ಕೈಮುಗಿದು ಒಳಗೆ ಬಾ, ಇದು ಮರುಭೂಮಿಯ ಸಸ್ಯಕಾಶಿ

ಈ ಮನೋಹರ ಸಸ್ಯಲೋಕವನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ದರ್ಶಕರಿಗೆ ತಮ್ಮ ಮನಸ್ಸಿಗೆ ಬೇಕಾದ ಸಸ್ಯ ಗುಂಪನ್ನು ನೋಡುವ ವ್ಯವಸ್ಥೆ ಮಾಡಲಾಗಿದೆ. ಮೂಲತಃ ಸಸ್ಯಶಾಸ್ತ್ರ ವಿದ್ಯಾರ್ಥಿಯಾದ ನನ್ನಂತಹ ಪ್ರವಾಸಿಗಳಿಗೆ ಇದು ಸ್ವಲ್ಪ ಫಜೀತಿಯೇ ಸರಿ. ಎಲ್ಲಾ ಸಸ್ಯ ಪ್ರಭೇಧಗಳನ್ನೂ ನೋಡುವ ದುರಾಸೆ ನನಗೆ. ಆದರೆ ಸಮಯದ ಕೊರತೆ. ನನಗಿದ್ದ ಕೇವಲ ಒಂದು ದಿನದ ಅವಧಿಯಲ್ಲಿ ಹಾಗೂ ಹೀಗೂ ನನ್ನ ಮನಸ್ಸಿನೊಡನೆ ಸೆಣಸಾಡಿ ನೋಡಲು ಬಹಳ ಅಪರೂಪವಾದ ಮರಭೂಮಿ ಉದ್ಯಾನವನ್ನು ಆರಿಸಿಕೊಂಡೆ. ಪ್ರಪಂಚದ ಅತ್ಯಂತ ಉಷ್ಣ ಪ್ರದೇಶಗಳಲ್ಲಿ ಬರಡು ಭೂಮಿಯಲ್ಲಿ ಯಾವ ರೀತಿಯ ಮಳೆ ಮತ್ತು ನೀರಿನ ಸಂಪರ್ಕವೇ ಇಲ್ಲದೆ ಬೆಳೆಯುವ ಮತ್ತು ನಮ್ಮಂತಹ ಸಾಮಾನ್ಯ ಜನರ ಸಂಪರ್ಕದಿಂದ ಬಹುದೂರವಿರುವ ಈ ಸಸ್ಯಗಳನ್ನು ನೋಡುವುದು ಒಂದು ಅವರ್ಚನೀಯ ಅನುಭವವೇ ಸರಿ.
ಇದಲ್ಲದೇ ಜಪಾನೀಯರ ಹೂದೋಟ, ಗುಲಾಬಿ ಉದ್ಯಾನವನ, ಚೀನಾದೇಶದ ಸಸ್ಯ ಸಂಪತ್ತು, ನಿತ್ಯ ಹರಿದ್ವರ್ಣ ಕಾಡುತೋಟ, ಆಸ್ಟ್ರೇಲಿಯಾ ಖಂಡದ ವೃಕ್ಷವೃಂದ, ತಾಳೆಗಳ ತೋಟ ಹೀಗೆ ಒಂದೇ ಎರಡೇ. ನೋಡುವವರ ಕಣ್ಣುಗಳಿಗೆ ಹಬ್ಬ. ಇದರ ಜೊತೆಗೆ ಗ್ರಂಥಾಲಯ, ಕಲಾಪ್ರದರ್ಶನದ ಗ್ಯಾಲರಿ ಮತ್ತು ಗಾಜಿನ ಮನೆಯೂ ಸೇರಿದೆ. ನಾನು ಇದುವರೆಗೆ ಅನೇಕ ಸಸ್ಯೋದ್ಯಾನಗಳಿಗೆ ಭೇಟಿ ಇತ್ತಿದ್ದೇನಾದರೂ, ಹಂಟಿಂಗ್ಟನ್ ಉದ್ಯಾನವನದ ಮರುಭೂಮಿಯ ತೋಟದ ಸಸ್ಯ ವೈವಿಧ್ಯತೆಗೆ ನಾನು ಪೂರ್ಣವಾಗಿ ಮಾರುಹೋದೆ. ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ನಮೀಬಿಯ, ಸಹಾರಾ, ಇಥಿಯೋಪಿಯಾ, ಸೊಮಾಲಿಯಾ, ಸೌದಿಅರೇಬಿಯಾ, ಯೆಮೆನ್, ಗೋಬಿ ಮರುಭೂಮಿ, ದಕ್ಷಿಣ ಅಮೆರಿಕ ಹೀಗೆ ನಾನಾ ಮೂಲೆಗಳಿಂದ ತರಿಸಿ ಬೆಳೆಸಿದ ಈ ಸಸ್ಯ ವೈವಿಧ್ಯಮಯತೆಗೆ ಮನಸೋಲದಿರಲು ಸಾಧ್ಯವೇ ಇಲ್ಲ.
ವರ್ಷಾನುಗಟ್ಟಲೆ ನೀರಿನ ಮುಖವನ್ನೇ ಕಾಣದಿರುವ, ಬಹಳ ಕಡಿಮೆ ನೀರಿನ ಸಹಾಯದಿಂದ ಬೆಳೆಯುವ ನಾನಾ ವಿಧದ ಭೂತಾಳೆ, ಕತ್ತಾಳೆ, ಮರತಾಳೆ, ಅನೇಕ ರೀತಿಯ ಕಳ್ಳಿಗಳು- ತಿರುಕಳ್ಳಿ, ಎಲೆಕಳ್ಳಿ, ಮರಕಳ್ಳಿ, ಗಿಡಕಳ್ಳಿ ಒಂದೇ ಎರಡೇ? ನೀರಿನ ಅಭಾವದಿಂದಾಗಿ ಕೇವಲ ವಾತಾವರಣದಲ್ಲಿರುವ ನೀರಿನಾಂಶವನ್ನು ತನ್ನ ಶರೀರದ ವಿವಿಧ ಭಾಗಗಳಲ್ಲಿ ಶೇಖರಿಸಿ ತನ್ನ ಜೀವನದ ಎಲ್ಲಾ ಚಟುವಟಿಕೆಗಳನ್ನು ಅತ್ಯಂತ ಸಮರ್ಪಕವಾಗಿ ನಡೆಸಿಕೊಂಡು ಹೋಗುವ ಈ ಸಸ್ಯ ಪ್ರಪಂಚದ ವೈಖರಿ ಜೀವ ಜಾಲದ ಅದ್ಭುತವೇ ಎಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಇಂತಹ ವೈಪರೀತ್ಯಗಳಲ್ಲಿ ವಾಸಿಸಿದರೂ ಈ ಗಿಡಗಳ ಹೂವುಗಳೋ ಅದೆಷ್ಟು ಸುಂದರ. ಬಿಳಿ, ಅಚ್ಚ ಹಳದಿ, ಕೆಂಪು, ನೀಲಿ, ಬದನೆ ವರ್ಣ, ಹೀಗೆ ಹಲವಾರು ವರ್ಣಗಳಿಂದ ನಳನಳಿಸುವ ಈ ಸಸ್ಯ ಸೊಬಗಿಗೆ ಮನ ಮಾರುಹೋಯಿತು. ಸ್ವಯಂ ಸಸ್ಯಶಾಸ್ತ್ರ ಅಧ್ಯಾಪಕಿಯಾಗಿ ಹಲವು ವರ್ಷ ಈ ವಿಷಯವನ್ನು ಬೋಧಿಸಿದ್ದ ನನಗೆ ಕೇವಲ ಪಠ್ಯಪುಸ್ತಕಗಳಲ್ಲಿ ಕಂಡ ಚಿತ್ರಗಳನ್ನು ಪ್ರತ್ಯಕ್ಷವಾಗಿ ಕಂಡಾಗ ಭಕ್ತನಿಗೆ ದೇವರನ್ನು ಕಂಡಷ್ಟೇ ಸಂತೋಷ.
ಪ್ರತಿ ವರ್ಷ ಸುಮಾರು 5 ಲಕ್ಷ ಪ್ರವಾಸಿಗಳನ್ನು ಆಕರ್ಷಿಸುವ ಈ ಸಸ್ಯೋದ್ಯಾನ 1919ರಲ್ಲಿ ಹೆನ್ರಿ ಎಡ್ವರ್ಡ್ ಹಂಟಿಂಗ್ಟನ್ ಎಂಬ ಪ್ರಸಿದ್ಧ ವ್ಯಾಪಾರ ಮತ್ತು ಉದ್ಯಮಪತಿಯಿಂದ ಪ್ರಾರಂಭಿಸಲ್ಪಟ್ಟಿತು. ನನ್ನ ಕ್ಯಾಮೆರಾ ಸದ್ದಿಲ್ಲದೇ ನಿರಂತರವಾಗಿ ಎಲ್ಲಾ ವೈವಿಧ್ಯಮಯ ಸಸ್ಯ ಸಂಪತ್ತನ್ನು ತನ್ನಲ್ಲಿ ಸೆರೆಹಿಡಿಯುತ್ತಲೇ ಇತ್ತು. ಸಮಯದ ಪರಿವೆಯೇ ಇಲ್ಲದ ನಮಗೆ ಮುಳುಗುವ ಸೂರ್ಯನೇ ಕಡೆಗೆ ಎಚ್ಚರಿಸಿದ. ಕೇವಲ ಎರಡೇ ವರ್ಗದ ಉದ್ಯಾನವನಗಳನ್ನು ನೋಡಲು ಸಾಧ್ಯವಾಯಿತು. ಅದೊಂದೇ ನನಗಾದ ವ್ಯಥೆ. ಆದರೆ ಮತ್ತೊಮ್ಮೆ ಈ ಸಸ್ಯ ಪ್ರಪಂಚಕ್ಕೆ ಭೇಟಿ ಕೊಡಲೇಬೇಕು ಎಂಬ ಸ್ವಯಂ ಆಶ್ವಾಸನೆಯೊಂದಿಗೆ ಮತ್ತು ಸುಂದರ ಸವಿನೆನಪುಗಳೊಂದಿಗೆ ಹೊರಬಿದ್ದೆ. ದಕ್ಷಿಣ ಕ್ಯಾಲಿಫೋರ್ನಿಯಾಕ್ಕೆ ಭೇಟಿನೀಡುವ ನನ್ನ ಮಿತ್ರರೆಲ್ಲರಿಗೂ ಈ ಸಸ್ಯ ಕಾಶಿಗೊಮ್ಮೆ ಖಂಡಿತಾ ಭೇಟಿನೀಡಿ ಎನ್ನುವ ಸಲಹೆಯೊಂದಿಗೆ ನನ್ನ ಈ ಲೇಖನವನ್ನು ಮುಗಿಸುತ್ತೇನೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications