ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರವೇಶ ದ್ವಾರಗಳು ಮತ್ತು ಅವುಗಳ ದಿಕ್ಕುಗಳು ಮನೆಗೆ ಬರುವ ಸಮೃದ್ದಿ, ಶಾಂತಿ, ನೆಮ್ಮದಿ ಹಾಗೂ ಶಕ್ತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ ಎಂದು ಹೇಳಲಾಗುತ್ತದೆ. ಮನೆಯ ಮುಖ್ಯ ಗೇಟು ಮತ್ತು ಮುಖ್ಯ ದ್ವಾರವು ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬುದುದರ ಮೇಲೆ ವಾಸ್ತು ಶಾಸ್ತ್ರದ ಫಲಗಳು ಬದಲಾಗುತ್ತದೆ. ಕೆಲವು ಮನೆಗಳಲ್ಲಿ ಕಾಂಪಾಂಡ್ ಗೇಟು ದಕ್ಷಿಣ ದಿಕ್ಕಿನಲ್ಲೆ ಇರುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ಇರುತ್ತದೆ. ಇಂತಹ ವ್ಯವಸ್ಥೆ ಇದ್ದಾಗ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ವಾಸ್ತು ತಜ್ಞರು ವಿವರಿಸುತ್ತಾರೆ.
ವಾಸ್ತು ಪ್ರಕಾರ ದಕ್ಷಿಣ ದಿಕ್ಕಿನಲ್ಲಿ ಗೇಟ್ ಇರಬಹುದು ಆದರೆ ಅದು ಸರಿಯಾದ ಸ್ಥಾನದಲ್ಲಿ ಇರಬೇಕು ಎಂಬುದು ಅತಿ ಮುಖ್ಯವಾಗಿದೆ. ದಕ್ಷಿಣ ದಿಕ್ಕಿನಲ್ಲಿ ಇರುವ ಗೇಟ್ ಆಗ್ನೇಯ ಭಾಗದತ್ತ ಇದ್ದರೆ ಅದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಅದೇ ಗೇಟ್ ನೈರುತ್ಯ ಭಾಗದಲ್ಲಿ ಇದ್ದರೆ ಅದನ್ನು ಅಶುಭಕರ ಎಂದು ಹೇಳಲಾಗತ್ತದೆ. ನೈರುತ್ಯ ಭಾದಲ್ಲಿ ದ್ವಾರಗಳು ಇದ್ದರೆ ಇದರಿಂದ ಆರ್ಥಿಕ ತೊಂದರೆಗಳು, ಮನಶಾಂತಿ ಕೊರತೆ, ಕಲಹ ಮತ್ತು ಅನಾವಶ್ಯಕವಾದ ಸಮಸ್ಯೆಗಳು ನಮಗೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಇನ್ನೊಂದಡೆ ಮನೆಯ ಮುಖ್ಯ ದ್ವಾರ ಉತ್ತರ ದಿಕ್ಕಿನಲ್ಲಿ ಇದ್ದರೆ ಅದು ಸಾಮಾನ್ಯವಾಗಿ ಅದನ್ನು ಶುಭಕರ ಎಂದು ವಾಸ್ತು ಹೇಳಲಾಗುತ್ತದೆ. ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ. ಸಂಪತ್ತು ಮತ್ತು ಅಭಿವೃದ್ದಿಯನ್ನು ಸೂಚಿಸುವ ದಿಕ್ಕು ಇದಾಗಿದೆ. ಆದ್ದರಿಂದ ಮನೆಯ ಮುಖ್ಯ ದ್ವಾರವು ಮನೆಯ ಮುಖ್ಯ ದ್ವಾರವು ಉತ್ತರ ಗೋಡೆಯಲ್ಲಿದ್ದು, ಈಶಾನ್ಯ ಭಾಗದತ್ತ ಸ್ವಲ್ಪ ತಿರುಗಿ ಇದ್ದರೆ ಕುಟುಂಬದ ಆರ್ಥಿಕ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.
ಉತ್ತರದ ಮುಖ್ಯ ದ್ವಾರ
ಒಂದು ಪ್ರಮುಖ ನಿಯಮವೆನೆಂದರೆ ದಕ್ಷಿಣದ ಗೇಟು ಮತ್ತು ಉತ್ತರದ ಮುಖ್ಯ ದ್ವಾರ ನೇರವಾಗಿ ಒಂದಕ್ಕೊಂದು ಎದುರುಬರುವಂತೆ ಇರಬಾರದು. ಗೇಟಿನ ಒಳಗಡೆ ನೋಡಿದಾಗ ಮನೆಯ ಮುಖ್ಯ ದ್ವಾರ ನೇರವಾಗ ಕಾಣಿಸುವುದು ವಾಸ್ತು ಪ್ರಕಾರ ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಗೇಟಿನಿಂದ ಒಳಗೆ ಪ್ರವೇಶಿಸಿದ ನಂತರ ಸ್ವಲ್ಪ ಖಾಲಿ ಜಾಗ ಇರಬೇಕು. ಮನೆಯೊಳಗೆ ಹೋಗುವ ದಾರಿ ನೇರವಾಗಿ ಸ್ವಲ್ಪ ತಿರುಗಿ ಅಥವಾ ಮನೆಯ ಸುತ್ತು ಹೋಗುವಂತೆ ಇದ್ದರೆ ಉತ್ತಮ ಎಂದು ವಾಸ್ತು ತಜ್ಞರು ವಿವರಿಸುತ್ತಾರೆ.
ಕಾಂಪೌಂಡ್ ಗೋಡೆಗಳ ಎತ್ತರಕ್ಕೂ ವಾಸ್ತುವಿನಲ್ಲಿ ಮಹತ್ವ ಇದೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಗೋಡೆಗಳು ಸ್ವಲ್ಪ ಹೆಚ್ಚು ಎತ್ತರವಾಗಿರಬೇಕು ಮತ್ತು ಗಟ್ಟಿಯಾಗಿರಬೇಕು. ಉತ್ತರ ಮತ್ತು ಪೂರ್ವ ದಿಕ್ಕಿನ ಗೋಡೆಗಳು ಅದರಿಗಿಂತ ಸ್ವಲ್ಪ ಕಡಿಮೆ ಎತ್ತರದಲ್ಲಿದ್ದರೆ ಶಕ್ತಿಯ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ.
ಮನೆಯ ಸುತ್ತಲಿನ ಖಾಲಿ ಜಾಗದ ವ್ಯವಸ್ಥೆಯೂ ವಾಸ್ತು ಪ್ರಕಾರ ಮುಖ್ಯವಾಗಿದೆ. ದಕ್ಷಿಣ ಭಾಗದಲ್ಲಿ ಖಾಲಿ ಜಾಗ ಕಡಿಮೆ ಇದ್ದು, ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹೆಚ್ಚು ತೆರವಾದ ಜಾಗ ಇರಬೇಕು. ಈ ರೀತಿ ಇದ್ದರೆ ಮನೆಗೆ ಒಳಬರುವ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ವಾಸ್ತು ನಂಬಿಕೆ ಹೇಳುತ್ತದೆ.
ಇದಲ್ಲದೆ ದಕ್ಷಿಣ ಗೇಟಿನಿಂದ ಉತ್ತರ ದಿಕ್ಕಿನ ಮನೆಯ ಮುಖ್ಯ ದ್ವಾರದ ಕಡೆಗೆ ಹೋಗುವಾಗ ಸ್ವಲ್ಪ ಮೆಟ್ಟಿಲು ಅಥವಾ ಎತ್ತರದ ಮಾರ್ಗ ಇರಿಸುವುದು ಉತ್ತಮ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಮನೆಗೆ ಪ್ರವೇಶಿಸುವ ಶಕ್ತಿ ಸಮತೋಲನವಾಗಿರುತ್ತದೆ ಎಂಬ ನಂಬಿಕೆ ಇದೆ.
ಬಣ್ಣಗಳ ಆಯ್ಕೆ
ಬಣ್ಣಗಳ ಆಯ್ಕೆಯೂ ವಾಸ್ತು ಪ್ರಕಾರ ಮಹತ್ವದ್ದಾಗಿದೆ. ದಕ್ಷಿಣ ದಿಕ್ಕಿನ ಗೇಟಿಗೆ ಕೆಂಪು, ಮುದುರು ಬ್ರೌನ್ ಅಥವಾ ಮಣ್ಣಿನ ಬಣ್ಣಗಳನ್ನು ಬಳಸುವುದು ಉತ್ತಮ. ಇವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ. ಆದರೆ ಕಪ್ಪು ಅಥವಾ ಗಾಢ ನೀಲಿ ಬಣ್ಣಗಳನ್ನು ಬಳಸುವುದನ್ನು ತಪ್ಪಿಸುವುದು ಒಳ್ಳೆಯದು.
ವಾಸ್ತು ದೋಷಗಳ ನಂಬಿಕೆ
ಗೇಟಿನ ಮೇಲ್ಬಾದಲ್ಲಿ ಅಥವಾ ಪಕ್ಕದಲ್ಲಿ ಸ್ವಸ್ತಿಕ್ ಅಥವಾ ಓಂ ಚಿಹ್ನೆಯನ್ನು ಅಳವಡಿಸುವುದು ಶುಭಕರವೆಂದು ಪರಿಗಣೆಸಲಾಗುತ್ತದೆ. ಕೆಲವರು ಪಂಚಮುಖದ ಆಂಜನೇಯ ಸ್ವಾಮಿಯ ಚಿತ್ರವನ್ನು ಇಡುತ್ತಾರೆ. ಇಂತಹ ಧಾರ್ಮಿಕ ಚಿಹ್ನೆಗಳು ಮತ್ತು ದಿಕ್ಕುಗಳಿಗೆ ಸಂಬಂಧಿಸಿದ ವಾಸ್ತು ದೋಷಗಳನ್ನು ಕಡಿಮೆ ಮಾಡುತ್ತವೆ ಎಂಬ ನಂಬಿಕೆ ಇದೆ.
ಒಟ್ಟಿನಲ್ಲಿ ದಕ್ಷಿಣ ಗೇಟ್ ಮತ್ತು ಉತ್ತರದ ಮುಖ್ಯದ್ವಾರ ಇರುವ ಮನೆಗಳಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸಿದರೆ ಮನೆಗೆ ಶಾಂತಿ, ಸಮೃದ್ದಿ ಬರಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.
-
ವಾಸ್ತು ಎಂದರೇನು, ಮನೆ ಕಟ್ಟುವಾಗ ವಾಸ್ತು ಯಾಕೆ ಮುಖ್ಯ: ಪ್ರಯೋಜನ, ಅನಾನುಕೂಲಗಳ ಸಂಪೂರ್ಣ ಮಾಹಿತಿ -
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ
















Click it and Unblock the Notifications