳು' ಹೆಸರಿನಲ್ಲಿ ನಾನೇ ಕನ್ನಡಕ್ಕೆ ತಂದಿದ್ದೇನೆ. ನಾಥೂರಾಮ್ ಗೋಡ್ಸೆಯನ್ನು ಜಗತ್ತೇ ವಿಲನ್ ಥರ ನೋಡುತ್ತದೆ. ಆದರೆ, ಇವರು ಮಾತ್ರ ಆತನನ್ನು ದಾರಿತಪ್ಪಿದ ಪ್ರಾಮಾಣಿಕ ದೇಶಭಕ್ತ ಎಂಬುದನ್ನು ಮೆನ್ ಹು ಕಿಲ್ಡ್ ಗಾಂಧಿ' ಎಂಬ ಕೃತಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನೂ ನಾನು ಅನುವಾದ ಮಾಡಿದ್ದೇನೆ (ಅವನೊಬ್ಬನಿದ್ದ ಗೋಡ್ಸೆ). ಇನ್ನು ಇವರ ಇನ್ಸೈಡ್ ಗೋವಾ' ಪುಸ್ತಕವನ್ನು ಓದಿಯೇ ಆನಂದಿಸಬೇಕು.
ಉಳಿದಂತೆ, ಮಳಗಾಂವ್ಕರ್ ಅವರ ಸಾಹಿತ್ಯದ ಬಗ್ಗೆ ನಮ್ಮ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ ಅದ್ಭುತ ಪುಸ್ತಕ ಬರೆದಿದ್ದಾರೆ. ಇತಿಹಾಸಕಾರ ಷ.ಶೆಟ್ಟರ್ ಆಂಗ್ಲದಲ್ಲಿ ಮತ್ತು ಕನ್ನಡದಲ್ಲಿ ನಾನು- ಅವರ ಮುರಾರ್ ರಾವ್ ಘೋರ್ಪಡೆ ಕುರಿತ ಪುಸ್ತಕವನ್ನು ಅನುವಾದ ಮಾಡುತ್ತಿದ್ದೇವೆ. ಚರ್ಚಿಲ್ನಿಂದ ಕೊಲ್ಲಾಪುರದ ರಾಜರ ತನಕ ಅವರ ಬಳಿ ಸಾಕಷ್ಟು ವೈವಿಧ್ಯಮಯ ಪುಸ್ತಕಗಳ ಭಂಡಾರವೇ ಇದೆ.
ಎರಡು ದೊಡ್ಡ ಹೊಡೆತ: ಮಳಗಾಂವ್ ಕರ್ ಅವರೊಂದಿಗೆ ಅರ್ಧ ಶತಮಾನ ಬದುಕು ಹಂಚಿಕೊಂಡ ಅವರ ಪತ್ನಿ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಇದಾದ ಐದೇ ವರ್ಷಕ್ಕೆ ಅವರ ಒಬ್ಬಳೇ ಮಗಳೂ ಕಣ್ಮುಚ್ಚಿದಳು. ಇಬ್ಬರೂ ಕ್ಯಾನ್ಸರಿಗೆ ಬಲಿಯಾಗಿದ್ದು ದುರಂತ. ಇದು ಅವರ ಬದುಕಿನಲ್ಲಿ ನಡೆದ ಎರಡು ದೊಡ್ಡ ದುರಂತ. ಇವರ ಅಳಿಯ ಅಂಜ್ರೇ ಕಪೂರ್ ಮುಂಬೈನಲ್ಲಿದ್ದರೆ, ಕಿರಿಯ ಸೋದರರೊಬ್ಬರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಅಂದಹಾಗೆ, ಅವರು ಮಾತ್ರ ಒಂದು ದಿನವೂ ಮಾತ್ರೆ ನುಂಗಲಿಲ್ಲ. ಚುಚ್ಚುಮದ್ದು ತೆಗೆದುಕೊಳ್ಳಲಿಲ್ಲ.
ಅಷ್ಟು ಶಿಸ್ತಿನ ಬದುಕು ಅವರದು. ತೀರಾ ವಯಸ್ಸಾಗಿದ್ದ ಕಾರಣ ಅವರ ಅನ್ನನಾಳ ಚಿಕ್ಕದಾಗಿ, ಗಂಟಲಲ್ಲಿ ಆಹಾರ ಇಳಿಸುವುದು ತ್ರಾಸದಾಯಕವಾಗಿತ್ತು ಎನ್ನುವುದನ್ನು ಬಿಟ್ಟರೆ, ಅವರು ಆರೋಗ್ಯವಂತರಾಗಿದ್ದರು. ಉಳಿದಂತೆ ನೆನಪಾಗುವ ವಿಷಯ ಅಂದರೆ, ಸರ್... ನೀವು ಮದುವೆಯಾದ ದಿನಾಂಕ ನೆನಪಿದೆಯೇ?' ಎಂದು ಒಮ್ಮೆ ಕೇಳಿದ್ದೆ. ಅದಕ್ಕೆ ಅವರು, ಮರೆಯಲು ಸಾಧ್ಯವೇ? ಭಾರತ- ಪಾಕ್ ಯುದ್ಧ ಶುರುವಾದ ಮೊದಲ ದಿನವೇ ನಮ್ಮ ದಾಂಪತ್ಯದ ಮೊದಲ ದಿನವಾಗಿತ್ತು' ಎಂದು ನಕ್ಕಿದ್ದರು!
ಕಡೆಯಲ್ಲಿ... ನನ್ನ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಎಂದರೆ ಅವರ ಕೃತಿಗಳನ್ನು ಅನುವಾದಿಸುವ ಹಕ್ಕನ್ನು ನನಗೆ ಮಳಗಾಂವ್ ಕರ್ ನೀಡಿದ್ದರು. ನಾನು ಜೋಯಿಡಾ ಕಾಡಿಗೆ ಹೋದಾಗಲೆಲ್ಲ ಅವರ ಇಷ್ಟದ ಪುಸ್ತಕ, ರಮ್ಮು ಮತ್ತು ಸಂಗೀತದ ಸಿ.ಡಿಗಳನ್ನು ಕೊಟ್ಟುಬರುತ್ತಿದ್ದೆ. ಕಡೆಗಾಲದಲ್ಲಿ ಮನೋಹರ ಮಳಗಾಂವ್ಕರ್ ಅವರ ಸೇವೆ ಮಾಡಿದ ಪುಣ್ಯ ನನ್ನದು ಎಂಬುದೇ ನನ್ನ ಭಾಗ್ಯ! ತಂದೆಯಂಥ ಗುರುವಿಗೆ ಅಂತಿಮ ನಮಸ್ಕಾರ...
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications