ಕೋಮು ಗಲಭೆ ಪಟ್ಟಿ-2017: ಯುಪಿ ನಂ. 1,ಕರ್ನಾಟಕ ನಂ. 2
ನವದೆಹಲಿ, ಫೆಬ್ರವರಿ 6: 2017ರಲ್ಲಿ ದೇಶದಲ್ಲಿ 822 ಕೋಮು ಗಲಭೆಗಳು ನಡೆದಿದ್ದು ಇದರಲ್ಲಿ 111 ಜನರು ಸಾವನ್ನಪ್ಪಿದ್ದಾರೆ ಮತ್ತು 2,384 ಜನರು ಗಾಯಗೊಂಡಿದ್ದಾರೆ. ಹೀಗೊಂದು ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹನ್ಸರಾಜ್ ಅಹಿರ್ ಲೋಕಸಭೆಯಲ್ಲಿ ನೀಡಿದ್ದಾರೆ.
ಎಂದಿನಂತೆ ಕೋಮು ಗಲಾಟೆಗಳಲ್ಲಿ ಮೊದಲ ಸ್ಥಾನವನ್ನು ಉತ್ತರ ಪ್ರದೇಶ ಅಲಂಕರಿಸಿದ್ದು, ಒಂದೇ ವರ್ಷದಲ್ಲಿ 192 ಘರ್ಷಣೆಗಳು ನಡೆದಿವೆ. ಇದರಲ್ಲಿ 44 ಜನರು ಸಾವನ್ನಪ್ಪಿದ್ದು 542 ಇತರರು ಗಾಯಗೊಂಡಿದ್ದಾರೆ.
ಅಚ್ಚರಿ ಮತ್ತು ಅವಮಾನಕರ ಎಂದರೆ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಕರ್ನಾಟಕ ಒಟ್ಟು 100 ಕೋಮು ಸಂಘರ್ಷಗಳಿಗೆ 2017ರಲ್ಲಿ ಸಾಕ್ಷಿಯಾಗಿದೆ. ಇದರಲ್ಲಿ ಒಟ್ಟು 9 ಜನರು ಸಾವನ್ನಪ್ಪಿ 229 ಜನರು ಗಾಯಗೊಂಡಿದ್ದಾರೆ.

ಇನ್ನು ರಾಜಸ್ಥಾನದಲ್ಲಿ 91 ಕೋಮು ಗಲಭೆಗಳಿಗೆ 12 ಜನರು ಸಾವನ್ನಪ್ಪಿ 175 ಜನರು ಗಾಯಗೊಂಡಿದ್ದಾರೆ. ಬಿಹಾರದಲ್ಲಿ 85 ಕೋಮು ಗಲಾಟೆಗಳು ನಡೆದಿದ್ದು 3 ಜನರು ಸಾವನ್ನಪ್ಪಿ 321 ಜನರಿಗೆ ಗಾಯಗಳಾಗಿವೆ.
2017ರಲ್ಲಿ ಮಧ್ಯ ಪ್ರದೇಶದಲ್ಲಿ 60 ಕೋಮು ಘಟನೆಗಳಿಂದ 9 ಜನರು ಸಾವನ್ನಪ್ಪಿ 191 ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 58 ಕೋಮು ಘರ್ಷಣೆಗಳಿಗೆ 9 ಜನರು ಸಾವನ್ನಪ್ಪಿ 230 ಜನರಿಗೆ ಗಾಯಗಳಾಗಿವೆ.
ಗುಜರಾತ್ ನಲ್ಲಿ ಇದೇ ಅವಧಿಯಲ್ಲಿ 50 ಕೋಮು ಗಲಭೆಗಳಿಗೆ 8 ಜನರು ಸಾವನ್ನಪ್ಪಿ 125 ಜನರಿಗೆ ಗಾಯಗಳಾಗಿವೆ.
ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ, 2016ರಲ್ಲಿ 703 ಕೋಮುಗಲಭೆಗಳಲ್ಲಿ 86 ಜನರು ಸಾವನ್ನಪ್ಪಿದ್ದರೆ 2,321 ಜನರು ಗಾಯಗೊಂಡಿದ್ದಾರೆ. ಇನ್ನು 2015ರಲ್ಲಿ 751 ಕೋಮು ಗಲಭೆಗಳಲ್ಲಿ 97 ಜನರು ಸಾವನ್ನಪ್ಪಿ 2,264 ಜನರು ಗಾಯಗೊಂಡಿದ್ದಾರೆ.
-
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ












Click it and Unblock the Notifications