ಮಹಾರಾಷ್ಟ್ರ: 2 ಸಾವಿರ ವರ್ಷಗಳಷ್ಟು ಹಳೆಯ ರಹಸ್ಯ ಗುಹೆಗಳು ಪತ್ತೆ
ಮುಂಬೈ, ಮಾರ್ಚ್ 16: ಮಹಾರಾಷ್ಟ್ರದಲ್ಲಿ 2 ಸಾವಿರ ವರ್ಷಗಳಷ್ಟು ಪುರಾತನ ರಹಸ್ಯ ಗುಹೆಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಜಲಗಾಂವ್ನಲ್ಲಿ ಗುಹೆಗಳು ಪತ್ತೆಯಾಗಿವೆ, ಹೊರಭಾಗದಿಂದ ಗಮನಿಸಿದರೆ ಇಲ್ಲಿ ಗುಹೆಗಳು ಇರುವುದು ತಿಳಿಯುವುದಿಲ್ಲ. ಈ ಗುಹೆಗಳ ಬಗ್ಗೆ ಚೌಗಾಂವ್ ಗ್ರಾಮಸ್ಥರನ್ನು ವಿಚಾರಿಸಿದಾಗ ಆ ಗುಹೆಗಳನ್ನು ನೋಡಿರಲಿಲ್ಲ ಎನ್ನುವ ಉತ್ತರ ಬಂದಿದೆ.
ದಕ್ಷಿಣ ಭಾರತವನ್ನು ಬಹುಕಾಲ ಆಳಿದ ಶಾತವಾಹನ ರಾಜರ ಕಾಲದಲ್ಲಿ ಈ ರಹಸ್ಯ ಗುಹೆಗಳು ನಿರ್ಮಾಣವಾಗಿದ್ದಿರಬಹುದು ಎಂದು ಪುರಾತತ್ವ ಶಾಸ್ತ್ರಜ್ಞ ಭುಜಂಗ್ ರಾಮ್ರಾವ್ ತಿಳಿಸಿದ್ದಾರೆ.

ಈವರೆಗೆ ಎಲ್ಲೂ ಈ ಗುಹೆಗಳಿರುವ ದಾಖಲೆಗಳು ಲಭ್ಯವಾಗಿಲ್ಲ, ಗುಹೆಗಳ ಒಳ ಪ್ರವೇಶ ಮಾರ್ಗದಲ್ಲಿಯೇ ನೀರಿನ ಟ್ಯಾಂಕುಗಳು, ಕಲ್ಲಿನ ಕಂಬಗಳು ಕಾಣಿಸುತ್ತಿವೆ. ಈ ಗುಹೆಯಲ್ಲಿ ದೇವರುಗಳ ಚಿತ್ರವಿಲ್ಲ, ಕೆತ್ತನೆಯ ಚಿಹ್ನೆಯೂ ಕೂಡಾ ಇಲ್ಲ, ವಿಗ್ರಹಗಳೂ ಕೂಡ ಕಂಡುಬಂದಿಲ್ಲ.
ಭಿರಮ್ ಘಾಟ್ ರಸ್ತೆಯ ಪ್ರಾಚೀನ ಮಾರ್ಗದಲ್ಲಿ ಈ ಗುಹೆಗಳನ್ನು ಪತ್ತೆ ಹಚ್ಚಲಾಗಿದೆ. ಗುಹೆಗೆ ತಲುಪುವ ಮಾರ್ಗವೂ ಕೂಡ ಸರಿಯಾಗಿಲ್ಲ. ಚೌಗಾಂವ್ನಿಂದ 3 ಕಿ.ಮೀ ದೂರದವರೆಗೆ ಹಳೆಯ ಶಿವ ದೇವಾಲಯದ ತನಕ ವಾಹನದಲ್ಲಿ ತೆರಳಬಹುದು.
ಅಲ್ಲಿಂದ ಗುಹೆ ಇರುವ ಬೆಟ್ಟಕ್ಕೆ ಸುಮಾರು 2 ಕಿ.ಮೀಯಷ್ಟು ನಡೆಯಬೇಕು. ನಂತರ ಮೂರು ಕಿ.ಮೀ ನಡೆದಾದ ಶಾತವಾಹನ ಕಾಲದಲ್ಲಿ ಕಟ್ಟಿದ ಕೋಟೆಯ ಬಾಗಿಲು ಕಾಣಿಸುತ್ತದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications