ಬೆಂಗಳೂರು ಟೆಕ್‌ ಸಮಿಟ್‌ ಮುಖ್ಯ ಅತಿಥಿಯಾಗಿ ಕಮಲಾ ಹ್ಯಾರೀಸ್!

ಬೆಂಗಳೂರು,

ಜು.
05:
"ರಾಜ್ಯ
ಸರ್ಕಾರ
ಆಯೋಜಿಸುವ
ಸಾಲಿನ
ಬೆಂಗಳೂರು
ಟೆಕ್‌
ಸಮಿಟ್
ಬರುವ
ನವೆಂಬರ್‌
17,
18
ಹಾಗೂ
19ರಂದು
ನಡೆಯಲಿದೆ"
ಎಂದು
ಐಟಿ,
ಬಿಟಿ
ಮತ್ತು
ವಿಜ್ಞಾನ
ತಂತ್ರಜ್ಞಾನ
ಖಾತೆ
ಸಚಿವರೂ
ಆಗಿರುವ
ಡಿಸಿಎಂ
ಡಾ.
ಸಿ.ಎನ್.‌
ಅಶ್ವಥ್
ನಾರಾಯಣ
ಹೇಳಿದ್ದಾರೆ.
ಟೆಕ್‌
ಸಮಿಟ್‌ಗೆ
ಸಂಬಂಧಿಸಿದಂತೆ
ಅಧಿಕಾರಿಗಳೊಂದಿಗೆ
ಪೂರ್ವಭಾವಿ
ಸಭೆ
ನಡೆಸಿದ
ಬಳಿಕ
ಮಾಹಿತಿ
ನೀಡಿದ್ದಾರೆ.
"ಕಳೆದ
ವರ್ಷ
ಸಮಿಟ್‌ಗೆ
ʼನೆಕ್ಸ್ಟ್‌
ಇಸ್‌
ನೌʼ
(Next
is
Now)
ಎಂಬ
ಟ್ಯಾಗ್‌ಲೈನ್‌
ಇತ್ತು.
ವರ್ಷ
ʼಡ್ರೈವ್‌
ಇನ್‌
ದಿ
ನೆಕ್ಸ್ಟ್‌ʼ
(Driving
the
Next)
ಎನ್ನುವ
ಟ್ಯಾಗ್‌ಲೈನ್‌
ನಿಗದಿ
ಮಾಡಲಾಗಿದೆ"
ಎಂದು
ಡಿಸಿಎಂ
ಡಾ.
ಅಶ್ವಥ್
ನಾರಾಯಣ
ವಿವರಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ಕೊರೊನಾ

ವೈರಸ್
ಸಾಂಕ್ರಾಮಿಕದ
ಕಾರಣದಿಂದಾಗಿ
ಸಲವೂ
ಸಮಾವೇಶವನ್ನು
ವರ್ಚುಯಲ್
ಹಾಗೂ
ಭೌತಿಕ
ವೇದಿಕೆ
ಒಳಗೊಂಡಂತೆ
ಹೈಬ್ರಿಡ್‌
ಪದ್ಧತಿಯಲ್ಲಿ
ಆಯೋಜಿಸಲು
ತೀರ್ಮಾನ
ಮಾಡಲಾಗಿದ್ದು,
ಉದ್ಘಾಟನೆಗೆ
ಪ್ರಧಾನಿ
ನರೇಂದ್ರ
ಮೋದಿ
ಅವರನ್ನು
ಆಹ್ವಾನಿಸಲು
ತೀರ್ಮಾನ
ಮಾಡಲಾಗಿದೆ.
"ಈ
ಟೆಕ್‌
ಶೃಂಗಸಭೆಯನ್ನು
ಪ್ರಧಾನಿ
ನರೇಂದ್ರ
ಮೋದಿ
ಅವರಿಂದ
ಉದ್ಘಾಟಿಸುವ
ಉದ್ದೇಶ
ಇದ್ದು
ಅವರನ್ನು
ಆಹ್ವಾನಿಸಲಾಗುವುದು.
ಅದೇ
ರೀತಿ
ಅಮೆರಿಕದ
ಉಪಾಧ್ಯಕ್ಷೆ
ಕಮಲಾ
ಹ್ಯಾರೀಸ್‌
ಅವರನ್ನು
ಸಮಿಟ್‌ಗೆ
ಆಹ್ವಾನಿಸಲು
ನಿರ್ಧರಿಸಲಾಗಿದೆ.
ಜತೆಗೆ,
ತಂತ್ರಜ್ಞಾನ
ಮತ್ತು
ಹೆಲ್ತ್‌ಕೇರ್‌
ಕ್ಷೇತ್ರದ
ಪ್ರಮುಖ
ಕಂಪನಿಗಳ
ಮುಖ್ಯಸ್ಥರನ್ನು
ಕರೆಯುವ
ಉದ್ದೇಶ
ಇದೆ"
ಎಂದು
ಸಚಿವ
ಡಾ.
ಅಶ್ವಥ್
ನಾರಾಯಣ
ವಿವರಿಸಿದ್ದಾರೆ.

id='are-slot-2'
class='oiad
oi-axt
oiadv'>

ಬೆಂಗಳೂರು, ಹುಬ್ಬಳ್ಳಿಯಲ್ಲಿ ಟೆಕ್ ಸಮಿಟ್

ಬೆಂಗಳೂರು, ಹುಬ್ಬಳ್ಳಿಯಲ್ಲಿ ಟೆಕ್ ಸಮಿಟ್

"ಟೆಕ್‌ ಸಮಿಟ್‌ಗೆ ಪೂರ್ವಭಾವಿಯಾಗಿ ಬಿಯಾಂಡ್‌ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಟೆಕ್‌ ಸಮಿಟ್‌ಗಳನ್ನು ನಡೆಸಲಾಗುವುದು. ಈ ಕಾರ್ಯಕ್ರಮಗಳನ್ನೂ ದೊಡ್ಡ ಪ್ರಮಾಣದಲ್ಲೇ ನಡೆಸಲಾಗುವುದು" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದರು.

"ಹಿಂದಿನ ಶೃಂಗದಲ್ಲಿ ಗ್ಲೋಬಲ್‌ ಅಲೆಯನ್ಸ್ ಒಕ್ಕೂಟಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಬಾರಿ ಭಾರತೀಯ ಹೂಡಿಕೆದಾರರ ಮೈತ್ರಿಕೂಟಕ್ಕೆ ಮಹತ್ವ ಕೊಡಲಾಗುತ್ತಿದೆ. ಈ ಮೂಲಕ ವಿವಿಧ ರಾಜ್ಯಗಳು ಹಾಗೂ ಎತ್ತರದ ಸಾಧನೆ ಮಾಡಿರುವ ಖಾಸಗಿ ಕಂಪನಿ, ವ್ಯಕ್ತಿಗಳು ಭಾಗಿಯಾಗವಂತೆ ಮಾಡಲಾಗುತ್ತಿದೆ" ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ವಿವರಿಸಿದ್ದಾರೆ.

ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ

ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ

"ಜಿಲ್ಲೆಗಳಲ್ಲಿ ನಡೆಯುವ ಟೆಕ್‌ ಸಮಿಟ್‌ ಪೂರ್ವಭಾವಿ ಸಭೆಗಳಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM), ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ (ER &D) ಹಾಗೂ ಭಾರತೀಯ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (IESA)ಗೆ ಸಂಬಂಧಿಸಿದ ವರದಿಗಳನ್ನು ಅನಾವರಣ ಮಾಡಲಾಗುವುದು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಕೂಡ ಈ ಬಾರಿಯ ಬಿಟಿಎಸ್‌ನಲ್ಲಿ ಹೆಚ್ಚಿನ ಪಾತ್ರ ವಹಿಸಲಿವೆ" ಎಂದು ಅಶ್ವಥ್ ನಾರಾಯಣ ವಿವರಿಸಿದ್ದಾರೆ.

ವರ್ಚುವಲ್ ವೇದಿಕೆಯಲ್ಲಿ ಸಭೆ

ವರ್ಚುವಲ್ ವೇದಿಕೆಯಲ್ಲಿ ಸಭೆ

ಈ ಮೂರು ನಗರಗಳಲ್ಲಿ ನಡೆಯಲಿರುವ ಸಭೆಗಳಲ್ಲಿ ವರ್ಚುಯಲ್‌ ವೇದಿಕೆಯಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಐಟಿ ಸಚಿವ ರವಿಶಂಕರ್‌ ಪ್ರಸಾದ್‌, ಆರೋಗ್ಯ ಸಚಿವ ಡಾ.ಹರ್ಷವರ್ಧನ್‌, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಭಾಗವಹಿಸಲಿದ್ದಾರೆ. ಜತೆಗೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ತಾಂತ್ರಿಕ ಕ್ಷೇತ್ರದ ಸಂಶೋಧನೆಗಳ ಕುರಿತು ಬಿಟಿಎಸ್‌ನಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

Recommended Video

    Ravi Shastri ಅವಧಿ ಮುಕ್ತಾಯ Rahul Dravid ಆಗ್ತಾರಾ ಟೀಂ ಇಂಡಿಯಾ ಗುರು | Oneindia Kannada
    ಸಭೆಯಲ್ಲಿ ಭಾಗವಹಿಸಿದವರು

    ಸಭೆಯಲ್ಲಿ ಭಾಗವಹಿಸಿದವರು

    ರಾಜ್ಯದ ಮಾಹಿತಿ ತಂತ್ರಜ್ಞಾನ ವಿಷನ್‌ ಗ್ರೂಪ್‌ ಅಧ್ಯಕ್ಷ ಕ್ರಿಸ್‌ ಗೋಪಾಲ ಕೃಷ್ಣ, ಜೈವಿಕ ತಂತ್ರಜ್ಣಾನ ವಿಷನ್ ಗ್ರೂಪ್ ನ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಲಹೆಗಾರ ಪ್ರಶಾಂತ್ ಪ್ರಕಾಶ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಡಿಸಿಎಂ ಕಾರ್ಯದರ್ಶಿ ಪಿ. ಪ್ರದೀಪ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+