ದೈವ ಕೋಪ ಅಂದರೇನು, ಅದರ ಪರಿಹಾರ ಹೇಗೆ?
ವಿವಾಹ ವಿಳಂಬ, ಉದ್ಯೋಗ ಸಮಸ್ಯೆ, ಸಂತಾನ ನಿಧಾನ ಹೀಗೆ ಅನೇಕ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಅವರ ಜಾತಕದಲ್ಲಿ ಆ ದೋಷ ಕಂಡುಬರುವುದಿಲ್ಲ. ಅಥವಾ ಪರಿಹಾರ ಮಾಡಿಸಿಕೊಂಡ ನಂತರವೂ ಸಮಸ್ಯೆ ಹಾಗೇ ಉಳಿದುಕೊಂಡಿರುತ್ತದೆ. ಅದನ್ನು ತಿಳಿದುಕೊಳ್ಳುವ ಸಲುವಾಗಿ ಪ್ರಶ್ನ ಶಾಸ್ತ್ರದ ಮೊರೆ ಹೋಗಬೇಕಾಗುತ್ತದೆ.
ಅದರಲ್ಲಿ ಕಂಡುಬರುವ ಮುಖ್ಯ ಸಮಸ್ಯೆಯೇ ಪ್ರಾಗ್ ಆಧಾರಿತ ದೇವತಾ ಕೋಪ. ಹಾಗಂದರೆ ಮೊದಲನೇ ಪೂಜೆ ಮಾಡುವ ಗಣಪತಿಗೆ ದೇವತಾ ಆರಾಧನೆ ಸಮಯದಲ್ಲಿ ನಮಗೆ ತಿಳಿದೋ ತಿಳಿಯದೆಯೋ ಅಪಚಾರ ಅಥವಾ ಅಜಾಗರೂಕತೆ ಆಗಿರುತ್ತದೆ. ಶ್ರದ್ಧೆ- ಭಕ್ತಿಯಲ್ಲಿನ ಕೊರತೆ ಆಗಿರಬಹುದು ಅಥವಾ ದೇವತಾ ಬಿಂಬಕ್ಕೆ ಲೋಪ ಮಾಡಿರಬಹುದು.
ಉದಾಹರಣೆಗೆ ಮನೆಯ ಷೋಕೇಸಿನಲ್ಲಿರುವ ಗಣಪತಿ ವಿಗ್ರಹ ಇರಬಹುದು, ದೇವರ ಮನೆಯಲ್ಲಿಟ್ಟಿರುವ ಗಣಪತಿ ವಿಗ್ರಹ ಇರಬಹುದು ಅಥವಾ ವರ್ಷಾ ವರ್ಷ ಮಾಡುವ ವಿನಾಯಕ ಚತುರ್ಥಿ ಸಂದರ್ಭದಲ್ಲಿನ ಮಣ್ಣಿನ ಗಣಪತಿ ವಿಗ್ರಹಕ್ಕೆ ಇರಬಹುದು ಅದು ಭಗ್ನವಾಗಿದ್ದರೆ ಅದನ್ನು ಪ್ರಾಗ್ ಆಧಾರಿತ ದೇವತಾ ಕೋಪ ಎನ್ನುತ್ತೇವೆ. ಆ ವಿಚಾರ ಕೂಡ ನಮಗೆ ಗೊತ್ತಾಗುವುದು ಪ್ರಶ್ನ ಶಾಸ್ತ್ರದಲ್ಲಿ.

ಬಾಲ ಗಣಪತಿ ಹೋಮ
ಹಾಗೊಂದು ವೇಳೆ ಗೊತ್ತಾದ ನಂತರ ಪರಿಹಾರ ರೂಪವಾಗಿ ಕೇರಳೀಯ ಪದ್ಧತಿಯಲ್ಲಿ ಬಾಲ ಗಣಪತಿ ಹೋಮವನ್ನು ಮಾಡಿಸುತ್ತೇವೆ. ಗಣಪತಿ ಫೋಟೋ ಒಡೆದು ಹಾಕುವುದು, ವಿಗ್ರಹ ಒಡೆದು ಹಾಕುವುದು ಹೀಗೆ ನಾನಾ ವಿಧದಲ್ಲಿ ಗಣಪತಿಗೆ ಅಪಚಾರ ಮಾಡಿದಲ್ಲಿ ಈ ಬಾಲ ಗಣಪತಿ ಹೋಮ ಮಾಡಲಾಗುತ್ತದೆ.

ಪುರೋಹಿತರ ಮಾರ್ಗದರ್ಶನ
ಅದೇ ರೀತಿ ಆಯಾ ದೇವತೆಗಳಿಗೆ ಮಾಡಿದ ಅಪಚಾರಕ್ಕೆ ಪ್ರಾಯಶ್ಚಿತ್ತವಾಗಿ ಪೂಜೆ -ಪುನಸ್ಕಾರ ಮಾಡಲಾಗುತ್ತದೆ. ಇನ್ನು ಗಣಪತಿಗೆ ಅಪಚಾರ ಆಗಿದ್ದಲ್ಲಿ ಏಕೋತ್ತರ ವೃದ್ಧಿ ಪದ್ಧತಿಯಲ್ಲಿ ಅಷ್ಟ ದ್ರವ್ಯ ಗಣಪತಿ ಹವನ ಮಾಡಲಾಗುತ್ತದೆ. ಈ ಪದ್ಧತಿಯನ್ನು ವೇದಾಧ್ಯಯನ ಮಾಡಿದ ಜ್ಯೋತಿಷಿ ಅಥವಾ ಪುರೋಹಿತರ ಮಾರ್ಗದರ್ಶನ ಪಡೆಯಬಹುದು.

ಹರಕೆ ತಪ್ಪಿಸಿದ್ದರೂ ಅಡೆ ತಡೆ
ಇನ್ನು ಹರಕೆ ಹೊತ್ತುಕೊಂಡು ಅದನ್ನು ಪೂರೈಸದಿದ್ದಲ್ಲಿ, ಉದಾಹರಣೆಗೆ ಯಾವುದೋ ಸಂದಿಗ್ಧದಲ್ಲೋ ಅಥವಾ ಸಂತೋಷದ ಸಮಯದಲ್ಲೋ ದೇವತಾ ವಿಚಾರವಾಗಿ ಹರಕೆಯೊಂದನ್ನು ಹೊತ್ತಿದ್ದು, ಅದು ಪೂರೈಸುವುದನ್ನು ಮರೆತು ಬಿಟ್ಟಿದ್ದಲ್ಲಿ ಯಾವುದಾದರೂ ಒಂದು ಕೆಲಸಕ್ಕೆ ಪದೇಪದೇ ತಡೆ, ಸಮಸ್ಯೆ ಆಗುತ್ತಿರುತ್ತದೆ.

ಹಿರಿಯರು ಮಾಡುತ್ತಿದ್ದ ದೇವತಾರಾಧನೆ ನಿಂತಿದ್ದಲ್ಲಿ
ಇನ್ನು ಮನೆಯಲ್ಲಿ ಹಿರಿಯರು ನಡೆಸಿಕೊಂಡು ಬಂದ ದೇವತಾ ಆರಾಧನೆಯನ್ನು ನಿಲ್ಲಿಸಿದ್ದಲ್ಲಿ ಅಂದರೆ ವರ್ಷಕ್ಕೆ ಒಮ್ಮೆಯೋ ಅಥವಾ ನಿರ್ದಿಷ್ಟ ದಿನವೋ ಕುಟುಂಬದ ಹಿರಿಯರು ಒಂದು ದೇವರ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ. ಈಗಿನ ತಲೆಮಾರಿನವರು ಅದನ್ನು ನಿಲ್ಲಿಸಿ ಬಿಟ್ಟಿದ್ದರೆ ಅದರಿಂದ ಕೂಡ ಪ್ರಾಗ್ ಆರಾಧಿತ ದೇವತಾ ಕೋಪ ಆಗುತ್ತದೆ. ಅದಕ್ಕೆ ತಕ್ಕ ಪರಿಹಾರ ಮಾಡಿಸಿಕೊಳ್ಳಬೇಕಾಗುತ್ತದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications