'ಶ್ರೀಕೃಷ್ಣ ಸಂಧಾನ' ನಗೆ ನಾಟಕವನ್ನು ಮಿಸ್ ಮಾಡ್ಕೊಬೇಡಿ!
ಬೆಂಗಳೂರು, ಏಪ್ರಿಲ್ 11: ಅವಿರತ ನಾಟಕ ಮಂಡಳಿಯು 'ಶ್ರೀಕೃಷ್ಣ ಸಂಧಾನ' ಹಾಸ್ಯ ನಾಟಕವನ್ನು ಏ.14ರಂದು ಹಮ್ಮಿಕೊಂಡಿದೆ. ನಾಟಕವು ಬಸವೇಶ್ವರನಗರದಲ್ಲಿರುವ ಕೆಇಎ ಪ್ರಭಾತ್ ಕಲಾಮಂದಿರದಲ್ಲಿ ನಡೆಯಲಿದೆ.
ಸಾಕ್ಷರತೆ ಮಹತ್ವದ ಸಾರುವ ಕನ್ನಡ ನಗೆ ನಾಟಕ 'ಶ್ರೀಕೃಷ್ಣ ಸಂಧಾನ' ಈಗ ಮತ್ತೊಮ್ಮೆ ನಗರದ ರಂಗ ಮಂದಿರಕ್ಕೆ ಕಾಲಿಡುತ್ತಿದೆ. ಈಗಾಗಲೇ ಜನಪ್ರಿಯಗೊಂಡಿರುವ ಈ ನಾಟಕವನ್ನು ಅವಿರತ ಸಂಸ್ಥೆಯವರು ಪ್ರಸ್ತುತ ಪಡಿಸುತ್ತಿದ್ದಾರೆ.
ನಾಟಕವನ್ನು ಪಿ. ದೀಪಕ್ ನಿರ್ದೇಶಿಸಿದ್ದು, ವಿ.ಎಸ್. ಅಶ್ವತ್ ಅವರು ರಚಿಸಿದ್ದು, ವಿ. ರಾಮರಾವ್ ಪುಟಾಣಿ ಅವರು ಮೂಲ ನಿರ್ದೇಶನ ಮಾಡಿದ್ದಾರೆ.

ಈ ನಾಟಕವನ್ನು ಯಾರಿಗೂ ಅವಹೇಳನ ಮಾಡಲು ರಚಿಸಿರುವುದಲ್ಲ, ಕೇವಲ ಹಾಸ್ಯಕ್ಕಾಗಿಯೇ ರೂಪುಗೊಂಡ ಈ ಸರ್ವಕಾಲಿಕ ನಾಟಕದುದ್ದಕ್ಕೂ ಪ್ರೇಕ್ಷಕರಿಗೆ ನಗೆಯ ರಸದೌತಣ. ಹಳ್ಳಿಯ ಕಲಾವಿದರ ಮುಗ್ದತೆಯ ಜೊತೆಗೆ, ಅವರ ನಡುವಿನ ವೈಯುಕ್ತಿಕ ದ್ವೇಷವೂ ಸೇರಿಕೊಂಡಾಗ ಎಂತಹ ಗಂಭೀರ ಸನ್ನಿವೇಶಗಳೂ ಕೂಡ ಹೇಗೆ ಹಾಸ್ಯದ ರೂಪ ಪಡೆಯತ್ತವೆ.
ಈ ಕುರಿತು ಪ್ರತಿಬಿಂಬಿಸುವ ಈ ನಾಟಕದ ಗೆಜ್ಜೆಪೂಜೆ ಅಥವಾ ರಂಗತಾಲೀಮು ಅಥವಾ ಫೈನಲ್ ರಿಹರ್ಸಲ್ ಹೇಗಿರಬಹುದು ಎಂಬುದೇ ಇದರ ಮೂಲ ಸತ್ವ. ಅವಿರತ ತಂಡದ ಕಾರ್ಯಕರ್ತರೇ ಇಲ್ಲಿ ಬಣ್ಣ ಹಚ್ಚಿ ಅಭಿನಯಿಸುತ್ತಿರುವುದು ಈ ನಾಟಕದ ಮತ್ತೊಂದು ವಿಶೇಷ. ಏಪ್ರಿಲ್ 14 ರಂದು ಬೆಳಗ್ಗೆ 11.30 ಹಾಗೂ ಸಂಜೆ 5.30ಕ್ಕೆ ಹೀಗೆ ಒಟ್ಟು ಎರಡು ಪ್ರದರ್ಶನಗಳಿರಲಿವೆ. ನೀವೂ ಬನ್ನಿ ಈ ವಿಭಿನ್ನ ಪ್ರಯತ್ನವನ್ನು ಪ್ರೋತ್ಸಾಹಿಸಿ.
ನಾಟಕ : ಶ್ರೀ ಕೃಷ್ಣ ಸಂಧಾನ ( ಹಾಸ್ಯ ನಾಟಕ)
ರಚನೆ ಮತ್ತು ಸಂಗೀತ : ವಿ.ಎನ್. ಅಶ್ವತ್ಥ
ಮೂಲ ನಿರ್ದೇಶನ : ವಿ. ರಾಮ ರಾವ್ ಪುಟಾಣಿ
ತಂಡ : ಅವಿರತ ನಾಟಕ ಮಂಡಳಿ
ದಿನಾಂಕ : 14 ಏಪ್ರಿಲ್ 2018
ಶನಿವಾರ ಬೆಳಗ್ಗೆ 11, ಮತ್ತು 5.30 ಕ್ಕೆ
ಸ್ಥಳ : ಕೆಇಎ ಪ್ರಭಾತ್ ಕಲಾಮಂದಿರ, ಬಸವೇಶ್ವರನಗರ
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ












Click it and Unblock the Notifications