ದೆಹಲಿಯಲ್ಲಿ ಭಾರೀ ಕುಸಿತ ಕಂಡ ವಾಯು ಗುಣಮಟ್ಟ, ಆರೆಂಜ್ ಅಲರ್ಟ್ ಘೋಷಣೆ
ರಾಷ್ಟ್ರ ರಾಜಧಾನಿ ದೆಹಲಿಯ ಹವಾಮಾನ ಹದಗೆಟ್ಟಿದೆ. ದೆಹಲಿಯ ಹಲವೆಡೆ ಶೀತ ಗಾಳಿಯಿಂದ ಶೂನ್ಯ ಗೋಚರತೆಯ ವಾತಾವರಣ ಕಂಡುಬಂದಿದೆ. ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಫರಿದಾಬಾದ್ನಲ್ಲಿ ಗಾಳಿಯ ಗುಣಮಟ್ಟವು 400ಕ್ಕೂ ಹೆಚ್ಚು ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ (ಎಕ್ಯುಐ) ಗಂಭೀರ ಸ್ಥಿತಿ ತಲುಪಿದೆ. ಇದರಿಂದ ಶೂನ್ಯ-ಗೋಚರತೆಯ ಮಂಜು ಆವರಿಸಿದೆ.
ಹವಾಮಾನ ಇಲಾಖೆಯು ಡಿಸೆಂಬರ್ 29ರಂದು (ಸೋಮವಾರ) ದೆಹಲಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಇಲ್ಲಿ ಗರಿಷ್ಠ ತಾಪಮಾನವು ಸುಮಾರು 22 ಡಿಗ್ರಿ ಸೆಲ್ಸಿಯಸ್ವರೆಗೆ ತಲುಪುವ ನಿರೀಕ್ಷೆಯಿದ್ದರೆ, ಕನಿಷ್ಠ ತಾಪಮಾನವು 7 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ಸಾಧ್ಯತೆ ಇದೆ ಎಂದು ಹೇಳಿದೆ. ಭಾನುವಾರ ವಾಯು ಗುಣಮಟ್ಟ ಸೂಚ್ಯಂಕ ತುಂಬಾ ಕಳಪೆ ಎಂದು ವರದಿಯಾಗಿದೆ. ದಟ್ಟವಾದ ಮಂಜು ಮತ್ತು ಹೆಚ್ಚಿನ ಮಟ್ಟದ ಮಾಲಿನ್ಯದಿಂದ ವಾತಾವರಣ ಹದಗೆಟ್ಟಿತು.

ಎಕ್ಯೂಐ ಎಲ್ಲೆಲ್ಲಿ ಎಷ್ಟು ದಾಖಲು?
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ದತ್ತಾಂಶದ ಪ್ರಕಾರ ವಾಯು ಗುಣಮಟ್ಟವು ಸೋಮವಾರ ಬೆಳಿಗ್ಗೆ 400+ ಎಕ್ಯೂಐ ದಾಖಲಿಸಿದೆ. ಆನಂದ್ ವಿಹಾರ್ (458), ಅಶೋಕ್ ವಿಹಾರ್ (430), ಬುರಾರಿ ಕ್ರಾಸಿಂಗ್ (401), ಚಾಂದನಿ ಚೌಕ್ (426), ಜಹಾಂಗೀರ್ಪುರಿ (439), ಮುಂಡ್ಕಾ (416), ನರೇಲಾ (404), ಓಖ್ಲಾ ಹಂತ -2 (411) ಎಕ್ಯುಐ ವರದಿಯಾಗಿದೆ. ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಮಕ್ಕಳು, ವೃದ್ಧರು ಮತ್ತು ಉಸಿರಾಟದ ತೊಂದರೆ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಪ್ರತ್ಯೇಕ ಪ್ರದೇಶಗಳಲ್ಲಿ ಶೀತದ ವಾತಾವರಣ ಹೆಚ್ಚಾಗುವ ಸಾಧ್ಯತೆಯಿದೆ. ಬಿಹಾರದಲ್ಲಿ ಇದೇ ರೀತಿಯ ವಾತಾವರಣ ಉಂಟಾಗಬಹುದು. ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದ ಪ್ರತ್ಯೇಕ ಪ್ರದೇಶಗಳಲ್ಲಿ ಮತ್ತು ಜಾರ್ಖಂಡ್ನಲ್ಲಿ ಶೀತಲ ಅಲೆಯ ವಾತಾವರಣ ಉಂಟಾಗುವ ನಿರೀಕ್ಷೆಯಿದೆ.

ಈ ವಾರವಿಡೀ ಉತ್ತರ ಭಾರತದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಕವಿಯುವ ನಿರೀಕ್ಷೆಯಿದೆ. ಡಿಸೆಂಬರ್ 31ರವರೆಗೆ ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ರಾತ್ರಿ ಮತ್ತು ಮುಂಜಾನೆ ಮಂಜು ಮುಂದುವರಿಯುವ ಸಾಧ್ಯತೆಯಿದೆ. ಆದರೆ ಪೂರ್ವ ಉತ್ತರ ಪ್ರದೇಶದಲ್ಲಿ ಜನವರಿ 1ರವರೆಗೆ ಕಡಿಮೆ ಗೋಚರತೆ ಕಂಡುಬರಬಹುದು, ನಂತರ ಕ್ರಮೇಣ ಸುಧಾರಿಸುವ ನಿರೀಕ್ಷೆ ಇದೆ.
ಇಂದು ಮುಖ್ಯವಾಗಿ ಶುಭ್ರ ಆಕಾಶ ಇರಲಿದೆ. ಕೆಲವು ಸ್ಥಳಗಳಲ್ಲಿ ದಟ್ಟವಾದ ಮಂಜು, ಬೆಳಗಿನ ಸಮಯದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ತುಂಬಾ ದಟ್ಟವಾದ ಮಂಜು ಇರುತ್ತದೆ. ದೆಹಲಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 21-23 ಡಿಗ್ರಿ ಸೆಲ್ಸಿಯಸ್ ಹಾಗೂ 7-9 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕೆ ಹತ್ತಿರದಲ್ಲಿದೆ. ಗರಿಷ್ಠ ತಾಪಮಾನವು ದೆಹಲಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಪ್ರಧಾನವಾಗಿ ಮೇಲ್ಮೈ ಗಾಳಿಯು ಪಶ್ಚಿಮ ದಿಕ್ಕಿನಿಂದ ಬೀಸುವ ಸಾಧ್ಯತೆಯಿದೆ, ಬೆಳಿಗ್ಗೆ ಗಾಳಿಯ ವೇಗ ಗಂಟೆಗೆ 15 ಕಿ.ಮೀ.ಗಿಂತ ಕಡಿಮೆ ಇರುತ್ತದೆ ಎಂದು ಇಲಾಖೆ ಹೇಳಿದೆ.
ಗೋಚರತೆ ಕಡಿಮೆ
ಅಸ್ಸಾಂ ಮತ್ತು ಮೇಘಾಲಯ ತೇಜ್ಪುರ 20 ಮೀಟರ್ವರೆಗೆ, ದಿಬ್ರುಗಢ 50, ಗುವಾಹಟಿ 150, ಧುಬ್ರಿ 150; ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ & ತ್ರಿಪುರ: ಅಗರ್ತಲಾ 100, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಕೂಚ್ ಬೆಹರ್, ಮಾಲ್ಡಾ 100, ಒಡಿಶಾ ರೂರ್ಕೆಲಾ 70, ಬಿಹಾರ, ಗಯಾ 50, ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಬಿಲಾಸ್ಪುರ್ 50, ಸುಂದರನಗರ 70, ಉತ್ತರಾಖಂಡ, ರೋಶನಾಬಾದ್ 75, ಅಮೃತಸರ, ಆದಂಪುರ, ಪಠಾಣ್ಕೋಟ್ 0, ಲುಧಿಯಾನ 10, ಪಟಿಯಾಲ 20, ಅಂಬಾಲಾ 50 ಮೀಟರ್ವರೆಗೆ ಕಡಿಮೆ ಗೋಚರತೆ ವರದಿಯಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications