Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ
ಹಾವೇರಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಲೇ ಇದೆ. ಇರಾನ್-ಇಸ್ರೇಲ್ ಮತ್ತು ಅಮೆರಿಕಾ ನಡುವಿನ ಯುದ್ಧ ಶಾಂತಿ ಸಂಧಾನಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಪ್ರಭಾವವು ತೈಲ ಪೂರೈಕೆ, ಜಾಗತಿಕ ಆರ್ಥಿಕತೆ ಹಾಗೂ ಇನ್ನಿತರ ರಂಗದ ಮೇಲೆ ಬೀರಿದೆ. ಇದೀಗ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮೇಲೂ ಉಂಟಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರತಿ ವರ್ಷ ಲಕ್ಷಾಂತರ ಚೀಲ ಒಣ ಮೆಣಸಿನಕಾಯಿಗಳು ಬರುತ್ತವೆ. ಇಲ್ಲಿಂದ ದೇಶ ವಿದೇಶಗಳಿಗೆ ರಫ್ತಾಗುತ್ತವೆ. ಅದರಂತೆ ಮಧ್ಯಪ್ರಾಚ್ಯದ ದುಬೈ, ಇರಾನ್, ಇಸ್ರೇಲ್ನಂತಹ ದೇಶಗಳಿಗೆ ರವಾನೆ ಆಗುತ್ತದೆ. ಯುದ್ಧದಿಂದಾಗಿ ಕಳೆದ ಎರಡು ವಾರದಿಂದ ರಫ್ತು ನಿಂತಿದೆ. ಅಲ್ಲಿಂದ ಬರಬೇಕಾದ ಬಾಕಿ ಕೋಟ್ಯಾಂತರ ರೂಪಾಯಿ ಹಣ ಸಹ ಬರುತ್ತಿಲ್ಲ. ಇನ್ನು ಬೇರೆ ದೇಶಗಳಿಗೆ ರಫ್ತು ಬಾಡಿಗೆ ಸಹ ಏರಿಕೆ ಆಗಿದೆ ಎಂದು ಬ್ಯಾಡಗಿ ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ವಿಶ್ವ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ಕುಂದಗೋಳ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ ಹಾಗೂ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಭಾಗಗಳಿಂದಲೂ ಇಲ್ಲಿಗೆ ಮೆಣಸಿನಕಾಯಿ ಬರುತ್ತದೆ. ಈ ವರ್ಷ ಒಣಮೆಣಸಿನಕಾಯಿ ಬೆಳೆಯು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಡಿಸೆಂಬರ್ನಿಂದ ಮಾರ್ಚ್ ಹೊತ್ತಿಗೆ ಮಾರುಕಟ್ಟೆಗೆ ಬರಬೇಕಿದ್ದ ಮೆಣಸಿನಕಾಯಿ ಪ್ರಮಾಣದಲ್ಲಿ ಭಾರೀ ಕುಸಿತವಾಗಿತ್ತು. ಇದರಿಂದ ಮಾರುಕಟ್ಟೆ ಬಣಗುಡುತ್ತಿತ್ತು. ಆ ಸಂಕಷ್ಟ ಬೆನ್ನಲ್ಲೆ ಮತ್ತೆ ಯುದ್ಧದ ಪರಿಣಾಮ ಬ್ಯಾಡಗಿ ಮಾರುಕಟ್ಟೆ ಮೇಲಾಗಿದ್ದು, ವಿದೇಶಿ ರಫ್ತು ವ್ಯಾಪಾರ ಅತಂತ್ರವಾಗಿದೆ.
ಮಧ್ಯಪ್ರಾಚ್ಯ ದೇಶಗಳಿಗೆ ಖಾರದ ಪುಡಿ, ಮೆಣಸಿನಕಾಯಿ ರವಾನೆ ಆಗುತ್ತದೆ. ಸುಮಾರು 15 ದಿನಗಳಿಂದ ರಫ್ತು ನಿಂತಿರುವ ಜೊತೆಗೆ ಅಲ್ಲಿಂದ ಬರಬೇಕಿದ್ದ ಸುಮಾರು 10 ಕೋಟಿ ರೂಪಾಯಿಯಷ್ಟು ಹಣ ಬಾರದೇ ಸ್ಥಗಿತವಾಗಿದೆ. ಮತ್ತೊಂದೆಡೆ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಮುಂದೆ ಹೇಗೆ ಎಂಬ ಚಿಂತೆ ವರ್ತಕರಲ್ಲಿ ಕಾಡುತ್ತಿದೆ.
ವಿದೇಶಿ ರಪ್ತು ಬಾಡಿಗೆ ದರ ಹೆಚ್ಚಳ
ಮಸಾಲೆ ಹಾಗೂ ಸೌಂದರ್ಯವರ್ಧಕ ತಯಾರಿಕೆಗೆ ಬ್ಯಾಡಗಿ ಮೆಣಸಿನಕಾಯಿ ಬಳಕೆ ಆಗುತ್ತದೆ. ರೀತಿಯ ಬಳಕೆ ಜೊತೆಗೆ ಆಹಾರ ಪದಾರ್ಥಕ್ಕಾಗಿಯು ವಿದೇಶಕ್ಕೆ ರಫ್ತಾಗುತ್ತದೆ. ಈ ಪೈಕಿ ಸಿಂಗಾಪುರ, ಥೈಲ್ಯಾಂಡ್, ಬಾಲಿ, ಮಲೇಶೀಯಾ, ಇಂಡೋನೇಶಿಯಾ, ಇರಾನ್ ಮತ್ತು ಇಸ್ರೇಲ್ ಸೇರಿ ಅನೇಕ ರಾಷ್ಟ್ರಗಳಿಗೆ ಮೆಣಸಿನಕಾಯಿ ರಫ್ತಾಗುತ್ತದೆ. ಯುದ್ಧ ಪೀಡಿತ ದೇಶಗಳಿಗೆ ಮೆಣಸಿನಕಾಯಿ ರವಾನೆ ನಿಂತಿದೆ. ಬೇರೆ ದೇಶಗಳಿಗೆ ಮೊದಲು 1800 ಡಾಲರ್ನಷ್ಟಿದೆ ಬಾಡಿಗೆ ಇದೀಗ 3600 ಡಾಲರ್ನಷ್ಟು ಏರಿಕೆ ಆಗಿದೆ ಎಂದು ವರ್ತಕರು ಕಳವಳ ವ್ಯಕ್ತಪಡಿಸಿದ್ದಾರೆ.
-
US-Iran Talks: ಪಾಕ್ ನೆಲದಲ್ಲಿ 21 ಗಂಟೆಗಳ ಸಂಧಾನ ಮಾತುಕತೆ ವಿಫಲ: ಹೆಚ್ಚಿದ ಯುದ್ಧ ಭೀತಿ- ಪ್ರಮುಖಾಂಶಗಳು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ












Click it and Unblock the Notifications