ಲಿವನ್ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ಶ್ರುತಿ ಹರಿಹರನ್ ಮೋಡಿ ನೋಡಿ
ಬೆಂಗಳೂರು, ನವೆಂಬರ್ 14: ಲಿವನ್ ಟೈಮ್ಸ್ ಫ್ರೆಶ್ ಫೇಸ್ ನ 11ನೇ ಆವೃತ್ತಿಯಲ್ಲಿ ದಿವಾಸ್ ಕೌಶಿಕ್ ಹಾಗೂ ಸುಕನ್ಯಾ ಗೆಲುವಿನ ಕಿರೀಟ ಪಡೆದಿದ್ದಾರೆ.
ಲಿವನ್ ಟೈಮ್ಸ್ ಫ್ರೆಶ್ ಫೇಸ್ ಬೆಂಗಳೂರಿನ ಯುವ ಪ್ರತಿಭೆಗಳಿಗೆ ಅವರ ವ್ಯಕ್ತಿತ್ವ ಹಾಗೂ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಯಿತು.
ಬೆಂಗಳೂರಿನ 20 ಕಾಲೇಜು ಹಾಗೂ 1 ಓಪನ್ ಮಾಲ್ ನಲ್ಲಿ ನಡೆಸಿದ ಈ ಪ್ರತಿಭಾನ್ವಷಣೆಯ ಆಡಿಷನ್ ನಲ್ಲಿ ಕಠಿಣ ಆಯ್ಕೆಯ ಮೂಲಕ 150 ಸೆಮಿಫೈನಲಿಸ್ಟ್ ಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಟಾಪ್ 20 ಅನ್ನು ಸಿಟಿ ಫಿನಾಲೆಗಾಗಿ ಆಯ್ಕೆ ಮಾಡಲಾಯಿತು.

ಇದರಲ್ಲಿ ದಿವಾಸ್ ಕೌಶಿಕ್ ಹಾಗೂ ಸುಕಾನ್ಯ ಗಿರೀಶ್ ವಿಜೇತರಾದರು. ಲೈಂಗಿಕ ದುರ್ಬಳಕೆ ಹಾಗೂ ದಾಳಿಗೆ ಸಂಬಂಧಪಟ್ಟಂತೆ ದಿವಾಸ್ ಕೌಶಿಕ್ ಅವರ ಅದ್ಭುತವಾದ ಅಭಿನಯ ತೀರ್ಪುಗಾರರ ಮನಸೆಳೆಯಿತು. ಹಾಗೇ ಸುಕನ್ಯಾ ಗಿರೀಶ್ ಅವರು ತಮ್ಮ ಪ್ರತಿಭೆಯಿಂದ ತೀರ್ಪುಗಾರರು ಹಾಗೂ ಪ್ರೇಕ್ಷಕರ ಗಮನ ಸೆಳೆದರು.
ಸ್ಪರ್ಧಿಗಳ ಪ್ರತಿಭೆ ಹಾಗೂ ಅವರು ತಮ್ಮನ್ನು ತಾವು ಹೇಗೆ ಪ್ರಸ್ತುತಪಡಿಸಿಕೊಂಡರು ಹಾಗೇ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅಭಿಪ್ರಾಯ ಎಂಬಿತ್ಯಾದಿ ವಿಷಯಗಳ ಆಧಾರದ ಮೇಲೆ ತೀರ್ಪುಗಾರರು ಅವರನ್ನು ಆಯ್ಕೆ ಮಾಡಿದರು. ನಟಿ ಶೃತಿ ಹರಿಹರನ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಇಲ್ಲಿ ಸ್ಪರ್ಧಿಗಳನ್ನು ಅವರ ವ್ಯಕ್ತಿತ್ವ, ಪ್ರತಿಭೆ, ಜ್ಞಾನ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅವರ ಅರಿವುಗಳ ಆಧಾರದ ಮೇಲೆ ನಿರ್ಣಯ ಮಾಡಲಾಯಿತು. ಆಯ್ಕೆಯಾದ ಪ್ರತಿ ನಗರದ ಫೈನಲಿಸ್ಟ್ ಗಳು ಮುಂಬೈಯಲ್ಲಿ ನಡೆಯಲಿರುವ ನ್ಯಾಷನಲ್ ಗ್ರಾಂಡ್ ಫಿನಾಲೆಯಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ವಿಜೇತರಾದ ಒಬ್ಬ ಹುಡುಗ ಹಾಗೂ ಒಬ್ಬ ಹುಡುಗಿ ಲಿವನ್ ಟೈಮ್ಸ್ ಫ್ರೆಶ್ ಫೇಸ್ನ11ನೇ ಆವೃತ್ತಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ.
ಹಾಗೇ ಯಾರು ಈ ಆಡಿಷನ್ ಅನ್ನು ಮಿಸ್ ಮಾಡಿಕೊಂಡಿದ್ದಾರೋ ಅವರು ನೇರವಾಗಿ ಮುಂಬೈನಲ್ಲಿ ನಡೆಯಲಿರುವ ಲಿವನ್ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 11ರ ರಾಷ್ಟ್ರೀಯ ಫಿನಾಲೆಗೆ ಹೋಗಬಹುದು.
ಲಿವನ್ ಮಿಸ್ ಫ್ಯಾಬ್ ಹಾಗೂ ಸೆಟ್ ವೆಟ್ ಪ್ರಾಯೋಜಕತ್ವದ ವೈಲ್ಡ್ ಕಾರ್ಡ್ ಪ್ರವೇಶದಿಂದ ನ್ಯಾಷನಲ್ ವಿನ್ನರ್ ಆಗುವ ಅವಕಾಶವನ್ನು ನೀಡಲಿದೆ.
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ












Click it and Unblock the Notifications