'ಆರೋಗ್ಯಯುತ ಕರ್ನಾಟಕದ ನಿರ್ಮಾಣ ನಮ್ಮ ಗುರಿ' : ಸಿದ್ದರಾಮಯ್ಯ
ಆರೋಗ್ಯಯುತ ಕರ್ನಾಟಕದ ನಿರ್ಮಾಣ ಸರ್ಕಾರದ ಉದ್ದೇಶವಾಗಿದೆ. ಟೆಲಿಮೆಡಿಸನ್ ಸೇವೆಗಳ ಮೂಲಕ ನಾಡಿನ ಮೂಲೆಯ ಹಾಡಿಗಳ ರೋಗಿಗಳಿಗೆ ತಲುಪಿಸಿದ್ದೇವೆ.
ಎಲ್ಲ ಜನತೆಗೂ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ಶ್ರಮಿಸಿದ್ದು, ಕಳೆದ 5 ವರ್ಷಗಳಿಂದೀಚೆ ನವಜಾತ ಶಿಶುಗಳ ಮರಣ ಪ್ರಮಾಣ ಮತ್ತು ಬಾಣಂತಿಯರ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ನವ ಕರ್ನಾಟಕ ನಿರ್ಮಾಣದ ಕನಸು ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಾರ್ವತ್ರಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉಚಿತ ಆರೋಗ್ಯ ಸೇವೆ, ರಾಜ್ಯದ ಬಹುತೇಕ ಕಡೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆ, ಆರೋಗ್ಯ ಭಾಗ್ಯ ಯೋಜನೆ , ಸುವರ್ಣ ಆರೋಗ್ಯ ಸುರಕ್ಷಾ ಮೂಲಕ ಗುರಿಯನ್ನು ಸಾಧಿಸಲಾಗಿದೆ.
ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಯಶಸ್ಸಿನ ಬೆನ್ನಲ್ಲೆ ಇದೀಗ ರಾಜ್ಯ ಸರ್ಕಾರವು ಸಾರಿಗೆ ಇಲಾಖೆಯ ಅಡಿಯಲ್ಲಿ ಇಂದಿರಾ ಹೆಸರಿನಲ್ಲಿ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತುಕೊಂಡು, ಬಿಎಂಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಇಂದಿರಾ ಕ್ಲಿನಿಕ್ ಯೋಜನೆಯನ್ನು ಜಾರಿಗೆ ತರಲಾಯಿತು.

ಸಾರ್ವತ್ರಿಕ ಆರೋಗ್ಯ ಸೇವೆಯಲ್ಲಿ ನಂ.1
ಆರೋಗ್ಯಯುತ ಕರ್ನಾಟಕದ ನಿರ್ಮಾಣ ಸರ್ಕಾರದ ಉದ್ದೇಶವಾಗಿದೆ. ಟೆಲಿಮೆಡಿಸನ್ ಸೇವೆಗಳ ಮೂಲಕ ನಾಡಿನ ಮೂಲೆಯ ಹಾಡಿಗಳ ರೋಗಿಗಳಿಗೆ ತಲುಪಿಸಿದ್ದೇವೆ. ಎಲ್ಲ ಜನತೆಗೂ ಗುಣಮಟ್ಟದ ಆರೋಗ್ಯ ಸೌಲಭ್ಯ ಒದಗಿಸಲು ಸರ್ಕಾರ ಶ್ರಮಿಸಿದ್ದು, ಕಳೆದ 5 ವರ್ಷಗಳಿಂದೀಚೆ ನವಜಾತ ಶಿಶುಗಳ ಮರಣ ಪ್ರಮಾಣ ಮತ್ತು ಬಾಣಂತಿಯರ ಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಸಾರ್ವತ್ರಿಕ ಆರೋಗ್ಯ ಯೋಜನೆ
* ಕರ್ನಾಟಕದ 1.40 ಕೋಟಿ ಜನತೆಗೆ ಸಾರ್ವತ್ರಿಕ ಆರೋಗ್ಯ ಯೋಜನೆ
* 1.05 ಕೋಟಿ ಆದ್ಯತಾ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ
* ಗ್ರಾಮೀಣ ಮತ್ತು ನಗರ ಪ್ರದೇಶದ ಬಡತನ ರೇಖೆಯ ಮೇಲಿರುವ
ಕುಂಟುಂಬಗಳು ಅನುಕ್ರಮವಾಗಿ ರೂ.300 ರೂ.700 ನೀಡಿ ಯೋಜನೆಯ ಫಲಾನುಭವಿಗಳಾಗಬಹುದು

300 ವೈದ್ಯಕೀಯ ಆರೋಗ್ಯ ಸೌಲಭ್ಯಗಳು ಲಭ್ಯ
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ
* ತೃತೀಯ ಆರೋಗ್ಯ ಸೇವೆಗಳು
* ರೂ.1.5 ಲಕ್ಷ ಮೀರದ ಉಚಿತ ಆರೋಗ್ಯ ಸೇವೆ
* 300 ವೈದ್ಯಕೀಯ ಆರೋಗ್ಯ ಸೌಲಭ್ಯಗಳು ಲಭ್ಯ

ರಾಜ್ಯದ 176 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ
* ರಾಜ್ಯದ 176 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ
* 31,561 ರೋಗಿಗಳು ಯೋಜನೆಯ ಫಲಾನುಭವಿಗಳು

ಆರೋಗ್ಯ ಸೇವೆಯಲ್ಲಿ ದರ ಕಡಿತ
* ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಆರೋಗ್ಯ ಸೇವೆಯಲ್ಲಿ ದರ ಕಡಿತ
* ವಾರ್ಷಿಕವಾಗಿ 1.5ಲಕ್ಷ ಮೀರದ ಉಚಿತ ಆರೋಗ್ಯ ಸೇವೆ
* 447 ವಿವಿಧ ಶಸ್ತ್ರ ಚಿಕಿತ್ಸೆ ಒಳಗೊಂಡಿದೆ
* 3.5ಕೋಟಿ ಫಲಾನುಭವಿಗಳು












Click it and Unblock the Notifications