ಛತ್ತೀಸ್ ಗಢದಲ್ಲಿ ಟಿಕೆಟ್ ಗಾಗಿ ಚೇರ್, ಪಾಟ್ ಮುರಿದ ಕಾಂಗ್ರೆಸ್ ಕಾರ್ಯಕರ್ತರು!
ರಾಯ್ಪುರ, ನವೆಂಬರ್ 02: ಛತ್ತೀಸ್ ಗಢದಲ್ಲಿ ಬಿಜೆಪಿ ವಿರುದ್ಧ ಜಯಗಳಿಸಲೇಬೇಕು ಎಂಬ ಜಿದ್ದಿಗೆ ಕಾಂಗ್ರೆಸ್ ಬಿದ್ದಿದೆ. ಆದರೆ ಬಿಜೆಪಿ ವಿರುದ್ಧ ತಂತ್ರ ರೂಪಿಸುವುದಕ್ಕಿಂತ ಪಕ್ಷದ ಒಳಗಿನ ಅಸಮಾಧಾನ ಶಮನ ಮಾಡುವುದಕ್ಕೆ ತಂತ್ರ ರೂಪಿಸುವುದೇ ಕಾಂಗ್ರೆಸ್ಸಿಗೆ ದೊಡ್ಡ ತಲೆನೋವಾಗಿದೆ.
ಛತ್ತೀಸ್ ಗಢದ ರಾಜಧಾನಿ ರಾಯ್ಪುರ ಮತ್ತು ಬಿಲಾಸ್ಪುರದಲ್ಲಿರುವ ಕಾಂಗ್ರೆಸ್ ಕಚೇರ ಗುರುವಾರದಂದು ಸಾಕಷ್ಟು ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿದೆ.
ಟಿಕೆಟ್ ಸಿಗದಿದ್ದರೆ ಬಂಡಾಯದ ಹಾಡು, ರಾಜಸ್ಥಾನದ್ದೂ ಅದೇ ಪಾಡು!
ಟಿಕೆಟ್ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಕೆಲವು ಹೆಸರುಗಳ ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪದೇ ಇದ್ದಲ್ಲಿ ಸುಮ್ಮನಿರುವುವದಿಲ್ಲ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತವಾಗಿ ಕಚೇರಿಯ ಕುರ್ಚಿಗಳು, ಹೂಕುಂಡಗಳನ್ನು ಮುರಿದು ಹಾಕಿದ ಘಟನೆ ನಡೆಯಿತು.
Chhattisgarh: A ruckus was created at Congress office in Raipur last night following arguments over Raipur South seat. Party leader R Tiwari says,"it's Congress workers' sentiments for the seat as they have right to speak.Punia ji had a discussion with them after which they left" pic.twitter.com/kzmxe9Ck0U
— ANI (@ANI) November 2, 2018
ರಾಹುಲ್ ಮಧ್ಯಸ್ಥಿಕೆ ನಂತರವೂ ಬಗೆಹರಿದಿಲ್ಲ ಟಿಕೆಟ್ ಹಂಚಿಕೆ ಬಿಕ್ಕಟ್ಟು!
ಪಕ್ಷಕ್ಕಾಗಿ ನಿರಂತರವಾಗಿ ದುಡಿದವರಿಗೆ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು ಆಗ್ರಹಿಸುವುದು ಸಹಜ. ಪಕ್ಷದಿಂದ ಯಾರೂ ಬಂಡಾಯವೆದ್ದಿಲ್ಲ. ಟಿಕೆಟ್ ಹಂಚಿಕೆಯ ವಿಷಯದಲ್ಲಿ ಅನ್ಯಾಯವಾಗಬಾರದು ಎಂಬುದಷ್ಟೇ ಪಕ್ಷದ ಕಾರ್ಯಕರ್ತರ ಕಳಕಳಿ ಎಂದು ಕಾಂಗ್ರೆಸ್ ಮುಖಂಡ ನರೇಂದ್ರ ಬೊಲಾರ್ ಹೇಳಿದ್ದಾರೆ.