ಪತ್ನಿ ಶ್ರೀದೇವಿ ಬಗ್ಗೆ ಭಾವುಕರಾಗಿ ಪತ್ರ ಬರೆದ ಬೋನಿಕಪೂರ್
ಮುಂಬೈ, ಮಾರ್ಚ್ 01: "ಈ ಜಗತ್ತಿಗೆ ಶ್ರೀದೇವಿ ಚಾಂದಿನಿ ಇರಬಹುದು. ಆದರೆ ನನ್ನ ಪ್ರೀತಿ, ನನ್ನ ಸಂಗಾತಿ, ನನ್ನ ಕುಟುಂಬಕ್ಕೆ ಆಕೆ ರಕ್ಷಾ ರೇಖೆ" ಎಂದು ಭಾವುಕರಾಗಿ ಪತ್ರ ಬರೆದಿದ್ದಾರೆ ಶ್ರೀದೇವಿ ಅವರ ಪತಿ ಬೋನಿ ಕಪೂರ್.
ಶ್ರೀದೇವಿ ಪಂಚಭೂತಗಳಲ್ಲಿ ಲೀನರಾಗಿ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಚಾಂದಿನಿಯಾಗಿ ಉಳಿದಿದ್ದಾರೆ. ಫೆಬ್ರವರಿ 24 ರಂದು ದುಬೈನ ಹೊಟೇಲ್ ವೊಂದರ ಬಾತ್ ಟಬ್ಬಿನಲ್ಲಿ ಮುಳುಗಿ ಇಹಲೋಕ ತ್ಯಜಿಸಿದ ಚಾಂದಿನಿ ಶ್ರೀದೇವಿ ಇನ್ನು ನೆನಪು ಮಾತ್ರವೆಂದರೆ ನಂಬುವುದು ಕಷ್ಟ. ಭಾರತೀಯ ಚಿತ್ರರಂಗದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ಎಂಬ ಖ್ಯಾತಿಯ ಶ್ರೀದೇವಿ ಅವರ ಅಂತಿಮ ಸಂಸ್ಕಾರ ನಿನ್ನೆ(ಫೆ.28) ಮುಂಬೈಯಲ್ಲಿ ನಡೆದಿದೆ.
ಇದುವರೆಗೂ ಪತ್ನಿಯ ನಿಧನದ ಕುರಿತು ಯಾವುದೇ ಹೇಳಿಕೆ ನೀಡಿರದ ಬೋನಿಕಪೂರ್, ಶ್ರೀದೇವಿಯವರ ಟ್ವಿಟ್ಟರ್ ಖಾತೆಯ ಮೂಲಕ ಪತ್ರವೊಂದನ್ನು ಬರೆದಿದ್ದಾರೆ. ತಮ್ಮ ಬದುಕಿನಲ್ಲಿ ಶ್ರೀದೇವಿಯವರ ಪಾತ್ರವೇನು ಎಂಬುದನ್ನು ಭಾವುಕರಾಗಿ ವಿವರಿಸಿದ್ದಾರೆ. ಆ ಪತ್ರದ ಸಾರಾಂಶ ಇಲ್ಲಿದೆ....
— SRIDEVI BONEY KAPOOR (@SrideviBKapoor) February 28, 2018 |
ಲೋಕಕ್ಕೆ ಆಕೆ ಚಾಂದಿನಿ, ನನಗೆ ಪ್ರೀತಿ!
"ಈ ಲೋಕಕ್ಕೆ ಶ್ರೀದೇವಿ ಎಂದರೆ ಚಾಂದಿನಿ, ಅತ್ಯುತ್ತಮ ನಟಿ, ಅವರ ಶ್ರೀದೇವಿ... ಆದರೆ ನನಗೆ ಆಕೆ ಎಂದರೆ ಪ್ರೀತಿ, ನನ್ನ ಸಂಗಾತಿ, ನನ್ನ ಮಕ್ಕಳಿಗೆ ತಾಯಿ, ನನ್ನ ಸ್ನೇಹಿತೆ. ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಆಕೆಯೇ ಎಲ್ಲವೂ ಆಗಿದ್ದಳು! ಅವರ ಬದುಕೂ ಅವಳೇ ಆಗಿತ್ತು. ನಮ್ಮ ಸಂಸಾರದ ಶ್ರೀರಕ್ಷೆಯಾಗಿದ್ದಳು ಅವಳು"

ನಮ್ಮೊಂದಿಗೆ ನಿಂತ ಎಲ್ಲರಿಗೂ ತುಂಬು ಕೃತಜ್ಞತೆಗಳು
"ಈ ಸಂಕಷ್ಟದ ಸಮಯದಲ್ಲಿ ನಮ್ಮೊಂದಿಗೆ ನಿಂತ ಎಲ್ಲರಿಗೂ ನಮ್ಮ ತುಂಬು ಕೃತಜ್ಞತೆಗಳು. ಅರ್ಜುನ್, ಅಂಶುಲಾ, ಖುಷಿ, ಜಾನ್ವಿ ಎಲ್ಲರ ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ನೀವು ನನ್ನ ಬದುಕಿನ ಆಧಾರ ಸ್ತಂಬಗಳು. ನಾವೆಲ್ಲರೂ ಒಂದಾಗಿ ಈ ಕೆಟ್ಟ ಘಳಿಗೆಯನ್ನು ಎದುರಿಸಲು ಪ್ರಯತ್ನಿಸೋಣ. ಆಕೆಯ ಅಗಲಿಕೆ ನಮ್ಮ ಕುಟುಂಬಕ್ಕೆ ಭರಿಸಲಾಗದ ನಷ್ಟ"
— Anil Kapoor (@AnilKapoor) February 28, 2018 |
ಕಪೂರ್ ಮತ್ತು ಅಯ್ಯಪ್ಪನ್ ಕುಟುಂಬದ ಪತ್ರ
ಶ್ರೀದೇವಿ ಅವರ ಅಗಲಿಕೆಯ ಸಮಯದಲ್ಲಿ ಕಪೂರ್ ಮತ್ತು ಅಯ್ಯಪ್ಪನ್ ಕುಟುಂಬದೊಡನೆ ನಿಂತ ಎಲ್ಲರಿಗೂ ಕಪೂರ್ ಮತ್ತು ಅಯ್ಯಪ್ಪನ್ ಕುಟುಂಬ ಕೃತಜ್ಞತೆ ಅರ್ಪಿಸಿದೆ. ಕುಟುಂಬದ ಪರವಾಗಿ ನಟ ಅನಿಲ್ ಕಪೂರ್ ಅವರು ತಮ್ಮ ಟ್ವಿಟ್ಟರ್ ಖಅತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

ಆಕೆಯೊಂದು ದಂತಕತೆ
ಶ್ರೀದೇವಿ ಅವರೊಂದು ದಂತಕತೆ. ಆ ಸುಂದರ ಆತ್ಮ ನಮ್ಮನ್ನು ಬಹಳ ಬೇಗ ತೊರೆದು ಹೋಗಿದೆ. ಈ ಸಮಯದಲ್ಲಿ ನಮ್ಮೊಂದಿಗೆ ನಿಂತ ಕೋಟ್ಯಂತರ ಅಭಿಮಾನಿಗಳಿಗೆ, ಸ್ನೇಹಿತರು, ಹಿತೈಷಿ ಸಂಬಂಧಿಗಳಿಗೆ ನಾವು ಸದಾ ಋಣಿ ಎಂದು ಈ ಪತ್ರದಲ್ಲಿ ಬರೆಯಲಾಗಿದೆ.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Sleeper Vande Bharat; ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ಗೆ ಕೇಂದ್ರ ಅಸ್ತು, ಕರ್ನಾಟಕಕ್ಕೆ ಏನೆಲ್ಲ ಲಾಭ? -
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
Monalisa: ಕುಂಭಮೇಳ ವೈರಲ್ ಸುಂದರಿ ಮೊನಾಲಿಸಾ ದಂಪತಿಗೆ ಬಿಗ್ ರಿಲೀಫ್: ಬಂಧನಕ್ಕೆ ತಡೆ ನೀಡಿದ ಕೇರಳ ಹೈಕೋರ್ಟ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Asha Bhosle: ಆಶಾ ಭೋಸ್ಲೆಗೆ 16ನೇ ವರ್ಷದಲ್ಲೇ ಮದುವೆ, 2ನೇ ಮದುವೆಯಲ್ಲೂ ಸಂಕಷ್ಟ - ಕಾರಣವೇನು -
ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ












Click it and Unblock the Notifications