ಸಿ.ಟಿ.ರವಿ ವಿರುದ್ದ ಸ್ಪರ್ಧಿಸಿದರೆ 1 ಕೋಟಿ ನೀಡುತ್ತೇನೆ: ಚಿಕ್ಕಗಳೂರಿನಲ್ಲಿ ಸಿದ್ದರಾಮಯ್ಯಗೆ ಆಫರ್ ನೀಡಿದ ಅಭಿಮಾನಿ
ಚಿಕ್ಕಮಗಳೂರಿನಲ್ಲೊಬ್ಬ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿಯೋಬ್ಬರು ಆಫರ್ ನೀಡಿದ್ದಾರೆ. ಸಿ.ಟಿ ರವಿ ವಿರುದ್ಧ ಸ್ಪರ್ಧೆ ಮಾಡಿದ್ರೆ ಸಿದ್ದರಾಮಯ್ಯಗೆ ಹಣವನ್ನು ಕೊಡುವುದಾಗಿ ಹೇಳಿದ್ದಾರೆ. ಹಾಗಾದರೆ ಆಫರ್ ನೀಡಿದ ಹಣ ಎಷ್ಟು ಅಂತಾ ಇಲ್ಲಿ ತಿಳಿಯಿರಿ.
ಚಿಕ್ಕಮಗಳೂರು, ಫೆಬ್ರವರಿ, 02: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೆಲುವಿನ ಕ್ಷೇತ್ರಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆಯೇ ರಾಜ್ಯಾದ್ಯಂತ ಅಭಿಮಾನಿಗಳು ಸಿದ್ದರಾಮಯ್ಯಗೆ ಆಫರ್ ಮೇಲೆ ಆಫರ್ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ಎಂದು ಆಹ್ವಾನಿಸುತ್ತಲೇ ಇದ್ದಾರೆ. ಹಾಗೆಯೇ ಚಿಕ್ಕಮಗಳೂರಿನ ಬಾಲಕೃಷ್ಣ ಎಂಬ ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿ ಒಂದು ಆಫರ್ ನೀಡಿದ್ದಾರೆ. ಸಿದ್ದರಾಮಯ್ಯನವರು ಶಾಸಕ ಸಿ.ಟಿ. ರವಿ ವಿರುದ್ಧ ಸ್ಪರ್ಧಿಸಿದರೆ ತನಗಿರುವ ಎರಡೂವರೆ ಹೆಕ್ಟೇರ್ ತೋಟವನ್ನು ಮಾರುತ್ತೇನೆ. ಮತ್ತು ಒಂದು ಕೋಟಿ ಕೊಡುವುದಾಗಿ ಸಿದ್ದರಾಮಯ್ಯ ಅವರಿಗೆ ಆಫರ್ ನೀಡಿದ್ದಾರೆ.
ಸಿದ್ದರಾಮಯ್ಯನವರು ಚಿಕ್ಕಮಗಳೂರಿನಿಂದಲೇ ಸ್ಪರ್ಧಿಸಬೇಕು ಎಂದು ಆಹ್ವಾನ ಕೂಡ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ತಾಲೂಕಿನಿಂದ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಿದರೆ ತನಗಿರುವ ಎರಡೂವರೆ ಹೆಕ್ಟೇರ್ ತೋಟವನ್ನು ಮಾರಿ, ಸಿದ್ದರಾಮಯ್ಯನವರಿಗೆ ಒಂದು ಕೋಟಿ ರೂಪಾಯಿ ಹಣ ನೀಡುತ್ತೇನೆ. ಅಷ್ಟೆ ಅಲ್ಲ, ಹಗಲಿರುಳು ಕಷ್ಟಪಟ್ಟು ಪ್ರಚಾರ ಮಾಡಿ ಅವರನ್ನು ಗೆದ್ದೆ ಗೆಲ್ಲಿಸುತ್ತೇವೆ ಎಂದು ಪಣ ತೊಟ್ಟಿದ್ದಾರೆ.
ನಾನು
ಸಿದ್ದರಾಮಯ್ಯನ
ಅಭಿಮಾನಿ
ಸಿದ್ದರಾಮಯ್ಯ
ಅಭಿಮಾನಿ
ಬಾಲಕೃಷ್ಣ
ಅವರ
ಈ
ನಡೆಗೆ
ಕುಟುಂಬದ
ಸದಸ್ಯರು
ಕೂಡ
ಸಂಪೂರ್ಣವಾಗಿ
ಒಪ್ಪಿಗೆ
ನೀಡಿದ್ದಾರೆ.
ಸಿದ್ದರಾಮಯ್ಯನವರು
ಜೆಡಿಎಸ್
ಪಕ್ಷದಲ್ಲಿ
ಇದ್ದಾಗಿನಿಂದಲೂ
ನಾನು
ಅವರ
ಅಭಿಮಾನಿಯಾಗಿದ್ದೇನೆ.
ಅವರ
ಮೇಲಿನ
ಅಭಿಮಾನಕ್ಕೆ
ಈ
ತೀರ್ಮಾನ
ಮಾಡಿದ್ದೇನೆ
ಎಂದು
ಬಾಲಕೃಷ್ಣ
ಹೇಳಿದರು.
"ಕೈ"
ಕಾರ್ಯಕರ್ತರಿಂದ
ಮಾರಣಾಂತಿಕ
ಹಲ್ಲೆ
ಕಾಂಗ್ರೆಸ್
ಪಕ್ಷ
ತೊರೆದು
ಬಿಜೆಪಿ
ಪಕ್ಷ
ಸೇರ್ಪಡೆಯಾಗಿದ್ದ
ಕಾರ್ಯಕರ್ತನ
ಮೇಲೆ
ಕಾಂಗ್ರೆಸ್
ಕಾರ್ಯಕರ್ತರು
ಮಾರಣಾಂತಿಕ
ಹಲ್ಲೆ
ನಡೆಸಿರುವ
ಘಟನೆ
ಚಿಕ್ಕಮಗಳೂರು
ಜಿಲ್ಲೆಯ
ಎನ್.ಆರ್.ಪುರ
ತಾಲೂಕಿನ
ನಾಗಲಾಪುರ
ಸಮೀಪದ
ರಾವುರು
ಗ್ರಾಮದಲ್ಲಿ
ನಡೆದಿದೆ.
ಶಿವು
ಮಾರಣಾಂತಿಕವಾಗಿ
ಹಲ್ಲೆಗೊಳಗಾಗಿ
ಆಸ್ಪತ್ರೆಗೆ
ದಾಖಲಾದ
ಬಿಜೆಪಿ
ಕಾರ್ಯಕರ್ತನಾಗಿದ್ದು,
ಕಾಂಗ್ರೆಸ್
ಶಾಸಕ
ಟಿ.ಡಿ.
ರಾಜೇಗೌಡ
ಹಿಂಬಾಲಕರು
ಹಲ್ಲೆ
ನಡೆಸಿದ್ದಾರೆ
ಎನ್ನುವ
ಆರೋಪ
ಕೇಳಿಬಂದಿದೆ.
ಎನ್.ಆರ್
ಪುರ
ಠಾಣೆಯಲ್ಲಿ
ಪ್ರಕರಣ
ದಾಖಲು
ಕಾಂಗ್ರೆಸ್
ಪಕ್ಷದಲ್ಲಿ
ಸಕ್ರಿಯ
ಕಾರ್ಯಕರ್ತನಾಗಿದ್ದ
ಶಿವು
ಕಳೆದ
ತಿಂಗಳು
ಪಕ್ಷ
ತೊರೆದು
ಬಿಜೆಪಿಗೆ
ಸೇರ್ಪಡೆಗೊಂಡಿದ್ದರು.
ಇದು
ಶಾಸಕ
ಟಿ.ಡಿ.ರಾಜೇಗೌಡ
ಅವರ
ಬೆಂಬಲಿಗರ
ಕಣ್ಣು
ಕೆಂಪಗಾಗಿಸಿದ್ದವು.
ಬಿಜೆಪಿ
ಸೇರಿದ
ವಿಚಾರವಾಗಿ
ಶಿವು
ಜೊತೆ
ಶಾಸಕರ
ಹಿಂಬಾಲಕರು
ಗಲಾಟೆ
ಕೂಡ
ಮಾಡಿದ್ದರು.
ಕಿಡಿಗೇಡಿಗಳು
ಬುಧವಾರ
ಮನೆಗೆ
ನುಗ್ಗಿ
ಶಿವು
ಮೇಲೆ
ಮಾರಣಾಂತಿಕ
ಹಲ್ಲೆ
ನಡೆಸಿ
ಪರಾರಿಯಾಗಿದ್ದಾರೆ.
ಗಾಯಾಳು
ಶಿವುನನ್ನು
ಆಸ್ಪತ್ರೆಗೆ
ದಾಖಲಿಸಿ
ಚಿಕಿತ್ಸೆ
ನೀಡಲಾಗಿದೆ.
ಪ್ರಕರಣ
ಸಂಬಂಧ
ನಾಲ್ವರು
ಕಾಂಗ್ರೆಸ್
ಕಾರ್ಯಕರ್ತರ
ವಿರುದ್ಧ
ಎನ್.ಆರ್
ಪುರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.