ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್
ಬೆಂಗಳೂರು: ಆರೋಗ್ಯ ಸಂಸ್ಥೆಗಳ ಮನವಿಯಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಔಷಧಿಗಳ ಖರೀದಿಗಾಗಿ ಒಟ್ಟು 30 ಕೋಟಿ ರೂಪಾಯಿ ಅನುದಾನ ಘೋಷಿಸಿತ್ತು. ಇದರ ಬೆನ್ನಲ್ಲೆ ಔಷಧಿ ಖರೀದಿ, ಪೂರೈಕೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗುತ್ತಿದೆ. ಆರೋಗ್ಯ ಸಂಸ್ಥೆಗಳಿಗೆ ಔಷಧಿಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMCL) ಸರಬರಾಜು ಮಾಡುತ್ತದೆ. ಮಾತ್ರವಲ್ಲದೇ 'ಇ-ಔಷಧಿ ಸಾಫ್ಟವೇರ್' ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಈ ಕುರಿತು ಸದನದಲ್ಲಿ ಮಾಹಿತಿ ನೀಡಿರುವ ಬಗ್ಗೆ ಅವರು ಎಕ್ಸ್ ಪೋಸ್ಟ್ ಮಾಡಿದ್ದು, ಕೆಎಸ್ಎಂಸಿಎಲ್ ಸರಿಯಾಗಿ ದಿಕ್ಕಿನಲ್ಲಿ ಸಾಗಬೇಕು ಎನ್ನುವ ಕಾರಣಕ್ಕೆ ಐಎಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ಈ ಮೂಲಕ ಎಲ್ಲ ಇಲಾಖೆಗಳ ಔಷಧಿ ಖರೀದಿ ಪ್ರಕ್ರಿಯೆ ಸರಿಯಾಗಿ ನಡೆಸಯಬೇಕು ಎಂಬುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಔಷಧಿಗಳನ್ನು ಪಾರದರ್ಶಕವಾಗಿ ಖರೀದಿ ಮಾಡುತ್ತಿದ್ದೇವೆ. ಮೊದಲು ಟೆಂಡರ್ ನಲ್ಲಿ ಪಾಸ್ಟ್ ಪರ್ಪಾಮನ್ಸ್ ಅಂತ ಕೆಲವೇ ಜನರಿಗೆ ಟೆಂಡರ್ ಆಗುತ್ತಿತ್ತು. ಹೊಸಬರಿಗೆ ಅವಕಾಶ ಇರಲಿಲ್ಲ.

ಔಷಧಿ ಖರೀದಿ ಆರ್ಡರ್, ಗುಣಮಟ್ಟ ಪರಿಶೀಲನೆ
ಔಷಧಿ ಖರೀದಿಗೆ ಆರ್ಡರ್ ಕೊಟ್ಟ ನಂತರ ಕಂಪನಿ ಪರಿಶೀಲನೆ ನಡೆಸುತ್ತೇವೆ. ಪೂರೈಕೆ ಅದ ಮೇಲೆ ಪ್ರತಿ ಔಷಧಿ ಟೆಸ್ಟ್ ಮಾಡಿ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಇದೊಂದು ನೂತನ ಕ್ರಮ ನಾವು ತಂದಿದ್ದೇವೆ. ಕ್ವಾರಂಟೀನ್ ಪಾಲಿಸಿ ತಂದಿದ್ದೇವೆ. ಅಲ್ಲಿ ಉತ್ತೀರ್ಣ ಅದಮೇಲೆ ಅಸ್ಪತ್ರೆಗಳಿಗೆ ಕಳುಹಿಸುತ್ತೇವೆ. 890 ಔಷಧ ಖರೀದಿಗೆ ತೀರ್ಮಾನಿಸಿ 534 ಕೆಎಸ್ಎಂಸಿಎಲ್ ಮುಖಾಂತರ 356 ಸ್ಥಳಿಯವಾಗಿ ಖರೀದಿ ಮಾಡುತ್ತೇವೆ ಎಂದು ಸಚಿವರು ಔಷಧಿ ಖರೀದಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
534 ಔಷಧಿಗಳಲ್ಲಿ 236 ಈಗಾಗಲೇ ಪೂರೈಕೆ ಮಾಡುತ್ತಿದ್ದೇವೆ. ಮೊದಲು ಒಂದು ವರ್ಷಕ್ಕೆ ಬೇಕಾದ ಔಷಧ ಒಮ್ಮೆಲೇ ಖರಿದಿ ಮಾಡಲಾಗುತ್ತಿತ್ತು. ಹಲವಾರು ಔಷಧಗಳು ಬಳಸದೇ ಎಕ್ಸಪೈರಿ ಆಗುತ್ತಿತ್ತು. ಇದೀಗ ಶೇಕಡಾ 25ರಷ್ಟು ಈಡೀ ವರ್ಷ ನಿಯಮಿತವಾಗಿ ಪೂರೈಕೆ ಮಾಡಲು ಹೇಳಿದ್ದೇವೆ. ನಮ್ಮ ಆಸ್ಪತ್ರೆಯಲ್ಲಿ ಔಷಧ ಇಲ್ಲ ಎಂದು ಹೇಳಬಾರದು. ಆ ನಿಟ್ಟಿನಲ್ಲಿ ಲಭ್ಯತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಾತಿ ಹಂತದಲ್ಲಿದೆ ಇ-ಔಷಧಿ ಸಾಫ್ಟವೇರ್
ಈ ಬದಲಾವಣೆ ಮಾಡುವ ಸಂದರ್ಭದಲ್ಲಿ ಸ್ವಲ್ಪ ತೊಂದರೆ ಆಗಿದೆ. ಅದಿಕಾರಿಗಳ ಸಭೆ ನಡೆಸಿ 534 ರಲ್ಲಿ 487 ಔಷಧ ಇದೆ. ಎಸೆನ್ಸಿಯಲ್ ಔಷಧ ತಾಲ್ಲೂಕು ಆಸ್ಪತ್ರೆಯಲ್ಲಿ 98, ಸಮುದಾಯ ಆರೋಗ್ಯ ಕೇಂದ್ರ ದಲ್ಲಿ 73, ಪಿಹೆಚ್ ಸಿ ನಲ್ಲಿ 53 ಇರಬೇಕು, ಅದೆಲ್ಲವೂ ಲಭ್ಯವಿದೆ. ಇ-ಔಷಧಿ ಸಾಫ್ಟವೇರ್ ತಂದಿದ್ದು ರಿಯಲ್ ಟೈಮ್ ಪರಿಶೀಲನೆ ನಡೆಸಲಾಗುತ್ತದೆ.
ರಾಜ್ಯದ ಔಷಧ ಅವಶ್ಯಕತೆ ಎಲ್ಲ ಉನ್ನತ ಅಧಿಕಾರಿಗಳು ಸದಾ ಪರೀಕ್ಷೆ ನಡೆಸಲು ಅವಕಾಶವಿರುತ್ತದೆ. ಈ ಎಲ್ಲ ಬದಲಾವಣೆಯಿಂದ ಮುಂದಿನ ದಿನದಲ್ಲಿ ಶೇಕಡಾ 80 ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMCL) ನಿಂದಲೇ ಪೂರೈಕೆ ಅಗುತ್ತದೆ ಎಂದರು.
-
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ













Click it and Unblock the Notifications