ರಷ್ಯಾಗೆ ಭರ್ಜರಿ ಲಾಭ, ಇರಾನ್ ಯುದ್ಧ ವಿಚಾರದಲ್ಲಿ ಹೊಸ ಚರ್ಚೆ ಶುರು | Donald Trump
ಅಮೆರಿಕ ಕೊಡುತ್ತಿರುವ ಒಂದೊಂದು ಏಟಿಗೂ ಇರಾನ್ ನಲುಗಿ ಹೋಗುತ್ತಿದ್ದು, ಇಸ್ರೇಲ್ ಕೂಡ ಈ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಾ ಇರಾನ್ ಸೋಲು ಒಪ್ಪಿಕೊಳ್ಳುವಂತೆ ಆತಂಕ ಮೂಡಿಸುತ್ತಿದೆ. ಹೀಗೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ದಾಳಿ ನಡೆಸುತ್ತಿರುವ ಹಿನ್ನೆಲೆ ಮಧ್ಯಪ್ರಾಚ್ಯ ಪರಿಸ್ಥಿತಿ ಕೂಡ ಅತ್ಯಂತ ಸೂಕ್ಷ್ಮ ಹಂತಕ್ಕೆ ತಲುಪಿಬಿಟ್ಟಿದೆ. ಹೀಗಿದ್ದಾಗ ಯುದ್ಧ ನಿಲ್ಲಿಸಲು ಏನಾದರೂ ಒಂದು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೂಡ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ರಷ್ಯಾಗೆ ಭರ್ಜರಿ ಲಾಭ ಆಗುತ್ತಿದೆ ಅಂತಾ ಇರಾನ್ ಯುದ್ಧ ವಿಚಾರದಲ್ಲಿ ಹೊಸ ಚರ್ಚೆ ಶುರುವಾಗಿದೆ.
ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಸೃಷ್ಟಿ ಆಗಿದ್ದು, ಇರಾನ್ ವಿರುದ್ಧ ಯುದ್ಧ ಶುರುವಾದ ನಂತರ ಭಾರಿ ದೊಡ್ಡ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಏರ್ಪಟ್ಟಿದೆ. ಹೀಗಿದ್ದಾಗ ಅಮೆರಿಕ ನಾಯಕರು ಈಗ ಹೊಸ ತಂತ್ರ ಪ್ರಯೋಗ ಮಾಡಿದ್ದು, ರಷ್ಯಾ ಮೂಲಕ ತೈಲ ಖರೀದಿಗೆ ಇದ್ದ ಅಡೆತಡೆ ತೆಗೆದಿದ್ದಾರೆ. ಆ ಮೂಲಕ ಖುದ್ದು ಅಮೆರಿಕದ ಅಧಿಕಾರಿಗಳು ರಷ್ಯಾ ಮೂಲಕ ತೈಲ ಖರೀದಿ ಮಾಡಲು ಹೇಳುತ್ತಾ ಇದ್ದಾರೆ. ಅಮೆರಿಕದ ಮಿತ್ರ ದೇಶಗಳ ಮೇಲೆ ರಷ್ಯಾ ತೈಲ ಖರೀದಿಗೆ ನಿರ್ಬಂಧ ಹೇರಲಾಗಿತ್ತು, ಹೀಗೆ ಉಕ್ರೇನ್ ಯುದ್ಧದ ಕಾರಣ ನೀಡಿ ರಷ್ಯಾ ವಿರುದ್ಧ ಟ್ರಂಪ್ ಅವರ ಆಡಳಿತ ದೊಡ್ಡ ಅಸ್ತ್ರ ಪ್ರಯೋಗ ಮಾಡಿತ್ತು.

ಉಕ್ರೇನ್ ವಿರುದ್ಧ ಯುದ್ಧಕ್ಕೆ ನೆರವು?
ಆದರೆ ಈಗ ಇರಾನ್ ನಾಶ ಮಾಡಲು ರಷ್ಯಾ ತೈಲಕ್ಕೆ ಒಪ್ಪಿಗೆ ನೀಡಲಾಗಿದೆ, ಇದರಿಂದಾಗಿಯೇ ರಷ್ಯಾಗೆ ಈ ಯುದ್ಧದಿಂದ ಲಾಭ ಆಗುತ್ತಿದೆ ಎಂಬ ಆರೋಪ ಮಾಡಲಾಗುತ್ತಿದೆ. ಅಲ್ಲದೆ ಆ ಮೂಲಕ ಪರೋಕ್ಷ ಮತ್ತೊಂದು ತಿಕ್ಕಾಟ ಶುರುವಾಗಿ ಉಕ್ರೇನ್ ವಿರುದ್ಧದ ತಿಕ್ಕಾಟಕ್ಕೆ ಬೆಂಕಿ ಹೊತ್ತಿಸಲಾಗುತ್ತಿದೆ ಎನ್ನುವ ಆರೋಪ ಮಾಡಲಾಗುತ್ತಿದೆ. ನೋಡ ನೋಡುತ್ತಲೇ ರಷ್ಯಾ ತನ್ನ ಬತ್ತಳಿಕೆಗೆ ಹೊಸ ಹೊಸ ಅಸ್ತ್ರಗಳ ಸೇರ್ಪಡೆ ಮಾಡಲು ಸಾಧ್ಯವಾಗಲಿದ್ದು, ಒಂದು ಯುದ್ಧವನ್ನ ತಪ್ಪಿಸಿ ಮತ್ತೊಂದು ಯುದ್ಧಕ್ಕೆ ಬೆಂಬಲ ನೀಡ್ತಾ ಅಮೆರಿಕ? ಎಂಬ ಅನುಮಾನ ಮೂಡಿದೆ.
-
ಅಮೆರಿಕ ಮಿತ್ರ ದೇಶಗಳ ನೆರವು ಕೇಳಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆ | Donald Trump -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು?












Click it and Unblock the Notifications