Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ
ಮುಂಬೈ: ದೇಶಾದ್ಯಂತ ಇಂದು ಏಪ್ರಿಲ್ 2ರಂದು ವಿಶ್ವ ಜಲ ದಿನ 2026 (World Water Day 2026) ಆಚರಿಸಲಾಗುತ್ತದೆ. ಈ ಪ್ರಯುಕ್ತ ರಿಲಯನ್ಸ್ ಫೌಂಡೇಷನ್ ವಿಶೇಷ ಅಭಿಯಾನ ಆರಂಭಿಸಿದ್ದು, ರಾಷ್ಟ್ರವ್ಯಾಪಿ
Water4Life ಅಭಿಯಾನ ಆರಂಭಿಸಿದೆ. ಸಾವಿರಾರು ಸ್ವಯಂ ಸೇವಕರು ಇದರಲ್ಲಿ ಪಾಲ್ಗೊಂಡಿದ್ದು, ಪ್ರಾಕೃತಿಕವಾಗಿ ನಮಗೆ ದೊರೆತ ಅದೆಷ್ಟೋ ಅತ್ಯಮೂಲ್ಯ ಜಲಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಮಹತ್ವದ ಈ ಅಭಿಯಾನದಲ್ಲಿ 33,000ಕ್ಕೂ ಉತ್ಸಾಹಿ ಸ್ವಯಂಸೇವಕರು ಭಾರತದಾದ್ಯಂತ ಪಾಲ್ಗೊಂಡಿದ್ದರು. ಈ ರೀತಿ ಒಗ್ಗೂಡಲು ಕಾರಣವಾದ ಸಾಮಾನ್ಯ ಉದ್ದೇಶ ಏನೆಂದರೆ ಅದು ಜೀವಕ್ಕಾಗಿ ನೀರು ಅಭಿಯಾನ. ಭಾರತದಲ್ಲಿ ಜಲ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು, ಪುನರುಜ್ಜೀವನಗೊಳಿಸುವುದು ಹಾಗೂ ಸುಸ್ಥಿರಗೊಳಿಸುವುದು ಈ ನಿರಂತರ ಪ್ರಯತ್ನದ ಗುರಿಯಾಗಿದೆ. ಕಳೆದ ಹತ್ತು ದಿನದಲ್ಲಿ 912ಕ್ಕೂ ಹೆಚ್ಚು ಹಳ್ಳಿಗಳಲ್ಲಿ 1400ಕ್ಕೂ ಹೆಚ್ಚು ಜಲಮೂಲದ ಪ್ರದೇಶಗಳಲ್ಲಿ ರಿಲಯನ್ಸ್ ಫೌಂಡೇಷನ್ ಸಮುದಾಯ ಸ್ವಯಂಪ್ರೇರಿತ ಪ್ರಯತ್ನವನ್ನು ಮುನ್ನಡೆಸಿದೆ.

ಇನ್ನೂ ಆಯಾ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡುವುದರ ಜೊತೆಗೆ ದೀರ್ಘಾವಧಿ ನೀರಿನ ಆಡಳಿತ- ನಿಗಾ, ಮತ್ತು ಸಮುದಾಯ ಮಾಲೀಕತ್ವ, ರೈತರ ತೊಡಗಿಸಿಕೊಳ್ಳುವಿಕೆ, ಮಹಿಳೆಯರ ಗುಂಪುಗಳು, ಯುವಜನರು, ಸ್ಥಳೀಯ ಸಂಸ್ಥೆಗಳು, ರಿಲಯನ್ಸ್ ಉದ್ಯೋಗಿ ಸ್ವಯಂಸೇವಕರು, ಆರೋಗ್ಯ ಸಹಾಯ ಒದಗಿಸುವವರು ಮತ್ತಷ್ಟು ಮತ್ತಷ್ಟು ಜನರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಫೌಂಡೇಶನ್ ತಿಳಿಸಿದೆ.
ವಾಟರ್ ಫಾರ್ ಲೈಪ್ ಎಂಬುದು ಜಲದಿನ ಪೂರ್ವವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಒಳಗೊಂಡಿತ್ತು. ಅದರಲ್ಲಿ ಸರ್ಕಾರಿ ರಚನೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಹ ತೊಡಗಿಕೊಂಡವು. ಅದರ ಜೊತೆಗೆ ಸುಲಭವಾಗಿ ಅದನ್ನು ಅನುಕರಿಸುವ ವಿಧಾನವೂ ಇತ್ತು. ಅದರಲ್ಲಿ ಸಮುದಾಯ ಒಗ್ಗೂಡಿಸುವಿಕೆ, ತ್ಯಾಜ್ಯ ಇಳಿಕೆ ಬಗೆಗಿನ ಜಾಗೃತಿ ಮತ್ತು ಜಲ ಸಾಕ್ಷರತೆ ಸಹ ಒಳಗೊಂಡಿತ್ತು.
ಕಳೆದ ಕೆಲವು ದಿನಗಳಿಂದ ಸ್ವಯಂಸೇವಕರು ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯವನ್ನು ತೆಗೆದರು, ಅದರ ಜೊತೆಗೆ ವರ್ಗೀಕರಣ ಮತ್ತು ಸುರಕ್ಷಿತ ವಿಲೇವಾರಿ, ನೀರಿನ ಹರಿವು ಸುಧಾರಣೆಗೆ ಒಳಹರಿವು ಮತ್ತು ಹೊರಹರಿವಿನ ಪುನರುಜ್ಜೀವನ ಸಹ ಮಾಡಿದರು. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಣ್ಣು ಹಾಗೂ ನೀರಿನ ಸಂರಕ್ಷಣೆಗೆ ಒಟ್ಟಾರೆ ಕಾರ್ಯಸೂಚಿಯನ್ನು ಸಕ್ರಿಯಗೊಳಿಸಿತು.
85,000 ಕೆ.ಜಿ. ತ್ಯಾಜ್ಯ ಸಂಗ್ರಹ
ಭಾರತದ 15 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 108 ಜಿಲ್ಲೆಗಳಲ್ಲಿ 85,000 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಸಂಗ್ರಹಣೆ ಮಾಡಲಾಯಿತು. ರಿಲಯನ್ಸ್ ಫೌಂಡೇಷನ್ ಇಲ್ಲಿಯವರೆಗೆ 2,000 ಲಕ್ಷ ಘನ ಮೀಟರ್ಗೂ ಅಧಿಕ ನೀರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಲಕ್ಷಾಂತರ ಗ್ರಾಮೀಣ ಜನರ ಜೀವನವನ್ನು ಸುಧಾರಿಸಿದೆ. ಅದರಲ್ಲಿ ಉಲ್ಲೇಖ ಮಾಡಲೇಬೇಕಾದ ಪ್ರಮುಖ ಸ್ಥಳಗಳು ಅಂದರೆ, ನರ್ಮದಾ ನದಿ ಘಾಟ್ ಗಳು, ಪ್ರತಾಪ್ ಗಢದ ಹೃದಯ ಭಾಗವಾದ ದಿಪೇಶ್ವರ್ ತಲಬ್, ಗೋದಾವರಿ ಮುಖಜ ಭೂಮಿಯ ಕುಲ್ಭೇರಾ ಉಪನದಿ, ಕೊಚ್ಚಿ ಕಡಲ ತೀರ, ರಣಕಲ ಸರೋವರ ಹೀಗೆ ಅನೇಕ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯ ನಿರ್ವಹಿಸಲಾಯಿತು.
ಕರ್ನಾಟಕದ ಮಕ್ಕಳು ಅಭಿಯಾನದಲ್ಲಿ ಭಾಗಿ
ವಿವಿಧ ಸ್ತರದ ಜನರು ಒಟ್ಟಾಗಿ ಇದರಲ್ಲಿ ಪಾಲ್ಗೊಂಡರು. ಅದರಲ್ಲಿ ಮುಖ್ಯವಾಗಿ ಕರ್ನಾಟಕದ ಬೆಳಗಾವಿಯ ಶಾಲೆ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ದಕ್ಷಿಣ ಕೇರಳದಲ್ಲಿ ಮೀನುಗಾರ ಸಮುದಾಯಗಳು ಮತ್ತು ಪೌರ ಒಳಚರಂಡಿ ಕಾರ್ಮಿಕರು ಒಟ್ಟಾಗಿ ಎರ್ನಾಕುಲಂನಲ್ಲಿ ಇರುವ ಕೊಚ್ಚಿ ಕಡಲ ಕಿನಾರೆಯ ಐತಿಹಾಸಿಕ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು. ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಆರೋಗ್ಯ ಕಾರ್ಯಕರ್ತರು ಸ್ವಾಮಿ ಸಮರ್ಥ ಕಾಲುವೆಯ ಘಾಟ್ ಗಳು. ಕೃಷ್ಣಾ ನದಿ ಉಪನದಿಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಕೊಟ್ಟರು.
ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದವರು 2500 ಗ್ರಾಮ ಹವಾಮಾನ ರಕ್ಷಕರು. ಅವರಿಗೆ ರಿಲಯನ್ಸ್ ಫೌಂಡೇಷನ್ ನಿಂದಲೇ ತರಬೇತಿ ನೀಡಿ, ಸಿದ್ಧಪಡಿಸಲಾಗಿತ್ತು. ನೀರು ಹಾಗೂ ತ್ಯಾಜ್ಯ ನಿರ್ವಹಣೆಗೆ ಸ್ಥಳೀಯ ಕಾರ್ಯ ಚಟುವಟಿಕೆಗೆ ಉತ್ತೇಜನ ನೀಡುವುದಕ್ಕೆ ಹಾಗೂ ಜಾಗೃತಿ ಪಸರಿಸುವುದಕ್ಕೆ ತರಬೇತಿ ನೀಡಲಾಗಿತ್ತು. ಇನ್ನೂ ಮುಂದುವರಿದು ಸಮುದಾಯ ಚಾಲಿತ ಚಳವಳಿಯ ಮೂಲಕ ಇರಿಸಿಕೊಂಡಿದ್ದ ಗುರಿ ಅಂದರೆ, ನೀರಿನ ಮೂಲಗಳ ರಕ್ಷಣೆ ಬಗ್ಗೆ ಗಮನ ನೀಡುವುದು ಹಾಗೂ ದೀರ್ಘಾವಧಿಯಲ್ಲಿ ಅವುಗಳ ಪುನರುಜ್ಜೀವನ ಮಾಡುವತ್ತ ಫೌಂಡೇಶನ್ ಹೆಜ್ಜೆ ಇಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.
-
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ













Click it and Unblock the Notifications