ಸಲಿಂಗಕಾಮ ಸಕ್ರಮ: ಕಾಂಗ್ರೆಸ್ನ ಶಶಿ ತರೂರ್ ಎತ್ತಿದ್ದರು ಮೊದಲ ಧ್ವನಿ
ಬೆಂಗಳೂರು, ಸೆಪ್ಟೆಂಬರ್ 06: ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುತ್ತಿದ್ದ 72 ವರ್ಷಗಳ ಹಿಂದೆ ರಚಿಸಿದ್ದ ಸೆಕ್ಷನ್ 377 ಸುಪ್ರೀಂಕೋರ್ಟ್ನ ಐತಿಹಾಸಿಕ ತೀರ್ಪಿನಿಂದಾಗಿ ಕಸದಬುಟ್ಟಿ ಸೇರಿದೆ.
ಈ ಹೋರಾಟದಕ್ಕೆ ಸುಮಾರು 20 ವರ್ಷಗಳ ಇತಿಹಾಸವಿದೆ. ಆಗ ಅಷ್ಟೇನೂ ಗಟ್ಟಿಯಾಗಿಲ್ಲದಿದ್ದ ಸೆಕ್ಷನ್ 377 ವಿರೋಧಿ ಹೋರಾಟಕ್ಕೆ ಮೊದಲ ಬಾರಿಗೆ ಗಟ್ಟಿ ಧನಿ ತಂದುಕೊಟ್ಟವರು ಕಾಂಗ್ರೆಸ್ ಮಾಜಿ ಸಚಿವ, ಹಾಲಿ ಸಂಸದ ಶಶಿ ತರೂರ್.
ಹೌದು, ಶಶಿ ತರೂರ್ ಅವರು ಮೊದಲ ಬಾರಿಗೆ ಸಂಸತ್ನಲ್ಲಿ ಸಲಿಂಗಕಾಮವನ್ನು ಸಕ್ರಮಗೊಳಿಸುವ ಬಿಲ್ಬಗ್ಗೆ ಮಾತನಾಡಿದ್ದರು. ಆದರೆ ಆಗ ಬಿಜೆಪಿಯಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.

ಮಹಾಭಾರತದ ಶಿಖಂಡಿ ಪಾತ್ರದ ಉದಾಹರಣೆ
ಮಹಾಭಾರತದ ಶಿಖಂಡಿ, ಅರ್ಧನಾರೀಶ್ವರ ಕಲ್ಪನೆಯನ್ನು ಉದಾಹರಣೆಯಾಗಿ ಇರಿಸಿಕೊಂಡು ಶಶಿ ತರೂರ್ ಅವರು ಅದ್ಭುತವಾಗಿ ಮಾತನಾಡಿ, ಸಲಿಂಗಕಾಮಿಗಳಿಗೆ ಅವರ ಹಕ್ಕನ್ನು ನೀಡುವ ಬಗ್ಗೆ ಸದನದ ಗಮನ ಸೆಳೆದಿದ್ದರು. ಅಷ್ಟೆ ಅಲ್ಲದೆ ತೃತೀಯ ಲಿಂಗಿಗಳಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆಯೂ ಸುದೀರ್ಘವಾಗಿ ಮಾತನಾಡಿದ್ದರು.

ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕೇಂದ್ರ ಸಮಿತಿ
ತೃತೀಯ ಲಿಂಗಿಗಳ ಅಭಿವೃದ್ಧಿಗೆ ಕೇಂದ್ರ ಸಮಿತಿ, ಅವರಿಗೆ ವಿಶೇಷ ಶೌಚಾಲಯ, ಜೈಲುಗಳಲ್ಲಿ ವಿಶೇಷ ಸೆಲ್ಗಳು, ಅವರಿಗೆ ಒಟ್ಟಿಗೆ ಬಾಳಲು ಮಾಡಿಕೊಡಬೇಕಾದ ವ್ಯವಸ್ಥೆ ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದರು. ಅವರ ಭಾಷಣ ಈಗಲೂ ಯೂಟ್ಯೂಬ್ನಲ್ಲಿ ಲಭ್ಯವಿದೆ.

ಪ್ರತಿ ವ್ಯಕ್ತಿಗೂ ಸಮಾನ ಹಕ್ಕು
ಹುಟ್ಟಿದ ಪ್ರತಿ ವ್ಯಕ್ತಿಯೂ ಸಮಾನವಾದ ಹಕ್ಕುಗಳು ಹಾಗೂ ಗೌರವದೊಂದಿಗೆ ಹುಟ್ಟುತ್ತಾನೆ, ನಾನೂ ಮತ್ತು ನೀವು ಅನುಭವಿಸುತ್ತಿರುವ ಹಕ್ಕುಗಳು ಹಾಗೂ ಸ್ವಾತಂತ್ರ್ಯ ಅವರಿಗೂ ದೊರಕಬೇಕು ಎಂಬುದು ಶಶಿ ತರೂರ್ ಅವರ ವಾದವಾಗಿತ್ತು.

ಎನ್ಡಿಎ ಬೆಂಬಲಿಸಲಿಲ್ಲ
ಆದರೆ ಬಹುಸಂಖ್ಯೆಯಲ್ಲಿದ್ದ ಎನ್ಡಿಎ ಶಶಿ ತರೂರ್ ಅವರ ಬಿಲ್ಗೆ ಮತಹಾಕಲಿಲ್ಲ ಹಾಗಾಗಿ ಅದು ಸದನದಲ್ಲಿ ಪಾಸ್ ಆಗಲೇ ಇಲ್ಲ. ಆಗಲೇ ಈ ವಿಷಯದ ಬಗ್ಗೆ ಪೂರ್ಣ ಚರ್ಚೆಯಾಗಿದ್ದರೆ ಇನ್ನಷ್ಟು ಬೇಗ ಅಮಾನವೀಯ, ಅಸಮಾನತೆಯನ್ನೇ ಸಾರುವ ಸೆಕ್ಷನ್ 377 ಕಸದ ಬುಟ್ಟಿಗೆ ಸೇರಿರುತ್ತಿತ್ತು.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications