ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾದರೆ ಮುಂದೇನು?
ನವದೆಹಲಿ, ಡಿ.6: ತ್ರಿಕೋನ ಸ್ಪರ್ಧೆ ಮೂಲಕ ಡಿಸೆಂಬರ್ ಚಳಿಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮೈಬೆವರು ತರಿಸಿರುವ ಆಮ್ ಆದ್ಮಿ ಪಕ್ಷವು ದೆಹಲಿಯ ರಾಜಕೀಯ ಲೆಕ್ಕಾಚಾರಗಳನ್ನು ಏರುಪೇರು ಮಾಡುವ ಹೊಸ್ತಿಲಲ್ಲಿದೆ.
ದಿಲ್ಲಿಯ ಮತದಾರ ಪ್ರಭುವೇನೋ ಶೇ. 70ರ ಗಡಿ ದಾಟಿ ಮತ ಚಲಾಯಿಸಿದ್ದಾನೆ. ಇದರಿಂದ ಮತದಾರರು ಒಂದು ಪಕ್ಷಕ್ಕೇ ಬಹುಮತ ತಂದುಕೊಡುತ್ತಾರೋ ಅಥವಾ ಗೊಂದಲಕ್ಕೀಡಾಗಿ ಮತ ಹಂಚಿಕೆಯಾಗಿ ಅತಂತ್ರ ವಿಧಾನಸಭೆ ನಿರ್ಮಾಣಕ್ಕೆ ಕಾರಣವಾಗುತ್ತಾರಾ? ಎಂಬ ಆತಂಕ ಎದುರಾಗಿದೆ. ಸರಳ ಬಹುಮತಕ್ಕೆ 36 ಸ್ಥಾನ ಬೇಕಾಗುತ್ತದೆ.
ಒಂದು ವೇಳೆ ರಾಷ್ಟ್ರ ರಾಜಧಾನಿಯಲ್ಲೇ ಅತಂತ್ರ ಸ್ಥಿತಿ ನಿರ್ಮಾಣವಾದರೆ ಮುಂದೇನು ಎಂಬುದು ಸದ್ಯದ ಚರ್ಚಾ ವಿಷಯವಾಗಿದೆ. ಇಲ್ಲಿ ಹಲವು ಸಾಧ್ಯತೆ/ಆಯ್ಕೆಗಳು ಗೋಚರಿಸುತ್ತಿವೆ. ಆದರೆ ರಾತ್ರಿ 8 ಗಂಟೆಯಾದರೂ ಸರದಿಯಲ್ಲಿ ನಿಂತಿದ್ದು ಮತದಾನ ಮಾಡಿರುವ ದಿಲ್ಲಿ ಮಂದಿ, ಅತಂತ್ರ ಮತದಾನ ಮಾಡಿರಲಾರರು ಎಂಬ ಅನಿಸಿಕೆಯೂ ಬಲವಾಗಿದೆ.

ಬಹುಮತವಲ್ಲದ ಗರಿಷ್ಠ ಸ್ಥಾನ ಗಳಿಸಿದರೆ
ಯಾವುದೇ ಪಕ್ಷವೇ ಆದರೂ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಿದರೆ (ಅಂದರೆ ಬಹುಮತ ಗಳಿಸಿದರೆ ಅಂತಲ್ಲ; ಸರಳ ಬಹುಮತಕ್ಕಿಂತ ಕಡಿಮೆ ಗಳಿಸಿಯೂ ಗರಿಷ್ಠ ಸ್ಥಾನ ಗಳಿಸಿದರೆ) ಇತರೆ ಪಕ್ಷಗಳೊಂದಿಗೆ ಸೇರಿಕೊಂಡು ಸಮ್ಮಿಶ್ರ ಸರಕಾರ ರಚಿಸಬಹುದು. ಅದೂ ಸಾಧ್ಯವಾಗದಿದ್ದರೆ ರಾಷ್ಟ್ರ ರಾಜಧಾನಿಯು ರಾಷ್ಟ್ರಪತಿ ಆಳ್ವಿಕೆಗೆ ಒಳಪಡುತ್ತದೆ.

6 ತಿಂಗಳಲ್ಲೇ ಲೋಕಸಭಾ ಚುನಾವಣೆ ಜತೆಗೆ ಜತೆಗೆ
ದಿಲ್ಲಿಯಂತಹ ಆಯಕಟ್ಟಿನ ರಾಜ್ಯದ ವಿಧಾನಸಭೆಯನ್ನು ಹೆಚ್ಚು ಕಾಲ ಅತಂತ್ರವಾಗಿಡುವುದು ಸಮಂಜಸವಲ್ಲ. ಸಂವಿಧಾನದಲ್ಲಿಯೂ ಅದಕ್ಕೆ ಅವಕಾಶ ಇಲ್ಲ. ಹಾಗಾಗಿ ಅದು ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆಯಲ್ಲಿ ಉಳಿಯುವಂತಿಲ್ಲ. ಡಿಸೆಂಬರ್ 17ಕ್ಕೆ ಈಗಿನ ವಿಧಾನಸಭೆಯ ಕಾಲಾವಧಿ ಮುಗಿಯುತ್ತದೆ. ಅಲ್ಲಿಂದ ಮುಂದಕ್ಕೆ 6 ತಿಂಗಳಲ್ಲೇ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಅಂದರೆ ಆ ವೇಳೆಗೆ ಲೋಕಸಭಾ ಚುನಾವಣೆಗಳೂ ನಡೆಯಲಿದ್ದು, ಅದರೊಟ್ಟಿಗೆ ದಿಲ್ಲಿ ವಿಧಾನಸಭೆ ಚುನಾವಣೆಯನ್ನೂ ಮತ್ತೆ ನಡೆಸಬಹುದಾಗಿದೆ.

ಡಿ. 18 ರೊಳಗೆ single largest party ಸರಕಾರ ರಚನೆ
ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ಘೋಷಿಸಿದರೆ ಯಾವುದು single largest party ಆಗಿ ಹೊರಹೊಮ್ಮಿರುತ್ತದೋ ಅದನ್ನು ಸರಕಾರ ರಚಿಸುವಂತೆ ಆಹ್ವಾನಿಸಬಹುದು. ಇದು 1990ರಿಂದಲೂ ರೂಢಿಗತವಾದ ಪದ್ಧತಿಯಾಗಿದೆ. ಡಿಸೆಂಬರ್ 8 ರಂದು ಫಲಿತಾಂಶ ಹೊರಬಿದ್ದು ಡಿಸೆಂಬರ್ 18 ರೊಳಗಾಗಿ single largest party ಸರಕಾರ ರಚನೆ ಕಸರತ್ತನ್ನು ಮುಗಿಸಬೇಕಾಗುತ್ತದೆ. ಹಾಗಾದಲ್ಲಿ ಅಲ್ಲಿಯವರೆಗೂ ಹಾಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದ ಸಂಪುಟವೇ ಉಸ್ತುವಾರಿ ಸರಕಾರ ನಡೆಸಬೇಕಾಗುತ್ತದೆ.

ಸ್ಪಷ್ಟ ಬಹುಮತ ಗಳಿಸದ ಹೊರತು ಅಧಿಕಾರವಿಲ್ಲ
ಆದರೆ ಚುನಾವಣೆಗೂ ಮುನ್ನ ಘೋಷಿಸಿರುವಂತೆ ಯಾವುದೇ ಪಕ್ಷವೂ (Congress, BJP ಮತ್ತು AAP) ಸ್ಪಷ್ಟ ಬಹುಮತ ಗಳಿಸದ ಹೊರತು ಅಧಿಕಾರದ ಚುಕ್ಕಾಣಿ ಹಿಡಿಯುವುದಿಲ್ಲ ಎಂದು ಘೋಷಿಸಿಕೊಂಡಿವೆ. ಹಾಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾದರೆ 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯೇ ಗಟ್ಟಿ. (Government of National Capital Territory of Delhi Act, 1991)

ದೆಹಲಿ ಆಡಳಿತ ಶೋಚನೀಯ
ಈಗಾಗಲೇ ಚುನಾವಣೆ ನಿಮಿತ್ತ ಕಳೆದ ಐದಾರು ತಿಂಗಳಿಂದ ರಾಷ್ಟ್ರ ರಾಜಧಾನಿಯಂತಹ ದಿಲ್ಲಿಯಲ್ಲಿ ಸರಕಾರ ಪರಿಣಾಮಕಾರಿಯಾಗಿ ಆಳ್ವಿಕೆ ನಡೆಸಿಲ್ಲ. ಇನ್ನು, ಮುಂದಿನ 6 ತಿಂಗಳ ಕಾಲವೂ ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಗೆ ಒಳಪಟ್ಟರೆ ದೆಹಲಿ ಆಡಳಿತ ಶೋಚನೀಯವಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ರಾಷ್ಟ್ರಪತಿ ಆಡಳಿತ ಕಾಲದಲ್ಲಿ ದೈನಂದಿನ ಆಡಳಿತವಷ್ಟೇ ಸಾಗುತ್ತದೆ. ಯಾವುದೇ ಪ್ರಧಾನ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications