ತಮಿಳುನಾಡು ಚುನಾವಣೆ: ನಟ, ರಾಜಕಾರಣಿ ಸೀಮನ್ ವಾರ್ಷಿಕ ಆದಾಯ ಕೇವಲ 1,000 ರೂ
ಚೆನ್ನೈ, ಮಾರ್ಚ್ 19: ನಾಮ್ ತಮಿಳರ್ ಕಚ್ಚಿ (ಎನ್ಟಿಕೆ) ಪಕ್ಷದ ಸ್ಥಾಪಕ, ನಟ ಮತ್ತು ನಿರ್ದೇಶಕ ಸೀಮನ್, ತಮಿಳುನಾಡಿನ ತಿರುವತ್ತಿಯೂರ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅವರು ತಮ್ಮ ವಾರ್ಷಿಕ ಆದಾಯ ಕೇವಲ 1,000 ರೂ. ಎಂದು ಅಫಿಡವಿಟ್ನಲ್ಲಿನ ಆಸ್ತಿ ವಿವರದಲ್ಲಿ ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಸೀಮನ್ ಅವರು ಮಾರ್ಚ್ 15ರಂದು ನಾಮಪತ್ರ ಸಲ್ಲಿಸಿದ್ದರು. ಅವರು 2019-20ನೇ ಸಾಲಿನಲ್ಲಿ ತಮ್ಮ ಆದಾಯ ಕೇವಲ 1,000 ರೂಪಾಯಿ ಎಂದು ನಮೂದಿಸಿರುವುದನ್ನು ಚುನಾವಣಾ ಆಯೋಗ ಪರಿಶೀಲನೆಗೆ ಒಳಪಡಿಸಲಿದೆ ಎನ್ನಲಾಗಿದೆ. ಅಫಿಡವಿಟ್ನಲ್ಲಿ ಸೀಮನ್ ವಿವರಿಸಿರುವ ಒಟ್ಟಾರೆ ಆಸ್ತಿ ವಿವರಕ್ಕೂ, ಅವರ ವಾರ್ಷಿಕ ಆದಾಯದ ಮಾಹಿತಿಗೂ ತಾಳೆಯಾಗುತ್ತಿಲ್ಲ.
ಸೀಮನ್ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ 2018-19ರಲ್ಲಿ ಅವರ ವಾರ್ಷಿಕ ಆದಾಯ 12,716 ರೂಪಾಯಿ ಇತ್ತು. ಅದು 2019-20ನೇ ಸಾಲಿನಲ್ಲಿ 1,000 ರೂಪಾಯಿಗೆ ಕುಸಿದಿದೆ. ಇದೇ ವೇಳೆ ಅವರ ಪತ್ನಿಯ ವಾರ್ಷಿಕ ಆದಾಯ 2018-19 ನೇ ಸಾಲಿನ 7,036 ರೂಪಾಯಿಯಿಂದ 20019-20ನೇ ಸಾಲಿನಲ್ಲಿ 72,820 ರೂಪಾಯಿಗೆ ಏರಿಕೆಯಾಗಿದೆ.

ಅವರ ಅಫಿಡವಿಟ್ ಪ್ರಕಾರ 31 ಲಕ್ಷ ರೂ ಮೌಲ್ಯದ ಚರ ಆಸ್ತಿ ಇದೆ. ಆದರೆ ಸ್ಥಿರ ಆಸ್ತಿ ಏನೂ ಇಲ್ಲ. ಅವರ ಪತ್ನಿ ಕಾಯಲ್ವಿಲಿ ಬಳಿ 63.2 ಲಕ್ಷ ಮೌಲ್ಯದ ಚರ ಹಾಗೂ 31 ಲಕ್ಷ ಮೌಲ್ಯದ ಸ್ಥಿರ ಆಸ್ತಿ ಇದೆ.
ತಮ್ಮ ಆದಾಯದ ವಿವರದಲ್ಲಿ ಆಕಸ್ಮಿಕವಾಗಿ ತಪ್ಪು ಮಾಹಿತಿ ನಮೂದಾಗಿದೆ. ಈ ಬಗ್ಗೆ ತಮ್ಮ ವಕೀಲರ ಜತೆ ಸಮಾಲೋಚನೆ ನಡೆಸಿರುವುದಾಗಿ ಸೀಮನ್ ತಿಳಿಸಿದ್ದಾರೆ. ಕಾನೂನಿನ ಪ್ರಕಾರ ನಾಮಪತ್ರ ಪರಿಶೀಲನೆಗೂ ಮುನ್ನ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ನಾಮಪತ್ರದಲ್ಲಿನ ತಪ್ಪುಗಳನ್ನು ಸರಿಪಡಿಸಲು ಈಗ ಅವಕಾಶವಿದೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications