‘ರಯೀಸ್’ಸಿನಿಮಾ ಪ್ರಚಾರದ ವೇಳೆ ವ್ಯಕ್ತಿ ಸಾವು, ಶಾರುಖ್ ಖಾನ್ಗೆ ಸಮನ್ಸ್
ವಡೋದರ, ಮಾಚ್. 29 : 'ರಯೀಸ್' ಚಿತ್ರದ ಪ್ರಚಾರದ ವೇಳೆ ವಡೋದರ ರೈಲು ನಿಲ್ದಾಣದಲ್ಲಿ ವ್ಯಕ್ತಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಎಕ್ಸೆಲ್ ಎಂಟರ್ಟೇನ್ ಮೆಂಟ್ ಕಂಪೆನಿಗೆ ವಡೋದರ್ ರೈಲ್ವೆ ಪೊಲೀಸ್ ಸಮನ್ಸ್ ನೀಡಿದೆ.
'ಏಳು ದಿನಗಳ ಒಳಗಾಗಿ ಹೇಳಿಕೆ ನೀಡುವಂತೆ ಸಮನ್ಸ್ ನಲ್ಲಿ ಸೂಚಿಸಲಾಗಿದೆ' ಎಂದು ಡಿವೈಎಸ್ಪಿ (ರೈಲ್ವೆ) ತರುಣ್ ಬರೊಟ್ ಹೇಳಿದ್ದಾರೆ. ಶಾರುಖ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಆಗಸ್ಟ್ ಕ್ರಾಂತಿ ಎಕ್ಸ್ಪ್ರೆಸ್ನಲ್ಲಿ ಮುಂಬೈನಿಂದ ದೆಹಲಿಗೆ ಪ್ರಯಾಣಿಸಿದ್ದರು.[ಶಾರುಖ್ ಖಾನ್ ಸಿನಿಮಾ ಪ್ರಚಾರದ ವೇಳೆ ವ್ಯಕ್ತಿ ಸಾವು]
ಜನವರಿ 23 ರಂದು ರೈಲು ವಡೋದರ ನಿಲ್ದಾಣಕ್ಕೆ ಬಂದಾಗ ನಟನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ನೂಕುನುಗ್ಗಲಿನ ವೇಳೆ ಫರ್ಹೀದ್ ಖಾನ್ ಪಠಾಣ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸಿ 45 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಇಲ್ಲಿನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ಮಾರ್ಚ್ 2 ರಂದು ರೈಲ್ವೆ ಪೊಲೀಸರು ಆದೇಶಿಸಿದ್ದರು.