ಮೇ 23 ಮೋದಿ ದಿನವಾಗಲಿ: ಬಾಬಾ ರಾಮ್ದೇವ್
Recommended Video
ನವದೆಹಲಿ, ಮೇ 28:2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಭರ್ಜರಿ ಜಯ ಗಳಿಸಿದೆ.
ಈ ಫಲಿತಾಂಶ ನೀಡಿದ ಮೇ 23ರನ್ನು ನರೇಂದ್ರ ಮೋದಿ ದಿನ ಎಂದು ಆಚರಿಸ ಬೇಕು ಎನ್ನುವುದು ಯೋಗಗುರು ಬಾಬಾ ರಾಮ್ದೇವ್ ಆಗ್ರಹವಾಗಿದೆ.
'ಒಂದು ಕಡೆ ಮಹಾಘಟಬಂಧನ ಇನ್ನೊಂದೆಡೆ ಮೋದಿ ಏಕಾಂಗಿಯಾಗಿದ್ದರು, ಇಡೀ ಚುನಾವಣೆಯಲ್ಲಿ ಏಕಾಂಗಿಯಾಗಿ ಅವರು ಹೋರಾಡಿದರು, ಉತ್ತರ ಪ್ರದೇಶ ಹಾಗೂ ದೇಶದ ಜನ ಮೋದಿಯ ಕೈಬಿಡಲಿಲ್ಲ, ಇನ್ನಷ್ಟು ಬಲಿಷ್ಠಗೊಳಿಸಿದರು.

ಮೇ 23ರಂದು ಬಿಜೆಪಿ ಭರ್ಜರಿಜಯಗಳಿಸಿದೆ. ಹೀಗಾಗಿ ಮೇ 23ನ್ನು ಮೋದಿ ದಿನ ಅಥವಾ ಲೋಕಕಲ್ಯಾನ ದಿನ ಎಂದು ಆಚರಿಸಬೇಕು ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
ಮೊದಲಿನಿಂದಲೂ ಮೋದಿ ಸಮರ್ಥಕರಾಗಿರುವ ಬಾಬಾ ರಾಮ್ದೇವ್ ಚುನಾವಣೆಗೆ ಐದಾರು ತಿಂಗಳಿರುವಾಗ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಚುನಾವಣೆ ಆರಂಭವಾಗುವಷ್ಟರಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿದ್ದರು.
ಕಪ್ಪು ಹಣ ಹಿಂದೆ ತರುವುದು, ಗೋಹತ್ಯೆ ನಿಷೇಧ ಹಾಗೂ ಜನಸಂಖ್ಯಾ ನಿಯಂತ್ರಣದ ಬಗ್ಗೆ ಈಗಲೂ ದೊಡ್ಡ ಪ್ರತಿಪಾದಕರಾಗಿದ್ದಾರೆ.












Click it and Unblock the Notifications