Get Updates
Get notified of breaking news, exclusive insights, and must-see stories!

Suicide Cases: ಬೆಂಗಳೂರಿನಲ್ಲಿ ಈ ಕಾರಣಕ್ಕೆ ಆತ್ಮಹತ್ಯೆ ಹೆಚ್ಚಳ: ನಿಮ್ಹಾನ್ಸ್‌ ಟೆಲಿಮನಸ್‌ನಿಂದ 65 ಜನರ ರಕ್ಷಣೆ

Suicide Cases Rise in Bengaluru: ಬೆಂಗಳೂರಿನ ನಿಮ್ಹಾನ್ಸ್ (ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ)ನಿಂದ 65ಕ್ಕೂ ಹೆಚ್ಚು ಜನರ ಜೀವ ಉಳಿಸಲಾಗಿದೆ. ಪೊಲೀಸ್ ತುರ್ತು ಸ್ಪಂದನ ಸಹಾಯ ವ್ಯವಸ್ಥೆ 112 ಯೊಂದಿಗೆ ನಿಮ್ಹಾನ್ಸ್‌ನ ಟೆಲಿಮನಸ್ ಸಂಯೋಜಿಸಲಾಗಿದ್ದು, ಮಹತ್ವದ ಬೆಳವಣಿಗೆ ಕಂಡುಬಂದಿದೆ. ಇನ್ನು ಕಳೆದೊಂದು ತಿಂಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಮುಂದಾದ, ಮಾನಸಿಕ ಕಿರುಕುಳದಿಂದ ತೊಂದರೆಗೊಳಗಾಗಿದ್ದ 65ಕ್ಕೂ ಹೆಚ್ಚು ಜನರ ಮನಃ ಪರಿರ್ತನೆ ಹಾಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಆತ್ಮಹತ್ಯೆಯನ್ನು ತಡೆಯಲಾಗಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಿಂದ ಫೆಬ್ರವರಿ ತಿಂಗಳಲ್ಲಿ ಉಚಿತ ಸಹಾಯವಾಣಿ ಸಂಖ್ಯೆಗಳಾದ ಟೆಲಿಮನಸ್ (14416) ಹಾಗೂ ಪೊಲೀಸರ ತುರ್ತು ಸ್ಪಂದನ ಕರೆ (112) ಜತೆಗೆ ಸಂಯೋಜಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ 300ಕ್ಕೂ ಹೆಚ್ಚು ಕರೆಗಳನ್ನು ಟೆಲಿಮನಸ್ ಸಹಾಯವಾಣಿಯ ಸಿಬ್ಬಂದಿ ಸ್ವೀಕರಿಸಿದ್ದಾರೆ. ನಿಮ್ಹಾನ್ಸ್‌ ನಿರ್ವಹಿಸುತ್ತಿರುವ ಟೆಲಿಮನಸ್‌ಗೆ ಐಐಟಿ-ಬಿ ತಾಂತ್ರಿಕ ನೆರವು ನೀಡುತ್ತಿದೆ.

Suicide Cases

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಆತ್ಮಹತ್ಯೆ ಪ್ರಕರಣ: ಗೃಹ ಸಚಿವಾಲಯದ

ಗೃಹ ಸಚಿವಾಲಯದ ಪ್ರಕಾರ 2022ರಿಂದ 2025ರ ನವೆಂಬರ್ ನಡುವೆ ಬೆಂಗಳೂರಿನಲ್ಲಿ 9,450 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂದರೆ, ರಾಜ್ಯ ರಾಜಧಾನಿಯಲ್ಲಿ ಪ್ರತಿದಿನ ಸರಾಸರಿ ಏಳು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 2022ರಲ್ಲಿ ಬೆಂಗಳೂರು 2,313, 2013ರಲ್ಲಿ 2,170 ಹಾಗೂ 2024ರಲ್ಲಿ 2,403 ಹಾಗೂ ಕಳೆದ ವರ್ಷ 2,364ಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ - ವರ್ಷದ ವಿವರ

ವರ್ಷ ಆತ್ಮಹತ್ಯೆ ಸಂಖ್ಯೆ
2022 2,313
2023 2,170
2024 2,403
2025 (ನವೆಂಬರ್ ವರೆಗೆ) 2,364+

ವಯೋಮಾನ ಪ್ರಕಾರ ಶೇಕಡಾವಾರು

ವಯಸ್ಸು ಶೇಕಡಾವಾರು (%)
0-12 1.4%
13-17 7.5%
18-45 74.2%
46-64 13.3%
65+ 3.6%

ಆತ್ಮಹತ್ಯೆ ವಿಧಾನಗಳು

ವಿಧಾನ ಜನರು
ನೇಣು ಬಿಗಿದುಕೊಂಡು 8,148
ವಿಷ ಸೇವನೆ 740
ಎತ್ತರದ ಸ್ಥಳಗಳಿಂದ ಹಾರಿ 204

ಬೆಂಗಳೂರಿನ 35 ವರ್ಷದ ವ್ಯಕ್ತಿಯ ಮನವೊಲಿಸಿದ ಸಿಬ್ಬಂದಿ

ಬಾಟಲಿ ಹಿಡಿದುಕೊಂಡು ಇನ್ನೇನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ 35 ವರ್ಷದ ಯುವಕನನ್ನು ಸಹ ನಿಮ್ಹಾನ್ಸ್‌ನ ಟೆಲಿಮನಸ್ ಮೂಲಕ ರಕ್ಷಿಸಲಾಗಿದೆ. ಟೆಲಿಮನಸ್‌ಗೆ ಕರೆ ಮಾಡಿ ಬೇಸರ ತೋಡಿಕೊಂಡು ಯುವಕ ನಂತರ ಸಿಬ್ಬಂದಿಗೆ ಕರೆ ಮಾಡದೆ ದೂರವಾಗಿದ್ದ, ಗಂಭೀರತೆ ಅರಿತ ಟೆಲಿಮನಸ್ ತಂಡ ಪೊಲೀಸ್ ತುರ್ತು ಸ್ಪಂದನ ವ್ಯವಸ್ಥೆ ನೆರವಿನಿಂದ ಆತನನ್ನು ಸಂಪರ್ಕಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆದಿದೆ. ಇನ್ನೊಂದು ಪ್ರಕರಣದಲ್ಲಿ ಮನೆಯಲ್ಲಿ ಕುಟುಂಬಸ್ಥರ ಕಿರುಕುಳದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಟೆಲಿಮನಸ್ ತಂಡದ ಮಾನಸಿಕ ಆರೋಗ್ಯ ವೃತ್ತಿಪರರು ನೆರವಾಗಿದ್ದಾರೆ.

ಇನ್ನು ಸಮಸ್ಯೆ ಪರಿಹರಿಸುವ ಕೌಶಲದ ಕೊರತೆ ಉಂಟಾಗುವುದನ್ನು ಮಾನಸಿಕ - ಸಾಮಾಜಿಕ ಸಮಸ್ಯೆ ಎನ್ನಲಾಗುತ್ತದೆ. ಈ ರೀತಿ ಸಮಸ್ಯೆ ಹೆಚ್ಚಾದ ಸಂದರ್ಭದಲ್ಲಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಕ್ಕೆ ಜನ ಬರುತ್ತಾರೆ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಶ್ ಬಿ.ಎನ್ ಅವರು ಮಾಹಿತಿ ನೀಡುತ್ತಾರೆ.

ಇನ್ನು ಟೆಲಿಮನಸ್‌ಗೆ ಕಳೆದ 12 ತಿಂಗಳಲ್ಲಿ 1,14,472 ಕರೆಗಳು ಬಂದಿವೆ. ಪೊಲೀಸ್ ಸಹಾಯವಾಣಿ 112ಕ್ಕೆ ಕಳೆದ ವರ್ಷ 5,22,742 ಕರೆಗಳು ಬಂದಿವೆ. ಈಗ ಟೆಲಿಮನಸ್-112 ಲಿಂಕ್ ಮಾಡಿರುವುದರಿಂದ ಟೆಲಿಮನಸ್‌ಗೆ ಹೆಚ್ಚು ಜನ ಕರೆ ಮಾಡುತ್ತಿದ್ದಾರೆ. 18ರಿಂದ 45 ವರ್ಷದವರಿಂದ ಕರೆಗಳು ಬರುತ್ತಿವೆ. ನಿದ್ದೆ ಕೊರತೆ, ದುಃಖ, ಭಯ, ಮದುವೆಗೆ ಸಂಬಂಧಿಸಿದ ಸಮಸ್ಯೆ, ಆರ್ಥಿಕ ತೊಂದರೆಗಳು, ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯಾ ಆಲೋಚನೆಗಳಿಂದ ಕರೆ ಮಾಡುವವರು ಇದ್ದಾರೆ ಎನ್ನುತ್ತಾರೆ ಐಐಟಿ-ಬಿ ಟೆಲಿಮನನ್ ಇ-ಹೆಲ್ತ್‌ನ ಯೋಜನಾ ವ್ಯವಸ್ಥಾಪಕಿ ಅರ್ಚನಾ ಕಾರ್ತಿಕ್.

ಆತ್ಮಹತ್ಯೆಯ ಅಲೋಚನೆ ಬಂದರೆ ಈ ರೀತಿ ಮಾಡಿ

ಇನ್ನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ಬಂದರೆ ಏನು ಮಾಡಬೇಕು ಎನ್ನುವ ಬಗ್ಗೆ ನಿಮ್ಹಾನ್ಸ್‌ನ ಟೆಲಿಮನಸ್ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ.ಕಿರಣ್ ಆರ್ ಅವರು ಕೆಲವೊಂದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಯಾರಿಗಾದರೂ ಆತ್ಮಹತ್ಮೆ ಮಾಡಿಕೊಳ್ಳಬೇಕು ಎನ್ನುವ ಕೆಟ್ಟ ಆಲೋಚನೆ ಬಂದರೆ ಕೂಡಲೇ ಟೆಲಿಮನಸ್ ಸಹಾಯವಾಣಿಗೆ ಕರೆ ಮಾಡಿ ವೈದ್ಯರು, ತಜ್ಞರ ಸಹಾಯ ಮಾಡಲಿದ್ದಾರೆ. ಸಂಪರ್ಕದಿಂದ ದೂರವಾಗದಿರಿ ಎನ್ನುವುದು ಅವರ ಸಲಹೆ. ಕರೆ ಮಾಡಿದವರನ್ನು ಗುರುತಿಸುವುದು, ತುರ್ತಾಗಿ ಆತ್ಮಹತ್ಯೆ ತಡೆಯುವಂತಹ ಗಂಭೀರ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ ಎನ್ನುತ್ತಾರೆ ಡಾ. ಕಿರಣ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+