ಹೊಸ ಪ್ರಕರಣ ಇಳಿಕೆ; ಬೆಂಗಳೂರಲ್ಲಿ ಬೆಡ್ಗೆ ತಗ್ಗಿದ ಬೇಡಿಕೆ
ಬೆಂಗಳೂರು, ಮೇ 21; ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಇದರಿಂದಾಗಿ ಆಕ್ಸಿಜನ್ ಬೆಡ್ಗಳಿಗೆ ಇದ್ದ ಬೇಡಿಕೆಯೂ ಇಳಿಕೆಯಾಗಿದೆ. ಗುರುವಾರದ ವರದಿಯಂತೆ ಬೆಂಗಳೂರಿನ ಸಕ್ರಿಯ ಪ್ರಕರಣಗಳ ಸಂಖ್ಯೆ 306625.
ನಗರದಲ್ಲಿ ಆಕ್ಸಿಜನ್ ಬೆಡ್ಗಳಿಗೆ ಇರುವ ಬೇಡಿಕೆ ತಗ್ಗಿದೆ. ಆದರೆ ಹೆಚ್ಡಿಯುಎಸ್ ಬೆಡ್ಗಳಿಗೆ ಬೇಡಿಕೆ ಇದೆ. ಮೇ 20ರಂದು ಬೆಂಗಳೂರಿನಲ್ಲಿ 9409 ಹೊಸ ಪ್ರಕರಣಗಳು ದಾಖಲಾಗಿದೆ. ಈ ವಾರ ನಗರದಲ್ಲಿ ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.
'ಸರ್ಚ್ ಮೈ ಬೆಡ್' ವೆಬ್ ಸೈಟ್ನಲ್ಲಿ ಪ್ರತಿ 4 ಗಂಟೆಗೊಮ್ಮೆ ನಗರದ 200 ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್ಗಳ ಮಾಹಿತಿ ಅಪ್ಡೇಟ್ ಆಗುತ್ತದೆ. ಬುಧವಾರ ರಾತ್ರಿ ಬೆಡ್ಗಳ ಬೇಡಿಕೆ ಕುಸಿದಿದ್ದು, 118 ಬೆಡ್ ಖಾಲಿ ಇದೆ ಎಂದು ತೋರಿಸುತ್ತಿತ್ತು.
ಕೋವಿಡ್ ಕೇರ್ ಸೆಂಟರ್ಗಳಲ್ಲಿನ ಬೆಡ್ ಸೇರಿ ಸರ್ಕಾರಿ ಕೋಟಾದಲ್ಲಿರುವ 3,846 ಬೆಡ್ಗಳು ಲಭ್ಯವಿದೆ ಎಂದು ಬಿಬಿಎಂಪಿಯ ಬೆಡ್ ನಿರ್ವಹಣೆ ವೆಬ್ ಸೈಟ್ ತೋರಿಸುತ್ತಿತ್ತು. ಜನರಿಗೆ ಬೆಡ್ ಒದಗಿಸಲು 24*7 ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ.

ಎಲ್ಲಿ ಎಷ್ಟು ಬೆಡ್ ಲಭ್ಯ
ಕಿಮ್ಸ್ನಲ್ಲಿ 30 ಆಕ್ಸಿಜನ್, 22 ಸಾಮಾನ್ಯ ಬೆಡ್ ಖಾಲಿ ಇದ್ದವು. ಸಪ್ತಗಿರಿ ಆಸ್ಪತ್ರೆಯಲ್ಲಿ 25 ಆಕ್ಸಿಜನ್ ಬೆಡ್, 2 ಸಾಮಾನ್ಯ, ವೆಂಟಿಲೇಟರ್ ಬೆಡ್ ಖಾಲಿ ಇದ್ದವು ಎಂದು ಪೋರ್ಟಲ್ನಲ್ಲಿ ದಾಖಲಾಗಿತ್ತು.

ಯಾವ, ಯಾವ ಆಸ್ಪತ್ರೆ
ಕಾರಂತ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 8 ಆಕ್ಸಿಜನ್, ಟ್ರಿನಿಟಿ ಹಾರ್ಟ್ ಫೌಂಡೇಷನ್ನಲ್ಲಿ 2 ಆಕ್ಸಿಜನ್, ಪ್ರಮೋದ್ ಆಸ್ಪತ್ರೆಯಲ್ಲಿ 2 ಸಾಮಾನ್ಯ, 2 ಆಕ್ಸಿಜನ್ ಬೆಡ್ ಖಾಲಿ ಇತ್ತು. ಈ ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ಪತ್ರೆ ಬೆಡ್ಗಳು ಸಂಪೂರ್ಣ ಭರ್ತಿಯಾಗಿದ್ದವು.

ಹೆಚ್ಡಿಯುಎಸ್ ಬೆಡ್
ನಗರದಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಸೌಲಭ್ಯ ಒದಗಿಸಲು ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘಟನೆಯೊಂದರ ಸದಸ್ಯರು ಮಾತನಾಡಿದ್ದು, "ಐಸಿಯು ಮತ್ತು ವೆಂಟಿಲೇಟರ್ ಬೆಡ್ ಬೇಡಿಕೆ ತಗ್ಗಿದೆ. ಆದರೆ ಹೆಚ್ಡಿಯು ಬೆಡ್ಗಳಿಗೆ ಬೇಡಿಕೆ ಇದೆ" ಎಂದು ಹೇಳಿದ್ದಾರೆ.

ಎಲ್ಲಾ ಆಸ್ಪತ್ರೆಯಲ್ಲೂ ಇಲ್ಲ
ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ಡಾ. ಹೆಚ್. ಎಂ. ಪ್ರಸನ್ನ ಮಾತನಾಡಿದ್ದು, "ಬೆಡ್ಗಳಿಗಾಗಿ ನಗರದಲ್ಲಿ ಬೇಡಿಕೆ ಶೇ 10ರಷ್ಟು ಕಡಿಮೆ ಆಗಿರಬಹುದು. ಆದರೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಬೆಡ್ಗಳು ಲಭ್ಯವಿಲ್ಲ" ಎಂದು ಹೇಳಿದ್ದಾರೆ.
-
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications