ಶ್ರೀನಗರ, ಆಗಸ್ಟ್ 5: ನರೇಂದ್ರ ಮೋದಿ ಸರ್ಕಾರದಿಂದ ಐತಿಹಾಸಿಕ ಮಸೂದೆ ಮಂಡನೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ, ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35ಎ ಅನುಚ್ಛೇದ ರದ್ದುಗೊಳಿಸುವಂತೆ ಮಸೂದೆ ಮಂಡಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ಸೃಷ್ಟಿಯಾಗಿರುವ ಆತಂಕದ ವಾತಾವರಣಕ್ಕೆ ಸೋಮವಾರ ಉತ್ತರ ಉತ್ತರ ಸಿಕ್ಕಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವಾಲಯ ಸಭೆ ಬೆಳಗ್ಗೆ 9. 30ಕ್ಕೆ ಆರಂವಾಗಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳು ಸಂಪುಟ ಸಭೆ ಬಳಿಕ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿದೆ.
ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬುಧವಾರ ಅಥವಾ ಗುರುವಾರ ನಡೆಯಬೇಕಿದ್ದ, ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಸತ್ ಭವನದಲ್ಲಿ ನಡೆಯುತ್ತಿದೆ.
ಕಾಶ್ಮೀರ ವಿಚಾರದ ಬಗ್ಗೆ ಈ ಸಭೆಯಲ್ಲಿ ಏನಾದರೂ ತೀರ್ಮಾನ ಮಾಡಬಹುದೇನೋ ಎಂಬ ಸಂದೇಹಗಳು ವ್ಯಕ್ತವಾಗುತ್ತಿದೆ.
ಇದಕ್ಕೆ ಪೂರಕವಾಗಿಯೇ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗೃಹ ಕಾರ್ಯದರ್ಶಿ ಹಾಗೂ ಭದ್ರತಾ ಸಲಹೆಗಾರರೊಂದಿಗೆ ತುರ್ತು ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಕಾಶ್ಮೀರ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.
Aug 05, 2019, 7:39 pm IST
ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಲಾಗಿದೆ. ಅವರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮುಖ್ಯಸ್ಥರೂ ಆಗಿದ್ದಾರೆ. ಮೆಹಬೂಬಾ ಮಫ್ತಿ ಅವರನ್ನು ಬಂಧಿಸಿ ಪ್ರವಾಸಿ ಬಂಗಲೆಯೊಂದರಲ್ಲಿ ಇರಿಸಲಾಗಿದೆ.
Aug 05, 2019, 7:06 pm IST
"ನಮಗೆ ಕಾಲಾವಕಾಶ ನೀಡಿ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಕಂಡ ನಂತರ ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಪೂರ್ಣಾಧಿಕಾರಯುಳ್ಳ ಒಕ್ಕೂಟ ವ್ಯವಸ್ಥೆಯ ರಾಜ್ಯವಾಗಲಿದೆ"- ಅಮಿತ್ ಶಾ
Aug 05, 2019, 6:58 pm IST
ವಿಧೇಕಯದ ಪರ 125 ಮತಗಳು ಬಂದಿದ್ದರೆ, ವಿಧೇಯಕದ ವಿರುದ್ಧ 61 ಮತಗಳು ಚಲಾವಣೆ ಆಗಿವೆ.
Aug 05, 2019, 6:57 pm IST
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದು. ಜಮ್ಮು, ಕಾಶ್ಮೀರ, ಲಡಾಕ್ ವಿಭಜನೆ ಮತ್ತು 10% ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ.
Aug 05, 2019, 6:53 pm IST
"ನಮಗೆ ಕಾಲಾವಕಾಶ ನೀಡಿ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಕಂಡ ನಂತರ ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಪೂರ್ಣಾಧಿಕಾರಯುಳ್ಳ ಒಕ್ಕೂಟ ವ್ಯವಸ್ಥೆಯ ರಾಜ್ಯವಾಗಲಿದೆ"- ಅಮಿತ್ ಶಾ
Aug 05, 2019, 6:53 pm IST
ಕಾಶ್ಮೀರ ವಿಭಜನೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ವಿಶೇಷ ಸ್ಥಾನ ಮಾನ ರದ್ದು ವಿಚಾರ ಅಂಗೀಕಾರ ಬಾಕಿ ಇದೆ.
Aug 05, 2019, 2:55 pm IST
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲ ಸೂಚಿಸಿದ್ದಾರೆ.
Aug 05, 2019, 2:10 pm IST
ಕೇಂದ್ರ ನಿರ್ಧಾರ ಪ್ರಶ್ನಿಸಿ ಕರ್ತವ್ಯ ನಿರತ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದಾರೆ.
Aug 05, 2019, 1:39 pm IST
ಜಮ್ಮು ಮತ್ತು ಕಾಶ್ಮೀರ ಮಸೂದೆ ಮಂಡನೆ-ಜೆಡಿಯು ಹೊರತುಪಡಿಸಿ ವಿಪಕ್ಷಗಳಿಂದ ಅನಿರೀಕ್ಷಿತ ಬೆಂಬಲ , ಬಿಜೆಪಿ ಮಿತ್ರ ಪಕ್ಷ ಜೆಡಿಯುನಿಂದ ಕಲಾಪ ಬಹಿಷ್ಕಾರ
Aug 05, 2019, 1:23 pm IST
ಅಮಿತ್ ಶಾ ಅವರು ಮಂಡಿಸಿರುವ 370 ವಿಧೇಯಕಕ್ಕೆ ಶಿವಸೇನಾ ಬೆಂಬಲ ನೀಡಿದೆ. ''ಇಂದು ಜಮ್ಮು ಮತ್ತು ಕಾಶ್ಮೀರವನ್ನು ಪಡೆದಿದ್ದೇವೆ, ನಾಳೆ ಬಲೂಚಿಸ್ಥಾನ, ಪಿಓಕೆಯನ್ನು ಪಡೆದುಕೊಳ್ಳುತ್ತೇವೆ. ಪ್ರಧಾನಿ ಮೋದಿಯವರು ಹಿಂದೂಸ್ಥಾನದ ಪ್ರತಯೊಬ್ಬರ ಕನಸನ್ನು ನನಸು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ'' ಸಂಜಯ್ ರೌತ್, ಶಿವಸೇನೆ.
Aug 05, 2019, 1:11 pm IST
370ನೇ ವಿಧಿ ರದ್ದತಿ ಹಿನ್ನೆಲೆ, ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ, ಗುಂಪು ಗುಂಪಾಗಿ ಹೊರಗಡೆ ಓಡಾಡುವುದಿಲ್ಲ, ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ.
Aug 05, 2019, 1:07 pm IST
ಮಸೂದೆ ಅಂಗೀಕಾರಕ್ಕೆ ಸರಳ ಬಹುಮತ ಸಾಕು, ಈಗಾಗಲೇ 370 ವಿಧಿ ರದ್ದತಿಗೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ.
Aug 05, 2019, 1:05 pm IST
ಬಿಜೆಡಿ, ಎಂಪಿ, ಪ್ರಸನ್ನ ಆಚಾರ್ಯ ಹೇಳಿಕೆ'' ಜಮ್ಮು ಕಾಶ್ಮೀರ ಈಗ ಭಾರತದ ಒಂದು ಭಾಗವಾಗಿದೆ. ಬಿಜೆಡಿಯು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಬೆಂಬಲ ನೀಡುತ್ತದೆ. ನಮ್ಮದು ರೀಜನಲ್ ಪಕ್ಷವಾಗಿದ್ದರೂ ಕೂಡ, ದೇಶ ಮೊದಲು.''
Aug 05, 2019, 1:03 pm IST
ಎಐಎಡಿಎಂಕೆ ಹಾಗೂ ಬಿಎಸ್ಪಿ ಎರಡೂ ಮಸೂದೆ ರದ್ದತಿ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿವೆ.
Aug 05, 2019, 12:49 pm IST
370 ವಿಧಿ ವಿರೋಧಿಸಿದ್ದ ಶ್ಯಾಂ ಪ್ರಸಾದ್ ಮುಖರ್ಜಿ, 60 ವರ್ಷಗಳ ಹಿಂದೆ ಲೋಕಸಭೆಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದರು, ಕಾಶ್ಮೀರ ನೀತಿಯನ್ನು ಧಿಕ್ಕರಿಸಿದ್ದ ಶ್ಯಾಮ್ ಪ್ರಸಾದ್ , ಅಂದು ನೆಹರು ಸಂಪುಟದಿಂದ ಹೊರಬಂದಿದ್ದರು.
Aug 05, 2019, 12:48 pm IST
ಒಂದೇ ದೇಶದಲ್ಲಿ ಎರಡು ಕಾನೂನು, ಎರಡು ಧ್ವಜ ಇದು ಸಾಧ್ಯವೇ ಇಲ್ಲ ಎಂದು ಬಿಜೆಪಿ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಹೇಳಿದ್ದರು
Aug 05, 2019, 12:45 pm IST
ಜಮ್ಮು ಕಾಶ್ಮೀರವನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳಲಿರುವುದರಿಂದ , ಜಮ್ಮು ಮತ್ತು ಕಾಶ್ಮೀರಕ್ಕೆ ಸಾಕಷ್ಟು ಹಣ ಹರಿದುಬರಲಿದೆ.ಇಷ್ಟು ದಿನ ದೇಶಕ್ಕೆ ಅನ್ವಯಿಸುವ ಕಾನೂನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ ಆದರ ಈಗ ದೇಶದೆಲ್ಲೆಡೆ ಒಂದೇ ಕಾನೂನು.
Aug 05, 2019, 12:25 pm IST
ಜಮ್ಮು ಕಾಶ್ಮೀರ ಮಸೂದೆಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬೆಂಬಲ
Aug 05, 2019, 12:22 pm IST
ಜಮ್ಮು ಕಾಶ್ಮೀರಕ್ಕೆ ಮತ್ತೆ 8 ಸಾವಿರ ಯೋಧರ ನಿಯೋಜನೆ
Aug 05, 2019, 12:12 pm IST
ಪ್ರತ್ಯೇಕವಾದಿ ಕಾಟಕ್ಕೆ , ಭಯೋತ್ಪಾದಕ ಆಟಕ್ಕೆ ಅಂತ್ಯ ಬೀಳಲಿದೆ, ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಪ್ರತ್ಯೇಕವಾದಿಗಳ ಅಟ್ಟಹಾಸವಿದೆ. ಅದೆಲ್ಲವೂ ನಿಯಂತ್ರಣಕ್ಕೆ ಬರಲಿದೆ.
Aug 05, 2019, 12:06 pm IST
ಜಮ್ಮು ಕಾಶ್ಮೀರದಲ್ಲಿ ಹೊರಗಿನವರು ಕೂಡ ಭೂಮಿ ಖರೀದಿಸಬಹುದಾಗಿದೆ. ಇಡೀ ದೇಶಕ್ಕೆ ಈಗ ಒಂದೇ ಕಾನೂನು ಅನ್ವಯವಾಗಲಿದೆ.
ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ನೀಡಲಾಗಿರುವ ವಿಶೇಷಾಧಿಕಾರ ಕಲಂ 35-ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಆಗಸ್ಟ್ 27ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
ಇಂದು ಭಾರತದ ಅತ್ಯಂತ ಕರಾಳದಿನ, ಇದರಿಂದ ವಿನಾಶಕಾರಿ ಪರಿಣಾಮಗಳಾಗುತ್ತವೆ- ಮೆಹಬೂಬಾ ಮುಫ್ತಿ ಹೇಳಿಕೆ
Aug 05, 2019, 11:52 am IST
ಜಮ್ಮು ಮತ್ತು ಕಾಶ್ಮೀರದ ವಿಧಾನಮಂಡಲಕ್ಕೆ ಇನ್ನು ಅಧಿಕಾರವಿರುವುದಿಲ್ಲ, ಜಮ್ಮು-ಕಾಶ್ಮೀರದ ಆಡಳಿತ ಮುಖ್ಯಸ್ಥ ರಾಜ್ಯಪಾಲಾರಾಗಿತ್ತಾರೆ.
Aug 05, 2019, 11:49 am IST
ಆಗಸ್ಟ್ 7 ರಂದು ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ
Aug 05, 2019, 11:42 am IST
ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಾನಸಭೆ ಇರಲಿದೆ.ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ವಿಧಾನಸಭೆ ಇರುವುದಿಲ್ಲ.
Aug 05, 2019, 11:40 am IST
ರಾಜ್ಯಸಭೆ ಪ್ರಮುಖ ನಿರ್ಣಯ: ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ, ಲಡಾಕ್ ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯವಲ್ಲ ಕೇಂದ್ರಾಡಳಿತ ಪ್ರದೇಶ
Aug 05, 2019, 11:36 am IST
ಲಡಾಕ್ಗೆ ಕೇಂದ್ರಾಡಳಿತ ಸ್ಥಾನಮಾನ ನೀಡಲು ಅಮಿತ್ ಶಾ ಪ್ರಸ್ತಾವನೆ, 370ನೇ ವಿಧಿ ರದ್ದಾದರೆ ವಿಶೇಷ ಸ್ಥಾನಮಾನ ಇರುವುದಿಲ್ಲ.
Aug 05, 2019, 11:33 am IST
ಪ್ರಸ್ತಾವನೆಗೆ ರಾಷ್ಟ್ರಪತಿ ಸಹಿ ಹಾಕಿದ ಮೇಲೆ ಯಾವ ಉಪ ವಿಧಿಯೂ ಜಾರಿಯಲ್ಲಿರುವುದಿಲ್ಲ
READ MORE
9:27 AM, 5 Aug
ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ, ಕಾಶ್ಮೀರದ ಬಗ್ಗೆ ತೀರ್ಮಾನ ಪ್ರಕಟಿಸುವ ಸಾಧ್ಯತೆ
9:42 AM, 5 Aug
ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆ, ಕಾಶ್ಮೀರದ ಬಗ್ಗೆ ತೀರ್ಮಾನ ಪ್ರಕಟಿಸುವ ಸಾಧ್ಯತೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದೆ ಎಂಬ ವದಂತಿ, ಅಕ್ಷರಶಃ ಕಣಿವೆ ರಾಜ್ಯದ ರಾಜಕೀಯ ನಾಯಕರ ನಿದ್ದೆಗಡೆಸಿದೆ.
9:42 AM, 5 Aug
ಸಂವಿಧಾನದ 35ಎ ಕಲಂ ಮತ್ತು 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಲಿದ್ದು, ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮತಿಭ್ರಮಣೆಯಾದಂತಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.
9:42 AM, 5 Aug
ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿರುವ ರಾಜ್ಯಪಾಲ ಸತ್ಯಪಾಲ್ ಮಲಿಕ್, ಸಂವಿಧಾನದ 35ಎ ಕಲಂ ಹಾಗೂ 370ನೇ ವಿಧಿ ರದ್ದುಪಡಿಸುವ ಅಥವಾ ರಾಜ್ಯ ವಿಭಜನೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
9:43 AM, 5 Aug
ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸೇರಿ ಕಾಶ್ಮೀರಿ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗುತ್ತಿದೆ ಎಂದು ಅವರೇ ಟ್ವೀಟ್ ಮಾಡಿದ್ದಾರೆ.
9:45 AM, 5 Aug
ಅಮರನಾಥ ಯಾತ್ರಿಕರು, ಪ್ರವಾಸಿಗರನ್ನು ಕಣಿವೆ ರಾಜ್ಯದಿಂದ ಹಿಂದಿರುಗುವಂತೆ ಸರ್ಕಾರ ಹೊರಡಿಸಿರುವ ಪ್ರಕಟಣೆ, ಹೆಚ್ಚಿನ ಭದ್ರತಾ ಪಡೆಗಳ ನಿಯೋಜನೆ, ಉಗ್ರರ ದಾಳಿ ಸಾಧ್ಯತೆಗೆ ಸಾಕ್ಷ್ಯ ಸ್ನೈಪರ್ ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು, ಈ ಎಲ್ಲವೂ ಜಮ್ಮು ಕಾಶ್ಮೀರದ ಸ್ಥಳೀಯರಲ್ಲಿ ವಿಶೇಷ ಸ್ಥಾನಮಾನ ಕಸಿಯುವ ಮುನ್ನುಡಿಯಂತೆ ಗೋಚರಿಸುತ್ತಿವೆ.
9:56 AM, 5 Aug
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಓಮರ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬ ವರದಿಗಳು ಕೇಳಿಬಂದಿವೆ.
9:58 AM, 5 Aug
ದೆಹಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಜಮ್ಮು ಕಾಶ್ಮೀರದ ಭದ್ರತೆ ಕುರಿತು ಮಹತ್ವದ ಸಭೆ ಆರಂಭಗೊಂಡಿದೆ. ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಪ್ರಮುಖರು ಸಭೆಯಲ್ಲಿದ್ದಾರೆ.
10:00 AM, 5 Aug
ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ತುಕಡಿಗಳ ನಿಯೋಜನೆ ಹಾಗೂ ಅಮರನಾಥ ಯಾತ್ರೆ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಮಹತ್ವದ ಬೆಳವಣಿಗೆಯಾಗುವ ನಿರೀಕ್ಷೆ ಇದೆ. ಉಗ್ರ ದಾಳಿಯ ನಿರೀಕ್ಷೆ ಇದ್ದು ಹಾಗಾಗು ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
10:05 AM, 5 Aug
ಜಮ್ಮು ಮತ್ತು ಕಾಶ್ಮೀರದಲ್ಲಿ 144 ಸೆಕ್ಸನ್ ಜಾರಿ, ಬಿಕೋ ಎನ್ನುತ್ತಿರುವ ಶ್ರೀನಗರದ ರಸ್ತೆಗಳು.
Jammu and Kashmir: Latest visuals from various parts of Srinagar where section 144 CrPC has been imposed from midnight 5th August. pic.twitter.com/bFOeHnwh4O
ಜಮ್ಮು ಕಾಶ್ಮೀರದಲ್ಲಿ ಸೆಕ್ಷನ್ 144 ಜಾರಿಯಾಗಿರುವ ಕಾರಣ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
10:23 AM, 5 Aug
ಕಾಶ್ಮೀರ ವಿಚಾರದಲ್ಲಿ ಹಿಂಸೆ ಭುಗಿಲೇಳದಂತೆ ಕಟ್ಟೆಚ್ಚರ ವಹಿಸಿ, ಉತ್ತರ ಭಾರತದ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಣೆ
10:25 AM, 5 Aug
ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಅಮಿತ್ ಶಾ ಪ್ರಸ್ತಾಪಿಸಲಿದ್ದಾರೆ. ಲೋಕಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಸ್ತಾಪಿಸಲಿದ್ದಾರೆ ಎಂದು ಅಮಿತ್ ಶಾ ಸಂಪುಟ ಸಭೆ ಬಳಿಕ ತಿಳಿಸಿದ್ದಾರೆ.
10:37 AM, 5 Aug
ಸಂಸತ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳವಣಿಗೆ, ಹೆಚ್ಚು ಟ್ರೂಪ್ಗಳನ್ನು ಏಕೆ ಕಳುಹಿಸಲಾಗಿದೆ. ಸೆಕ್ಷನ್ 144 ಯಾಕೆ ಜಾರಿ ಮಾಡಲಾಗಿದೆ ಎನ್ನುವ ಕುರಿತು ಅಮಿತ್ ಶಾ ಉತ್ತರ ನೀಡಲಿದ್ದಾರೆ.
10:40 AM, 5 Aug
ಸಚಿವ ಸಂಪುಟ ಸಭೆ ಪೂರ್ಣಗೊಂಡ ಬಳಿಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗುಹಾ ಅವರನ್ನು ಭೇಟಿ ಮಾಡಿದ್ದಾರೆ.
10:40 AM, 5 Aug
ಕಳೆದ ಹತ್ತು ಹದಿನೈದು ದಿನಗಳಿಂದ ಭದ್ರತಾ ಸಲಹೆಗಾರ, ಹಾಗೂ ಗೃಹ ಕಾರ್ಯದರ್ಶಿಗಳನ್ನು ಭೇಟಿಯಾಗುತ್ತಿದ್ದಾರೆ, ಅಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವ ಮಾಹಿತಿ ಪಡೆಯುತ್ತಿದ್ದಾರೆ. ಆರ್ಟಿಕಲ್ 35(ಎ) ತೆಗೆದು ಹಾಕುವುದಾದರೆ ಗೃಹ ಕಾರ್ಯಾಲಯ ಪ್ರಮುಖ ಸ್ಥಾನ ವಹಿಸುತ್ತದೆ.
10:41 AM, 5 Aug
ಲೋಕಸಭಾ ಸದಸ್ಯರಿಗೆ ವಿಪ್ ಜಾರಿ, ಎಲ್ಲರೂ ಕಡ್ಡಾಯವಾಗಿ ಲೋಕಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ.
10:44 AM, 5 Aug
ಸಂಸತ್ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ, ಐತಿಹಾಸಿಕ ನಿರ್ಧಾರ ಪ್ರಕಟಿಸಬಹುದಾ ಎನ್ನುವ ಕುತೂಹಲ ಮೂಡಿದೆ
10:50 AM, 5 Aug
ಮೋದಿ ನೇತೃತ್ವದ ಕ್ಯಾಬಿನೆಟ್ ಸಭೆ ಅಂತ್ಯ, ಕಣಿವೆ ರಾಜ್ಯ ಕಾಶ್ಮೀರದ ಬಗ್ಗೆ ಯಾವ ರೀತಿಯ ನಿರ್ಧಾರ ಬರುತ್ತದೆ ಎನ್ನುವುದು ಸಧ್ಯದ ಕುತೂಹಲ. ಖಾಯಂ ನಿವಾಸಿಗಳಿಗೆ ಅಲ್ಲಿರುವವರಿಗೆ ಮಾತ್ರ ಹಕ್ಕು, ಬೇರೆಡೆಯಿಂದ ಅಲ್ಲಿಗೆ ಹೋಗುವಂತವರಿಗೆ ಯಾವುದೇ ಹಕ್ಕು ನೀಡುವುದಿಲ್ಲ.
10:51 AM, 5 Aug
ಮಗ್ಗಲು ಮುಳ್ಳಾಗಿರುವ ಕಾಶ್ಮೀರದ ಕುರಿತು ಕೆಲವೇ ನಿಮಿಷಗಳಲ್ಲಿ ನಿರ್ಧಾರ ಹೊರ ಬೀಳಲಿದೆ. ಈಗಾಗಲೇ ಸಂಸತ್ಗೆ ನರೇಂದ್ರ ಮೋದಿ ಆಗಮಿಸಿದ್ದು, ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದ್ದಾರೆ.
10:55 AM, 5 Aug
ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆಯಾ ಎನ್ನುವುದರ ಕುರಿತು ಕೂಡ ಕುತೂಹಲ ಮೂಡಿದೆ.
10:59 AM, 5 Aug
ಅಮಿತ್ ಶಾ ನಿರ್ಧಾರಕ್ಕೆ ಕೌಂಟ್ಡೌನ್ ಆರಂಭವಾಗಿದೆ, ಕೆಲವೇ ನಿಮಿಷಗಳಲ್ಲಿ ಉಭಯ ಸದನಗಳಲ್ಲಿ ಮಹತ್ವದ ಘೋಷಣೆ
11:02 AM, 5 Aug
ರಾಜ್ಯಸಭೆ ಕಲಾಪ ಆರಂಭ
11:09 AM, 5 Aug
ಕೆಲ ಕ್ಷಣದಲ್ಲೇ ಗೃಹ ಸಚಿವ ಅಮಿತ್ ಶಾ ಅವರಿಂದ ಮಹತ್ವದ ನಿರ್ಧಾರ ಪ್ರಕಟ
11:12 AM, 5 Aug
ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ ಅಮಿತ್ ಶಾ
11:12 AM, 5 Aug
ಇಬ್ಬರು ಗೃಹ ಬಂಧನದಲ್ಲಿದ್ದಾರೆ ಮೊದಲು ಅದರ ಬಗ್ಗೆ ಚರ್ಚೆ ನಡೆಸಿ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತು.
11:13 AM, 5 Aug
ಕಾಶ್ಮೀರ ವಿಚಾರವಾಗಿ ರಾಜ್ಯಸಭೆಯಲ್ಲಿ ಗದ್ದಲ, ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದ ಸ್ಪೀಕರ್ ವೆಂಕಯ್ಯ ನಾಯ್ಡು
11:17 AM, 5 Aug
ಎಲ್ಲಾ ಬಿಲ್ಗಳು ಕಾಶ್ಮೀರದ ಬಗ್ಗೆಯೇ ಇದೆ, ಮೊದಲು ಬಿಲ್ ಮಂಡನೆ ಮಾಡುತ್ತೇನೆ ಅದಾದ ಬಳಿಕ ಚರ್ಚೆ ಮಾಡೋಣ ಉತ್ತರ ನೀಡುತ್ತೇನೆ- ಅಮಿತ್ ಶಾ
11:19 AM, 5 Aug
370 ವಿಧಿ ಬಗ್ಗೆ ಮಾತನಾಡುತ್ತಿರುವ ಅಮಿತ್ ಶಾ, 370, 35(ಎ) ವಿಧಿ ರದ್ದು
11:22 AM, 5 Aug
ಕಾಶ್ಮೀರಕ್ಕಿಲ್ಲ ವಿಶೇಷ ಸ್ಥಾನಮಾನ, ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದು
Jammu and Kashmir Issue:Union Government may announce its crucial decision on long-pending in parliament, there are some chances that the government may announce this division in parliament. Live updates in Kannada.