ತಮಿಳುನಾಡು ಸರ್ಕಾರದಿಂದ 'ಅಮ್ಮ' ಸಿಮೆಂಟ್ ಬಿಡುಗಡೆ
ಚೆನ್ನೈ, ಜ.5: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಹಾಕಿಕೊಟ್ಟ ಹಾದಿಯಲ್ಲೇ ಸಾಗಿರುವ ಎಐಎಡಿಎಂಕೆ ಸರ್ಕಾರ ಮತ್ತೊಂದು ಜನಪ್ರಿಯ ಯೋಜನೆಯನ್ನು ಘೋಷಿಸಿದೆ. ಸಬ್ಸಿಡಿ ದರದಲ್ಲಿ 'ಅಮ್ಮ' ಸಿಮೆಂಟ್ ಗಳನ್ನು ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಮಾಡಿದೆ.
ಜಯಲಲಿತಾ ಅವರು ಕಳೆದ ಸೆಪ್ಟೆಂಬರ್ ನಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಅದನ್ನು ಪನ್ನೀರ್ ಸೆಲ್ವಂ ಸರ್ಕಾರ ಈಗ ಜಾರಿಗೊಳಿಸುತ್ತಿದೆ. ಖಾಸಗಿ ವಲಯದಿಂದ ಸುಮಾರು 2 ಲಕ್ಷ ಟನ್ ಗಳಷ್ಟು ಸಿಮೆಂಟ್ ಗಳನ್ನು ಸರ್ಕಾರ ಖರೀದಿಸಲಿದ್ದು ಅದನ್ನು 190 ಪ್ರತಿ ಕೆಜಿಯಂತೆ ಕಾರ್ಪೋರೇಷನ್, ಮುನ್ಸಿಪಾಲಿಟಿ ಹಾಗೂ ಇತರೆ ಸ್ಥಳೀಯ ಸಂಸ್ಥೆಗಳಿಗೆ ಮಾರಾಟ ಮಾಡಲಿದೆ. [ದಿಲ್ಲಿಯಲ್ಲಿ ಜಯಮ್ಮ ಮೆಸ್ ಆರಂಭ]
ಇದಕ್ಕೂ ಮುನ್ನ ಎಐಎಡಿಎಂಕೆ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು ಜಯಲಲಿತಾ(ಅಭಿಮಾನಿಗಳ ಪಾಲಿನ ಅಮ್ಮ) ಹೆಸರಿನಲ್ಲಿ ಜಾರಿಗೊಳಿಸಿದ್ದಾರೆ.

ಅಮ್ಮ ಮಿನರಲ್ ವಾಟರ್, ಕ್ಯಾಂಟೀನ್, ಉಪ್ಪು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು. ಈಗ ಸಿಮೆಂಟಿನ ಸರದಿ.
ಸೋಮವಾರ ತಿರುಚನಾಪಳ್ಳಿಯ ಐದು ಗೋದಾಮಿನಲ್ಲಿ ಅಮ್ಮ ಸಿಮೆಂಟ್ ಮೂಟೆಗಳು ಮೊದಲ ಬಾರಿಗೆ ಪ್ರವೇಶ ಪಡೆದುಕೊಂಡವು. ಜ.10ರ ವೇಳೆಗೆ ತಮಿಳುನಾಡಿನಾದ್ಯಂತ ಸುಮಾರು 470 ಗೋದಾಮುಗಳಲ್ಲಿ ಅಮ್ಮ ಸಿಮೆಂಟ್ ಶೇಖರಣೆಯಾಗಲಿದೆ ಎಂದು ಸರ್ಕಾರ ಪ್ರಕಟಿಸಿದೆ. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]
ಈ ಯೋಜನೆ ಪ್ರಕಾರ ಫಲಾನುಭವಿಗಳು ಕನಿಷ್ಠ 50 ಬ್ಯಾಗ್ ಸಿಮೆಂಟ್ ಗಳನ್ನು 100 ಚ.ಅ ಹಾಗೂ 750 ಚೀಲದಷ್ಟು ಸಿಮೆಂಟ್ 1500 ಚದರ ಅಡಿಗಾಗಿ 190 ರು ನಂತೆ ಪಡೆದುಕೊಳ್ಳಬಹುದು. ಕಟ್ಟಡ ನಿರ್ಮಾಣಕ್ಕೂ ಮುನ್ನ ಸ್ಥಳೀಯ ಸಂಸ್ಥೆಯ ಅನುಮತಿ ಪತ್ರ ಅಗತ್ಯ.
ಮನೆ ರಿಪೇರಿ ಇನ್ನಿತರೆ ದುರಸ್ತಿ ಕಾರ್ಯಗಳಿಗೆ 10-100 ಚೀಲ ಸಿಮೆಂಟ್ ಲಭ್ಯವಿದೆ. ಸರ್ಕಾರದ ಸೌರಶಕ್ತಿಯುತ ಹಸಿರುಮನೆ ಹಾಗೂ ಕೇಂದ್ರ ಸರ್ಕಾರದ ಇಂದಿರಾ ಆವಾಸ ಯೋಜನಾ ಪೂರಕವಾಗಿ ಈ ಅಮ್ಮ ಸಿಮೆಂಟ್ ಯೋಜನೆ ಜಾರಿಗೊಳ್ಳಲಿದೆ(ಪಿಟಿಐ)
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications