ಸಾಹಿತ್ಯಗೋಷ್ಠಿಯಲ್ಲಿ ಚಿತ್ತಾಲರ ‘ಬಂದು ಹೋದವನು’
ಉತ್ತರ
ಕ್ಯಾಲಿಫೋರ್ನಿಯಾದ
ಸಾಹಿತ್ಯ
ಗೋಷ್ಠಿಯ
ಫೆಬ್ರವರಿ
ತಿಂಗಳ
ಕಾರ್ಯಕ್ರಮಕ್ಕೆ
ಇಬ್ಬಗೆಯ
ವಿಷಯ
ವೈವಿಧ್ಯದ
ಸೊಬಗು.
ಸಹೃದಯರ
ಪಾಲಿಗೆ
ಎರಡು
ವಿಶಿಷ್ಠ
ಉಪನ್ಯಾಸಗಳನ್ನು
ಒಂದೇ
ಕಾರ್ಯಕ್ರಮದಲ್ಲಿ
ಕೇಳುವ
ಅವಕಾಶ.
ಫೆಬ್ರವರಿ
9
ರ
ಭಾನುವಾರ
ಸಾಹಿತ್ಯ
ಗೋಷ್ಠಿಯ
ತಿಂಗಳ
ಕಾರ್ಯಕ್ರಮ
ನಡೆಯಲಿದೆ.
ಬೆಳಗ್ಗೆ
10
ರಿಂದ
ಮಧ್ಯಾಹ್ನ
1
ರವರೆಗೆ
ಕಾರ್ಯಕ್ರಮ
ನಡೆಯಲಿದೆ.
ಕನ್ನಡದ ಶ್ರೇಷ್ಠ ಕಾದಂಬರಿಕಾರರಲ್ಲಿ ಹಾಗೂ ಸಣ್ಣ ಕಥೆಗಾರರಲ್ಲಿ ಒಬ್ಬರಾದ ಯಶವಂತ ಚಿತ್ತಾಲರ ಕೃತಿಯ ಬಗ್ಗೆ ಮೊದಲನೇ ಉಪನ್ಯಾಸ ಮೀಸಲು. ‘ಯಶವಂತ ಚಿತ್ತಾಲರ ಬಂದು ಹೋದವನು : ಒಂದು ವಿಮರ್ಶೆ’ ಎನ್ನುವ ವಿಷಯದ ಕುರಿತು ಪ್ರಕಾಶ್ ನಾಯಕ್ ಮಾತನಾಡುವರು.
‘ನೆನಪಿನಂಗಳದಲ್ಲಿ’ ಎನ್ನುವ ವಿಷಯದ ಕುರಿತು ವಸಂತ ರಾವ್ ಅವರು ಕಾರ್ಯಕ್ರಮದ ಎರಡನೇ ಉಪನ್ಯಾಸವನ್ನು ನೀಡುವರು. ಸಾಹಿತ್ಯ ಕೃತಿಯಾಂದು ರೂಪುಗೊಳ್ಳುವ ಬಗೆ, ಸಾಹಿತ್ಯದ ತುಣುಕು ರೂಪುಗೊಳ್ಳಲು ಬೇಕಾದ ಇಂಧನಗಳು, ಇತ್ಯಾದಿಗಳ ಕುರಿತು ವಸಂತ ರಾವ್ ಮಾತನಾಡುವರು. ಕನ್ನಡ ಸಾಹಿತ್ಯ ಕ್ಷೇತ್ರದ ಮೈಲುಗಲ್ಲುಗಳು ಹಾಗೂ ಸಾಹಿತ್ಯ ಸಾಧಕರ ಕುರಿತೂ ಉಪನ್ಯಾಸಕರು ಚರ್ಚಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ ನೆನಪಲ್ಲಿರಲಿ- Wildwood Manor Apartments - Party Hall, 260 N Mathilda Avenue, Sunnyvale CA 94086.
ಶ್ರೀವತ್ಸ ದುಗಲಾಪುರ ಅವರ ಪ್ರಾರ್ಥನೆಯಾಂದಿಗೆ ಸಾಹಿತ್ಯಗೋಷ್ಠಿಯ ಕಾರ್ಯಕ್ರಮ ಶುರುವಾಗುವುದು. ಗಣೇಶ ಕಡಬ ಕಾರ್ಯಕ್ರಮವನ್ನು ನಿರೂಪಿಸುವರು. ಯಥಾಪ್ರಕಾರ ವಿಶ್ವನಾಥ್ ಹುಲಿಕಲ್ ದಂಪತಿಗಳ ಸ್ವಾಗತ-ಆತಿಥ್ಯ ಇದ್ದೇ ಇರುತ್ತದೆ !
(ಇನ್ಫೋ ವಾರ್ತೆ)